thirthahalli : ಕವಿತಾ ಎಂ ಜೋಯ್ಸ್​ ನಿಧನ, ಆರಗ ಜ್ಞಾನೇಂದ್ರ ಸಂತಾಪ

ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಕವಿತಾ ಎಂ ಜೋಯ್ಸ್​ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ಸಾವನ್ನಪ್ಪಿದರು. ಇವತ್ತು ಬೆಳಗ್ಗೆ ತೀರ್ಥಹಳ್ಳಿ ತಾಲ್ಲೂಕು ಕನ್ನಂಗಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ  , ಬಂಧು ಮಿತ್ರರು , ನೆರೆಹೊರೆಯರು ಕುಟುಂಬಸ್ಥರು ಮೃತರ ಆತ್ಮಕ್ಕೆ ಶಾಂತಿ ಕೋರಿದರು. 

thirthahalli : ಕೃಷಿಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಕವಿತಾ ಎಂ ಜೋಯ್ಸ್​!

ಪಟ್ಟಣದ ಬಾಳೆಬೈಲು ಬಡಾವಾಣೆ ನಿವಾಸಿಯಾಗಿದ್ದ ಇವರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಟಾಸ್ ಸಂಸ್ಥೆ ಅಧ್ಯಕ್ಷ,  ಶಾಸಕ ಆರಗ ಜ್ಞಾನೇಂದ್ರ ಟಾಸ್ ಸಂಸ್ಥೆಯ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.

Leave a Comment