ಶಿವಮೊಗ್ಗ ನಗರ ನಾಗರಿಕರಿಗೆ ಸೂಚನೆ/ ನಾಳೆ ಸಿಟಿಯಲ್ಲಿ ನೀರು ಬರೋದು ಡೌಟ್! ಕಾರಣ ಇಲ್ಲಿದೆ

Water supply in Shivamogga city to be disrupted tomorrow

ಶಿವಮೊಗ್ಗ ನಗರ ನಾಗರಿಕರಿಗೆ ಸೂಚನೆ/ ನಾಳೆ ಸಿಟಿಯಲ್ಲಿ ನೀರು ಬರೋದು ಡೌಟ್! ಕಾರಣ ಇಲ್ಲಿದೆ

KARNATAKA NEWS/ ONLINE / Malenadu today/ Apr 26, 2023 GOOGLE NEWS


ಶಿವಮೊಗ್ಗ ಶಿವಮೊಗ್ಗ ನಗರ ನಾಗರಿಕರಿಗೆ ಜಲ ಮಂಡಳಿ ಶಾಕಿಂಗ್ ನ್ಯೂಸ್​ ಕೊಟ್ಟಿದೆ. ನಾಳೆ ಅಂದರೆ, ಏಪ್ರಿಲ್​ 27 ರಂದು ಶಿವಮೊಗ್ಗ ನಗರದಲ್ಲಿ ನೀರು ಪೂರೈಕೆ ಸಮರ್ಪಕವಾಗಿ ಆಗಲ್ಲ ಎಂದು ಪ್ರಕಟಣೆಯಲ್ಲಿ  ತಿಳಿಸಿದೆ. 



ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಕಾರಣ!?

:ಗಾಜನೂರು ಮೂಲ ಸ್ಥಾವರದಲ್ಲಿ ಹಾಗೂ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ನಿರ್ವಹಣಾ ಕಾಮಗಾರಿ  ಕೈಗೊಳ್ಳಲಾಗುತ್ತಿದೆ. 



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 



ಈ ಕಾರಣಕ್ಕೆ  ದಿ: 27/04/2023 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯವಾಗಲಿದೆ 

ಹೀಗಾಗಿ  ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಶಿವಮೊಗ್ಗ ನಗರದ ಬುದ್ಧಾನಗರ  ಸಮೀಪ ಅಸ್ವಸ್ಥಗೊಂಡಿದ್ದ ಅಪರಿಚಿತ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.  

ಏನಾಗಿತ್ತು?

ಶಿವಮೊಗ್ಗದ ಬುದ್ಧನಗರದ ಹತ್ತಿರದಲ್ಲಿ ಸುಸ್ತಾದಂತೆ ಬಿದ್ದಿದ್ದ ಸುಮಾರು 30 ರಿಂದ 35 ವರ್ಷದ ಪವಿತ್ರ ಎಂಬ  ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಆದರೆ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 

ಮೃತರ ಗುರುತು

ಮೃತ ಮಹಿಳೆಯು ಸುಮಾರು 05 ಅಡಿ 07 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು ಹೊಂದಿದ್ದಾರೆ. 

ತಲೆಯಲ್ಲಿ ಕಪ್ಪು ಬಣ್ಣದ 08 ಇಂಚು ಕೂದಲು, ನೀಲಿ ಬಣ್ಣದ ನೈಟಿ  ಧರಿಸಿರಿರುತ್ತಾರೆ.  ಈ ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 

08182-261414/9611761255 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.





Malenadutoday.com Social media