ಪೊಲೀಸ್ ಐಡಿ ಕಾರ್ಡ್ ತೋರಿಸಿ ಅಜ್ಜಿಯ ಸರ ಕದ್ದ ಕಳ್ಳರು
ಇಷ್ಟೊಂದು ಬಂಗಾರ ಹಾಕಿಕೊಂಡು ಏಕೆ ಓಡಾಡುತ್ತಿದ್ದೀರಿ, ಕಳ್ಳತನಗಳು ನಡೆಯುತ್ತಿವೆ, ಬಿಚ್ಚಿಟ್ಟುಕೊಂಡು ಬ್ಯಾಗ್ನಲ್ಲಿ ಹಾಕಿಕೊಳ್ಳಿ ಎಂದು ಮಹಿಳೆಗೆ ಬೈಕ್ನಲ್ಲಿ ಬಂದವರು ಹೇಳಿದ್ದಾರೆ.
ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದ ಸರಗಳ್ಳತನ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇಲ್ಲಿನ ಜಗದಾಂಬ ಬೀದಿಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ
ಸ್ಥಳೀಯ ನಿವಾಸಿಯೊಬ್ಬರ ಬಳಿ, ಬೈಕ್ನಲ್ಲಿ ಬಂದಿದ್ದ ಇಬ್ಬರು ತಾವಿಬ್ಬರು ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿದ್ದಾರೆ. ಅದು ನಕಲಿ ಎಂಬುದು, ನಿವಾಸಿಗೆ ತಿಳಿದು ಬರಲಿಲ್ಲ.
ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ
ಹಿರಿಯರಿದ್ದೀರಿ, ಇಷ್ಟೊಂದು ಬಂಗಾರ ಹಾಕಿಕೊಂಡು ಏಕೆ ಓಡಾಡುತ್ತಿದ್ದೀರಿ, ಕಳ್ಳತನಗಳು ನಡೆಯುತ್ತಿವೆ, ಬಿಚ್ಚಿಟ್ಟುಕೊಂಡು ಬ್ಯಾಗ್ನಲ್ಲಿ ಹಾಕಿಕೊಳ್ಳಿ ಎಂದು ಮಹಿಳೆಗೆ ಬೈಕ್ನಲ್ಲಿ ಬಂದವರು ಹೇಳಿದ್ದಾರೆ.
ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ
ಈ ವೇಳೆ ಹಿರಿಯ ಮಹಿಳೆಯು ಆಯ್ತು ಮನೆಗೆ ಹೋಗಿ ಬಿಚ್ಚಿಡುತ್ತೇನೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದ ಬೈಕ್ ಸವಾರರು, ಇಲ್ಲಿಯೇ ಒಡವೆಗಳನ್ನು ತೆಗೆದು ಬ್ಯಾಗ್ಗೆ ಹಾಕಿಕೊಳ್ಳಿ ಎಂದು ಖುದ್ದು ಅವರೇ ಸಹಾಯ ಮಾಡುವಂತೆ ಮಾಡಿ, ಬ್ಯಾಗ್ಗೆ ಹಾಕಬೇಕಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ
ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ
ಸದ್ಯ ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ (kote police station) ಕೇಸ್ ದಾಖಲಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ (Shivamogga city) ಸರಗಳ್ಳತನದ ಪ್ರಕರಣಗಳು ವರದಿಯಾಗಿಲ್ಲ. ಇದೀಗ ವರದಿಯಾಗಿದ್ದು, ಶಿವಮೊಗ್ಗಕ್ಕೆ ಮತ್ತೆ ಸರಗಳ್ಳರ ಗ್ಯಾಂಗ್ (chain snatching) ಎಂಟ್ರಿಕೊಟ್ಟಿದ್ಯಾ ಎಂಬ ಅನುಮಾನ ಮೂಡುತ್ತಿದೆ.
ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್/ EXCLUSIVE JP REPORT
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link