ಕೊಡೆ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಗುಮ್ಮಿದ ಗೂಳಿ/ ತೀರ್ಥಹಳ್ಳಿ ವಿಡಿಯೋ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದಲ್ಲಿ ಗೂಳಿಯೊಂದು ಪುಟ್​ಪಾತ್​ ಮೇಲೆ ನಿಂತಿದ್ದ ವ್ಯಕ್ತಿಗೆ ತಿವಿದ ಘಟನೆಯ ವಿಡಿಯೋವೊಂದು ಹೊರಬಿದ್ದಿದೆ.ತೀರ್ಥಹಳ್ಳಿ ಪಟ್ಟಣ್ಣದಲ್ಲಿ ಬಿಡಾಡಿ ಜಾನುವಾರು ಓಡಾಡಿಕೊಂಡಿವೆ.  ಈ ಜಾನುವಾರನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಈಗಾಗಲೇ ಸ್ಥಳಿಯರು, ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಬಿಜೆಪಿ ಸೇರಿದ ಡಾ.ಧನಂಜಯ್​ ಸರ್ಜಿ, ಕೆ.ಎಸ್.​ ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ ಆರಂಭ

ಇದರ ನಡುವೆ ಪಟ್ಣಣದಲ್ಲಿ ಪುಟ್​ಪಾತ್ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬಿಡಾಡಿ ಗೂಳಿಯೊಂದು ಹಠಾತ್ ದಾಳಿ ಮಾಡಿ ತಿವಿದಿದೆ. ಘಟನೆಯಲ್ಲಿ ಹಿರಿಯ ವ್ಯಕ್ತಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಬಂದು ಗೂಳಿಯನ್ನು ಓಡಿಸಿದ್ದಾರೆ. ಹಿರಿಯರಿಗೆ ನೀರು ಕೊಟ್ಟು ಸಾವರಿಸಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಥಳೀಯರ ಮೊಬೈಲ್​ಗಳಲ್ಲಿ ಹರಿದಾಡುತ್ತಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link