ಚಿತ್ರದುರ್ಗ ಹೈವೆಯಲ್ಲಿ ಕಾರು ಡಿಕ್ಕಿ | ತಡಸ ನಿವಾಸಿ ಸಾವು | ಹೊಳೆಹೊನ್ನೂರು PS ಲಿಮಿಟ್‌ನಲ್ಲಿ ನಡೆದಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಕೈಮರ ಚೆಕ್‌ಪೋಸ್ಟ್‌ ಸಮೀಪದಲ್ಲಿ ನಿನ್ನೆ ದಿನ ಅಪಘಾತವಾಗಿದ್ದು, ಘಟನೆಯಲ್ಲಿ ಬೈಕ್‌ ಸವಾರರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಕಾರು ಹಾಗೂ ಬೈಕ್‌ ನಡುವೆ ಈ ಅಪಘಾತ ಸಂಭವಿಸಿದೆ. ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್‌ ಆಗಿದೆ. ನಡೆದ ಘಟನೆ ಹೀಗಿದೆ. ತಡಸ ಗ್ರಾಮದ ನಿವಾಸಿ 62 ವರ್ಷದ ನಾಗರಾಜಪ್ಪ ಎಂಬವರು ಮಿಲ್ಟ್ರಿ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಚಿತ್ರದುರ್ಗ ಹೈವೆಯಲ್ಲಿ ಬರುತ್ತಿದ್ದರು. ಈ ವೇಳೆ ತಡಸದ ಕಡೆ ಬೈಕ್‌ ಟರ್ನಿಂಗ್‌ ತೆಗೆದುಕೊಳ್ಳುವಾಗ ಶಿವಮೊಗ್ಗದ ಕಡೆಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ನಾಗರಾಜಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

 

SUMMARY |   one death in holehonnuru police station limit, car accident near kaimara checkpost bhadravati tadasa , chitradurga shivamogga highway

KEY WORDS | one death in holehonnuru police station limit, car accident near kaimara checkpost bhadravati tadasa , chitradurga shivamogga highway

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು