Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಎಲೆಕ್ಟ್ರಿಕ್‌ ಕಾರು ಬ್ಯಾಟರಿ ಫಾಲ್ಟ್‌ | ದೂರುದಾರರಿಗೆ ಪರಿಹಾರ ನೀಡುವಂತೆ ಸೂಚಿಸಿದ ಆಯೋಗ

13
Last updated: February 4, 2025 9:40 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಎಲೆಕ್ಟ್ರಿಕ್‌ ಕಾರು ಬ್ಯಾಟರಿ ಫಾಲ್ಟ್‌ ಸಂಬಂಧಿಸಿದ ದೂರನ್ನ ಸಮಪರ್ಕವಾಗಿ ಇತ್ಯರ್ಥ ಪಡಿಸದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಾರನ್ನು ಖರೀದಿಸಿದ ಸಂಸ್ಥೆಗೆ ಪರಿಹಾರ ನೀಡುವಂತೆ ಸೂಚಿಸಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಪ್ರಕರಣ

ಶಿವಮೊಗ್ಗದ ಗ್ರಾಹಕರೊಬ್ಬರು 2023 ರಲ್ಲಿ ಶಿವಮೊಗ್ಗ ನಗರದ ಮೋಟಾರ್ಸ್‌ ಕಂಪನಿಯೊಂದರಲ್ಲಿ ಇವಿ ಕಾರನ್ನು 10,35,497/- ಪಾವತಿಸಿ ಖರೀದಿಸಿದ್ದರು. ಜೊತೆಯಲ್ಲಿ ₹8,700 ರೂಪಾಯಿ ಕಟ್ಟಿ 3 ವರ್ಷಗಳ ಇ-ಶೀಲ್ಡ್ ಮೈನ್ಟೇನೆನ್ಸ್ ಪ್ಲಾನ್‌ನ್ನು ಪಡೆದಿದ್ದರು. 

ಈ ನಡುವೆ ಕಾರು ಖರಿದೀಸಿ 15 ದಿನಗಳಲ್ಲೇ ಅದರ ಬ್ಯಾಟರಿ ಡೌನ್‌ ಆಗಿರುವುದು ಗ್ರಾಹಕರ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕಂಪ್ಲೆಂಟ್‌ ಮಾಡಿದ ಬೆನ್ನಲ್ಲೆ ಮೋಟಾರ್ಸ್‌ ಕಂಪನಿ ಹೊಸ ಬ್ಯಾಟರಿ ನೀಡಿದೆ. ಆದರೆ ಆರು ತಿಂಗಳಿನಲ್ಲಿ ಮತ್ತೆ ಬ್ಯಾಟರಿ ಕಂಪ್ಲೆಂಟ್‌ ಶುರುವಾಗಿದೆ. ಆದರೆ ಈ ಸಲ ಸಮಸ್ಯೆಯನ್ನು ಕಂಪನಿಯವರು ಸರಿಪಡಿಸಿ ನೀಡಲಿಲ್ಲ. ಪದೇ ಪದೇ ದೂರು ಕೊಟ್ಟರೂ ಸಮಸ್ಯೆ ಸರಿಪಡಿಸಿಲ್ಲ ಎಂದು ಆರೋಪಿಸಿ ಗ್ರಾಹಕರು ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. 

ಇದರ ವಿಚಾರಣೆ ಡನೆಸಿದ ಆಯೋಗವು ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿತ್ತು. ಈ ವೇಳೆ ಸಂಬಂಧಿಸಿದ ಕಂಪನಿ ದೂರುದಾರರು ಕಾರನ್ನು ಮ್ಯಾನುವಲ್ ಪ್ರಕಾರ ಸರಿಯಾದ ರೀತಿಯಲ್ಲಿ ಚಲಾಯಿಸದೇ ಇರುವುದರಿಂದ ಈ ಸಮಸ್ಯೆಯುಂಟಾಗಿರುತ್ತದೆ ಹಾಗೂ ಇದು ತಯಾರಿಕಾ ದೋಷವಲ್ಲವೆಂದು ಮತ್ತು ಕಾರನ್ನು 10000 ಕ್ಕೂ ಹೆಚ್ಚು ಕಿ.ಮಿ. ಚಲಾಯಿಸಿರುವುದರಿಂದ ಹೊಸ ಕಾರನ್ನು ನೀಡಲು ಬರುವುದಿಲ್ಲ. ತಮ್ಮ ಕಡೆಯಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು./ 

ಇನ್ನೂ  ಅರ್ಜಿದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಬ್ಯಾಟರಿಯಲ್ಲಿ ಲೋಪವಿರುವುದು ಮತ್ತು ಹಲವಾರು ಬಾರಿ ಕಾರನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡದೇ ಇರುವುದು ಎದುರುದಾರರು ಸೇವಾ ನ್ಯೂನತೆ ಎಸಗಿರುದನ್ನು ಪರಿಗಣಿಸಿದ ಆಯೋಗವೂ, ಕಂಪನಿ ತಮ್ಮದೇ ಖರ್ಚಿನಲ್ಲಿ ದೋಷಮುಕ್ತ ಬ್ಯಾಟರಿಯನ್ನು ಆಯೋಗ ಆದೇಶದ ದಿನಾಂಕದಿಂದ 45 ದಿನಗಳೊಳಗಾಗಿ ಬದಲಿಸಿಕೊಡಬೇಕು ಎಂದು ಸೂಚಿಸಿದೆ. ಅಲ್ಲದೆ ರೂ. 25,000/-ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ. 10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.

SUMMARY |  Shivamogga District Consumer Disputes Redressal Commission has directed the company   to provide compensation after a complaint related to an electric car battery fault was not adequately resolved.

KEY WORDS | Shivamogga District Consumer Disputes Redressal Commission, compensation related to an electric car battery fault 

Share This Article
Facebook Whatsapp Whatsapp Telegram Threads Copy Link
Previous Article ವಿನೋಬನಗರ ಲಿಮಿಟ್ಸ್‌ನಲ್ಲಿ ಗಾಂಜಾ ಮಾರುತ್ತಿದ್ದವರಿಗೆ ಶಾಕ್‌ | ಸಾಗರದ ಓರ್ವ ಸೇರಿ ಇಬ್ಬರು ಅರೆಸ್ಟ್‌
Next Article ಗಾಂಧಿ ಬಜಾರ್‌, ರಾಮಣ್ಣಶ್ರೇಷ್ಟಿ ಪಾರ್ಕ್‌ , ಊರಗಡೂರು ಸೇರಿದಂತೆ ನಾಳೆ ಹಲವೆಡೆ ಪವರ್‌ ಕಟ್
Leave a Comment

Leave a Reply Cancel reply

Your email address will not be published. Required fields are marked *

You Might Also Like

ವೈಕಂಠ ಏಕಾದಶಿ | ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಏನೇನು ನಡೆಯಲಿದೆ | ಇಲ್ಲಿದೆ ವಿವರ

By 13
Positive Homeopathy Service Deficiency: Shivamogga Consumer Forum Orders Compensation
COURT LIVESHIMOGA NEWS LIVE

Homeopathy Service Deficiency /₹40,000 ಪಡೆದರೂ ಸಿಗದ ಚಿಕಿತ್ಸೆ/ ಒಂದು ಕಂಪ್ಲೆಂಟ್​ನಿಂದ ಏನಾಯ್ತು ಗೊತ್ತಾ

By ajjimane ganesh
IGNOU Admissions End August 15
INFORMATION NEWS

IGNOU ಪ್ರವೇಶಕ್ಕೆ ಆಗಸ್ಟ್ 15 ಕೊನೆಯ ದಿನ: ಏನೆಲ್ಲಾ ವಿಷಯ ಕಲಿಯಬಹುದು!

By ajjimane ganesh

ಶಿವಣ್ಣರ ಆಪರೇಷನ್‌ ಸಕ್ಸಸ್‌ | ವೈದ್ಯರು ಹೇಳಿದ್ದೇನು? ಇಲ್ಲಿದೆ ಸಚಿವರೇ ನೀಡಿದ ಮಾಹಿತಿ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up