Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ದುರ್ಗಿಗುಡಿಯಲ್ಲಿ ಅದ್ದೂರಿ ರಥೋತ್ಸವ | ಇಲ್ಲಿನ ವಿಶೇಷ ಏನು ಗೊತ್ತಾ!?

13
Last updated: March 14, 2025 11:49 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌

ಹೋಳಿ ಹುಣ್ಣಿಮೆಯ ಪ್ರಯುಕ್ತ ಇಂದು ನಗರದ ದುರ್ಗಿ ಗುಡಿಯಲ್ಲಿರುವ ಶ್ರೀ ದುರ್ಗಮ್ಮ ಹಾಗೂ ಮರಿಯಮ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಈ ವೇಳೆ ಶಿವಮೊಗ್ಗದ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತಾಧಿಗಳು ಈ ರಥೋತ್ಸವದಲ್ಲಿ ಭಾಗವಹಿಸಿದ್ದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಈ ದೇವಸ್ಥಾನದಲ್ಲಿ ಹಿಂದಿನಿಂದಲೂ ಈ ರಥೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಸಹ ಎಂದಿನಂತೆ ಹೋಳಿ ಹುಣ್ಣಿಮೆಯ ದಿನ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ರಥೋತ್ಸವ ದುರ್ಗಿಗುಡಿ ಶ್ರೀ ದುರ್ಗಮ್ಮ ಹಾಗೂ ಮರಿಯಮ್ಮ ದೇವಸ್ಥಾನದಿಂದ ದುರ್ಗಿಗುಡಿಯ ಮುಖ್ಯ ರಸ್ತೆಯವರೆಗೆ ಜರಗುತ್ತದೆ ನಂತರ  ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೇಲೆ ಕೂರಿಸಿ ಗಾಂಧಿ ಬಜಾರಿನ ರೇಣುಕಮ್ಮ ದೇವಾಲಯಕ್ಕೆ ಹೋಗಿ ವಾಪಸ್ ದುರ್ಗಿಗುಡಿಗೆ ಬರಲಾಗುತ್ತದೆ. ದುರ್ಗಮ್ಮನ ಬೀದಿಯ ಪ್ರತಿ ಮನೆಯಲ್ಲಿಯು ದೇವತೆಗಳಿಗೆ ಪೂಜೆ, ಆರತಿ, ಓಕುಳಿ ಮಾಡುತ್ತಾರೆ. 

 

ವಿವಿಧ ಹೂವುಗಳಿಂದ ಅಲಂಕರಿಸಿದ ಪಲ್ಲಕ್ಕಿ ಹಾಗೂ ದೇವಿಯನ್ನು ನೋಡಲು ಅಲ್ಲಿ ಜನ ಸಾಗರವೇ ನೆರೆದಿತ್ತು.  ಬೇರೆಲ್ಲಾ ದೇವಸ್ಥಾನದಲ್ಲಿ ರಥೋತ್ಸವವನ್ನು  ಬೆಳಿಗ್ಗೆ ಅಥವಾ ರಾತ್ರಿ ಸಮಯದಲ್ಲಿ ನಡೆಸಿದರೆ ಈ ದೇವಾಲಯದಲ್ಲಿ ಮಧ್ಯಾಹ್ನದ ಬಿರು ಬಿಸಿಲಿನಲ್ಲಿಯೇ ನಡೆಸುವುದು ವಿಶೇಷ.  ಆದರೆ ಅಂಥಹ ಸುಡು ಬಿಸಿಲಲ್ಲಿಯೂ ಸಹ ಜನರು ದೇವಿಗೆ ಮಡಿಲಕ್ಕಿ ತುಂಬಿ ಭಕ್ತಿ ಭಾವದಿಂದ ರಥೋತ್ಸವದಲ್ಲಿ ಪಾಲ್ಗೊಂಡರು. ಪ್ರತಿ ವರ್ಷ ನಗರದಲ್ಲಿ ಈ ಹುಣ್ಣಿಮೆ ದಿನ ದೇವಿಗೆ ಪೂಜೆ ಸಲ್ಲಿಸಿದ ನಂತರವೇ ಹೋಳಿ ಹಬ್ಬ ಆಚರಿಸುವುದು ವಾಡಿಕೆಯಾಗಿದೆ.

 

ದೇವಸ್ಥಾನದ ಹಿನ್ನಲೆ

 

ದುರ್ಗಮ್ಮ ಹಾಗೂ ಮರಿಯಮ್ಮ ದೇವಸ್ಥಾನಕ್ಕೆ ಸುಮಾರು ಸಾವಿರಾರು ವರ್ಷ ಇತಿಹಾಸವಿದೆ. ಈ ದೇವಾಲಯ ಇರುವುದರಿಂದಲೇ ಅಲ್ಲಿನ ಪ್ರದೇಶಕ್ಕೆ ದುರ್ಗಿಗುಡಿ ಎಂಬ ಹೆಸರು ಬಂದಿದೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ 5 ದಿನಗಳ ಕಾಲ ಈ ದೇವಾಲಯದಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಬಾರಿಯೂ ಸಹ ಮಂಗಳವಾರ ಶುರುವಾದ ಈ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಓಕಳಿಯ ನಂತರ ಸಂಪನ್ನವಾಗುತ್ತದೆ. ಈ ಜಾತ್ರಾ ಮಹೋತ್ಸವವನ್ನು ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ಅಚ್ಚು ಕಟ್ಟಾಗಿ ನಡೆಸಿಕೊಂಡು ಬರುತ್ತಿದೆ. ದುರ್ಗಿಗುಡಿಯಿಂದ ಮದುವೆಯಾಗಿ ಅಥವಾ ಇನ್ಯಾವುದೋ ಕಾರಣದಿಂದ ಹೊರಹೋದ ಎಲ್ಲಾ ಮಹಿಳೆಯರು ಕೂಡಾ ಈ ಜಾತ್ರೆಯಲ್ಲಿ ಭಾಗವಹಿಸುವುದು ಪ್ರತೀತಿ. ಪ್ರತಿ ಬಾರಿಯಂತೆ ಈ ಭಾರಿಯು ಸಹ ದುರ್ಗಮ್ಮ ಮರಿಯಮ್ಮ ಗೆಳೆಯರ ಬಳಗದ ವತಿಯಿಂದ ಅನ್ನ ಸಂತರ್ಪಣೆ ನೇರವೇರಿಸಲಾಯಿತು.

m srikanth
Share This Article
Facebook Whatsapp Whatsapp Telegram Threads Copy Link
Previous Article BREAKING | ಬೋರ್‌ವೆಲ್‌ ಲಾರಿ ಡಿಕ್ಕಿಯಾಗಿ ಸಾಗರದಲ್ಲಿ ಎಕ್ಸ್‌ಲ್‌ನಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು
Next Article ಶಿವಮೊಗ್ಗಕ್ಕೆ ಏರ್‌ಪೋರ್ಟ್‌ನಿಂದ ಕೇರಳಕ್ಕೆ ತೆರಳಿರುವ ಸಚಿವ ಮಧು ಬಂಗಾರಪ್ಪ! ಏನಿದು ವಿಶೇಷ ಪ್ರವಾಸ ತಿಳಿಯಿರಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

bhadra left canal
SHIVAMOGGA NEWS TODAYBHADRAVATI

bhadra left canal ಭದ್ರಾ ಎಡದಂಡೆಯಲ್ಲಿ ಸ್ಲೋಸ್​ ಗೇಟ್ ಕಾಮಗಾರಿ! ಡಾ.ಕೆ.ಪಿ.ಅಂಶುಮಂತ್ ಪರಿಶೀಲನೆ ! ಏನೆಲ್ಲಾ ನಡೆಯುತ್ತಿದೆ

By Malenadu Today
shivamogga news today ಪ್ರೊ.ಕೆ.ಚಂದ್ರಶೇಖರ್‌ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮ
SHIVAMOGGA NEWS TODAY

shivamogga news today 11-06-25 : ಪ್ರೊ.ಕೆ.ಚಂದ್ರಶೇಖರ್‌ ಅಭಿನಂದನಾ ಸಮಾರಂಭದಲ್ಲಿ ಶ್ರೀಕಂಠ ಕೂಡಿಗೆ ಅಭಿಮತ

By Prathapa thirthahalli
tunga Bagina Ceremony
SHIVAMOGGA NEWS TODAYPOLITICS

tunga Bagina Ceremony ಜುಲೈ 04 : ತುಂಬಿದ ತುಂಗೆಗೆ ಬಾಗಿನ ಅರ್ಪಿಸಿದ ಜಿಲ್ಲಾ ಬಿಜೆಪಿ

By Prathapa thirthahalli
sigandur bridge
SHIVAMOGGA NEWS TODAYSIGANDUR

sigandur bridge : ಸಚಿವರನ್ನು ಬೇಟಿ ಮಾಡಿದ ಬಿವೈಆರ್​ : 1 ವಾರದಲ್ಲಿ ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಘೋಷಣೆ ಸಾಧ್ಯತೆ​

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up