shivamogga : ಶಿವಮೊಗ್ಗ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ರವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಈ ಹಿನ್ನಲೆ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಲು ವಿವಿಧ ರಾಜಕಾರಣಿಗಳು ಸೇರಿದಂತೆ ಪ್ರಮುಖರು ಭಾಗವಹಿಸುತ್ತಿದ್ದಾರೆ. ಇದರ ನಡುವೆ ಅಚ್ಚರಿ ಎಂಬಂತೆ 103 ವರ್ಷದ ಅಜ್ಜಿಯೊಬ್ಬರು ತುಮಕೂರಿನ ತಿಪಟೂರಿನಿಂದ ಮಂಜುನಾಥ್ ರಾವ್ ರವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಬಂದಿದ್ದಾರೆ.
shivamogga : ತುಮಕೂರಿನಿಂದ ಬಸ್ಸಿನಲ್ಲಿ ಬಂದ ಅಜ್ಜಿ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಆದ ಉಗ್ರರ ಗುಂಡಿನ ದಾಳಿಯನ್ನು ಟಿವಿಯಲ್ಲಿ ನೋಡಿದ 103 ವರ್ಷದ ಶಿವಮ್ಮ ಅಜ್ಜಿ ಮಂಗಳವಾರ ತುಮಕೂರಿನ ತಿಪಟೂರಿನಿಂದ ಬಸ್ಸಿನಲ್ಲಿ ಶಿವಮೊಗಕ್ಕೆ ಆಗಮಿಸಿದ್ದಾರೆ. ನಂತರ ಮಂಜುನಾಥ್ ಪತ್ನಿ ಪಲ್ಲವಿಯವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅಜ್ಜಿ ಸೈನಿಕರಿಗೆ ಬಲ ನೀಡಲು ಅಲ್ಲಿಂದ ಬಂದಿದ್ದೇನೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಪಾಕಿಸ್ತಾನವನ್ನು ಸುಟ್ಟು ಹಾಕಬೇಕು. ಇಂದು ಈ ರೀತಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ ಏನು ಗತಿ. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಿ ಎಂದು ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್ ಪತ್ನಿ ಪಲ್ಲವಿ. ಈ ದುಃಖದ ಸಂದರ್ಭದಲ್ಲಿ ಆ ಅಜ್ಜಿ 103 ವರ್ಷದ ಅಜ್ಜಿ ಅಲ್ಲಿಂದ ಬಂದು ಸಾಂತ್ವನ ಹೇಳಿದಾಗ ಏನು ಹೇಳಬೇಕೆಂದು ತಿಳಿಯಲಿಲ್ಲ ಎಂದರು.