ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025: ಆಗಾಗ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಪೊಲೀಸ್ ಹೆಸರಿನಡಿಯ ಕಳ್ಳತನ ಪ್ರಕರಣ ಇದೀಗ ಸಾಗರ ಪೇಟೆಯಲ್ಲಿ ನಡೆದಿದೆ. 5 ದಿನಗಳ ಹಿಂದೆ ನಡೆದ ಘಟನೆಯೊಂದರ ಬಗ್ಗೆ ತಡವಾಗಿ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ 23 ನೇ ತಾರೀಖು ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, woman in sagara town

ನಾನೂ ಸಹ ಆಗ್ತೀನಿ! ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ!
23 ನೇ ತಾರೀಖು ದಿನಸಿ ತರಲು ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಾನು ಪೊಲೀಸ್ ಆಫೀಸರ್. ಈ ಭಾಗದಲ್ಲಿ ನಿನ್ನೆ ಮೊನ್ನೆಯಲ್ಲಾ ತುಂಬಾ ಸರ ಕಳ್ಳತನವಾಗಿದೆ, ನಿಮ್ಮ ಚಿನ್ನದ ಸರವನ್ನು ತೆಗೆದು ಎತ್ತಿಟ್ಟುಕೊಳ್ಳಿ ಎಂದು ಹೇಳಿದ್ದ.
ದೂರುದಾರ ಮಹಿಳೆ ಆತನ ಮಾತನ್ನು ನಂಬಿ, ಕುತ್ತಿಗೆಯಲ್ಲಿದ್ದ ಸರವನ್ನು ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುವಷ್ಟರಲ್ಲಿ, ಬೈಕ್ನಲ್ಲಿ ಕುಳಿತಿದ್ದ ಅಪರಿಚಿತ, ಮಹಿಳೆಯ ಕುತ್ತಿಗೇನೆ ಕೈ ಹಾಕಿ ಚಿನ್ನದ ಸರಗಳನ್ನ ಎಳೆದಿದ್ದಾನೆ. ಒಟ್ಟಾರೆಯಾಗಿ 47 ಗ್ರಾಂ ತೂಕದ, 4,15,000/- ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನ ಕಿತ್ತುಕೊಂಡ ಆರೋಪಿ, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯ ತಲಾಶ್ ನಡೆಸ್ತಿದ್ದಾರೆ.

ನಾಳೆ ದಿನ ಶಿವಮೊಗ್ಗದ ಸುಮಾರು ಕಡೆ ನೀರು ಬರಲ್ಲ! ಕಾರಣ ಇಲ್ಲಿದೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
