ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ,

Leopard Attack

ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮುಳುಕೊಪ್ಪ ತಾಂಡದಲ್ಲಿ ನಿನ್ನೆ ರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ. ಮುಳುಕೊಪ್ಪ ತಾಂಡದ ನಿವಾಸಿಯೊಬ್ಬರ ಮನೆಯ ಮುಂದೆ ಕಟ್ಟಿದ್ದ ನಾಯಿ ಮೇಲೆ ರಾತ್ರಿ ವೇಳೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಚಿರತೆಯ ದಾಳಿಗೆ ನಾಯಿ ಜೋರಾಗಿ ಕೂಗಿಕೊಂಡಿದೆ. ನಾಯಿ ಕೂಗುವ ಸದ್ದು ಕೇಳಿ ಮನೆಯವರು ತಕ್ಷಣವೇ ಹೊರಗೆ ಬಂದು ಲೈಟ್ ಹಾಕಿದಾಗ ಚಿರತೆ ಅಲ್ಲಿಂದ ಓಡಿ ಹೋಗಿದೆ. Leopard Attack  

ಜೀಪ್​ಗೆ ಹಾನಿ, ಆಯೋಜಕರ ಮೇಲೆ ಕೇಸ್/ 15 ದಿನದಲ್ಲಿ 2 ಸಲ ಚಿರತೆ ದಾಳಿ/ ಬೈಕ್​ ಅಪಘಾತ, ಇಬ್ಬರ ಸಾವು!

KFD Fatality Shivamogga Round up

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 20 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳನ್ನು ಸಂಕ್ಷಿಪ್ತವಾಗಿ ನೀಡುವ ಇವತ್ತಿನ ಚಟ್​ಪಟ್ ನ್ಯೂಸ್​  ಡಿವೈಎಸ್​ಪಿ ವಾಹನಕ್ಕೆ ಹಾನಿ ಕೇಸ್​ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾಸೂರು ಸರ್ಕಲ್ ಬಳಿ ಗಣಪತಿ ಮೆರವಣಿಗೆ ವೇಳೆ  ಸಿಡಿಸಿದ ಪಟಾಕಿಯೊಂದು ನೇರವಾಗಿ ಡಿವೈಎಸ್‌ಪಿ ಅವರ ಪೊಲೀಸ್ ಜೀಪಿಗೆ ತಗುಲಿ ಅದರ ಗಾಜು ಒಡೆದಿತ್ತು. ಈ ಸಂಬಂಧ  ಮೆರವಣಿಗೆ ಆಯೋಜಕರ ವಿರುದ್ಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡಿವೈಎಸ್‌ಪಿ ಅವರು ಬಂದೋಬಸ್ತ್ ನಲ್ಲಿದ್ದ … Read more