ಫಿಕ್ಸ್ ಆಗ್ತಿದ್ಯಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ! ಶಿವಣ್ಣ ದಂಪತಿಯ ಪ್ರತಿಕ್ರಿಯೆ ಏನು ಗೊತ್ತಾ?
Who is the Congress candidate from Shivamogga Lok Sabha constituency? Do you know what Shivanna's reaction was?
KARNATAKA NEWS/ ONLINE / Malenadu today/ Jun 23, 2023 SHIVAMOGGA NEWS
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಎದುರಾಳಿ ಯಾರು? ಈ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಹುಡುಕುತ್ತಿದೆ. ಒಂದು ಕಡೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜ್ ಕುಮಾರ್ ರನ್ನ ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ನಡೆಸ್ತಿರುವುದು ರಾಜಕೀಯ ಅಖಾಡದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್, ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ರವರನ್ನ ಭೇಟಿಯಾಗಿದ್ದಾರೆ.
ಈ ಎರಡು ಭೇಟಿಗಳು ಕೇವಲ ಕ್ಯಾಶ್ಯುವಲ್ ವಿಸಿಟ್ ಎಂದು ಹೇಳುತ್ತಿದ್ದರೂ ಸಹ ದಂಪತಿಗಳ ಭೇಟಿ ಹಾಗೂ ಮಾತುಕತೆ ಕುತೂಹಲ ಕೆರಳಿಸುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್ ರವರ ಭೇಟಿಯ ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್ರಿಗೆ ಮಾದ್ಯಮದ ಕಡೆಯಿಂದ ಇದು ಲೋಕಸಭಾ ಚುನಾವಣೆಯ ಸಿದ್ದತೆಯೇ ಎಂಬ ಪ್ರಶ್ನೆ ಎದುರಾಗಿತ್ತು.
ಪ್ರಶ್ನೆಗೆ ಉತ್ತರಿಸಿದ ಗೀತಾ ಶಿವರಾಜ್ ಕುಮಾರ್ ಸಿದ್ದತೆ ಅಂತೇನೂ ಇಲ್ಲ. ಆದರೆ ಈ ಬಗ್ಗೆ ತಮ್ಮ ತಮ್ಮ ಹಾಗೂ ಅವರು(ಶಿವರಾಜ್ ಕುಮಾರ್) ಹಾಗೂ ಪಕ್ಷ ಪ್ರಾಪರ್ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ರು. ಇದೇ ಮೊದಲ ಸಲ ಇಂತಹದ್ದೊಂದು ಪ್ರತಿಕ್ರಿಯೆಯನ್ನ ಗೀತಾ ಶಿವರಾಜ್ ಕುಮಾರ್, ನೀಡಿದ್ಧಾರೆ. ಇನ್ನೂ ಶಿವಣ್ಣ ಕೂಡ , ಡಿಕೆ ಶಿವಕುಮಾರ್ರವರ ಭೇಟಿಯನ್ನು ಕ್ಯಾಶ್ಯುವಲ್ ವಿಸಿಟ್ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರು ಅದಾಗಲೇ ತಮ್ಮ ತಂದೆಯ ನೆರಳಿನಿಂದ ಹೊರಬಂದು ತಮ್ಮದೆ ಆದ ವೇದಿಕೆಯಲ್ಲಿ ಅಭಿವೃದ್ಧಿ ಕೆಲಸಗಳ ಉದ್ಘಾಟನೆಯ ದಿನಾಂಕವನ್ನು ಸರತಿ ಸಾಲಿನಲ್ಲಿ ಘೋಷಿಸುತ್ತಿದ್ಧಾರೆ. ಅವರ ಎದುರು ಕಾಂಗ್ರೆಸ್ ಪಕ್ಷ ಗೀತಾ ಶಿವರಾಜ್ ಕುಮಾರ್ರನ್ನ ಕಣಕ್ಕಿಳಿಸುತ್ತಾ? ಅಥವಾ ಸ್ವತಃ ಶಿವರಾಜ್ ಕುಮಾರ್ರವರನ್ನೆ ರಾಜಕಾರಣಕ್ಕೆ ಕರೆತಂದು ಸ್ಪರ್ದೆಗೆ ಶ್ರೀಕಾರ ಹಾಕಿಸುತ್ತಾ? ಅಥವಾ ಸದ್ಯ ಚರ್ಚೆಯಲ್ಲಿರುವಂತೆ ಕಿಮ್ಮನೆ ರತ್ನಾಕರ್ರವರ ಹೆಸರು ಮುನ್ನೆಲೆಗೆ ಬರುತ್ತಾ? ಇದೆಲ್ಲದರ ಆಚೆಗೆ ಅಚ್ಚರಿ ಅಭ್ಯರ್ಥಿ ಆಯ್ಕೆಯಾಗುತ್ತಾರಾ? ಅಭಯಹಸ್ತದಲ್ಲಿನ ಭವಿಷ್ಯದಲ್ಲಿ ಉತ್ತರ ಸಿಗಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ದುಡ್ಡನ್ನ ಲಪಟಾಯಿಸಿ ಎಸ್ಕೇಪ್ ಆದ ಸಿಬ್ಬಂದಿ! ಏನಿದು ಪ್ರಕರಣ! ನಡೆದಿದ್ದೆಲ್ಲಿ
ಶಿವಮೊಗ್ಗ/ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಬ್ಯಾಂಕ್ಗೆ ಕಟ್ಟಬೇಕಿದ್ದ ಧರ್ಮಸ್ಥಳ ಸಂಘದ ಹಣವನ್ನು ಕದ್ದು ಪರಾರಿಯಾದ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
ಏನಿದು ಪ್ರಕರಣ?
ದಿನಾಂಕ 20-06-2023 ರಂದು ನಡೆ ಪ್ರಕರಣ ಇದಾಗಿದೆ. ಈ ಸಂಬಂಧ ತಾಲ್ಲೂಕು ಯೋಜನಾಧಿಕಾರಿ ದೂರು ನೀಡಿದ್ಧಾರೆ. ಕರಾವಳಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದೆ. ಶಿವಮೊಗ್ಗದಲ್ಲಿಯು ಸುಮಾರು 2750 ಸಂಘಗಳನ್ನು ರಚಿಸಲಾಗಿದೆ. ಪ್ರತಿವಾರದ ಸಭೆಯ ನಂತರ ಸಂಘದ ಸದಸ್ಯರು ಉಳಿತಾಯ ನಿದಿ ಹಾಗೂ ಸಾಲ ಮರುಪಾವತಿಯನ್ನು ಮಾಡುತ್ತಾರೆ. ಆ ಹಣವನ್ನು ಬ್ಯಾಂಕ್ಗೆ ಪಾವತಿಸಲು ಯೋಜನೆಯಲ್ಲಿ ಗ್ರಾಹಕರ ಸೇವಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥೆಯಡಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಅವರ ಮೂಲಕ ಸಂಘದ ಹಣವನ್ನು ಸ್ವೀಕರಿಸಿ ಬ್ಯಾಂಕ್ಗೆ ಕಟ್ಟಬೇಕು.
ಆದರೆ ಹಸೂಡಿಯಲ್ಲಿ ಅಲ್ಲಿಯ ನಿವಾಸಿ ಪರಮೇಶ್ವರ್ ಕಳೆದ ಇಪ್ಪತ್ತನೇ ತಾರೀಖು ತಾನು ಸಂಗ್ರಹಿಸಿದ್ದ 2,70.209/- (ಎರಡು ಲಕ್ಷದ ಎಪ್ಪತ್ತು ಸಾವಿರದ ಇನ್ನೂರ ಒಂಭತ್ತು) ರೂ ಗಳನ್ನು ಬ್ಯಾಂಕ್ ಕಟ್ಟಿಲ್ಲ. ಇದರಲ್ಲಿ 1,880/- ರೂ ಗಳನ್ನು ಡ್ರಾವರ್ ನಲಿ ಬಿಟ್ಟು ಉಳಿದ 2.68,329 ರೂಪಾಯಿಯನ್ನು ತೆ್ಗೆದುಕೊಂಡು ಹೋಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು,.IPC 1860 (U/s-420) ಅಡಿಯಲ್ಲಿ ಕೇಸ್ ದಾಖಲಾಗಿದೆ.