ಭದ್ರಾವತಿ ಬಡಿದಾಟ | ಜೀರೋ ಟಾಲರೆನ್ಸ್ ಎಂದು ಎಚ್ಚರಿಕೆ ನೀಡಿದ ಎಸ್​ಪಿ ಜಿ.ಕೆ. ಮಿಥುನ್ ಕುಮಾರ್!

Malenadu Today

SHIVAMOGGA |  Dec 11, 2023  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ನಡೆಯುತ್ತಿದೆ ಎನ್ನಲಾದ ಇಸ್ಪೀಟು, ಕ್ರಿಕೆಟ್ ಬೆಟ್ಟಿಂಗ್, ಓಸಿ , ಮಟ್ಕಾ ದಂಧೆ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ವಿಚಾರದಲ್ಲಿ ಯಾವುದೇ ಮುಲಾಜು ನೋಡುವುದಿಲ್ಲ. ಜಿರೋ ಟಾಲರೆನ್ಸ್​ನಲ್ಲಿ ಇಂತಹ ಸಂಘಟಿತ ಅಪರಾಧಗಳನ್ನು ಭೇದಿಸಲಾಗುವುದು ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಮಾಹಿತಿ ಇದ್ದರೇ ಪೊಲಿಸ್ ಇಲಾಖೆಗೆ ನೀಡಿ ಎಂದಿದ್ದಾರೆ. 

ಶಿವಮೊಗ್ಗದಲ್ಲಿ ಈ ಸಂಬಂಧ ಮಾತನಾಡಿದ ಅವರು, ಭದ್ರಾವತಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತನ ಕಾರು ಒಡೆದ ಪ್ರಕರಣದಲ್ಲಿ ಮೂವರನ್ನ ಅರೆಸ್ಟ್ ಮಾಡಲಾಗಿದೆ ಎಂದಿದ್ದಾರೆ. ಈ ಘಟನೆ ಏತಕ್ಕಾಗಿ ನಡೆದಿದೆ ಎಂಬುದು ವಿಚಾರಣಾ ಹಂತದಲ್ಲಿದೆ ಎಂದ ಅವರು ತನಿಖೆ ಬಳಿಕ ಮಾಹಿತಿ ನೀಡಲಾಗುವುದು ಎಂದಿದ್ದಾರೆ 

READ : ಗ್ರಾಮಸ್ಥರು ಹಿಡಿದ ಆರೋಪಿಗಳನ್ನ ಬಿಟ್ಟು ಕಳಿಸಿದಕ್ಕೆ ಆಕ್ರೋಶ! ಡಿವೈಎಸ್​ಪಿ ಕಚೇರಿ ಎದುರು ಪ್ರತಿಭಟನೆ

ಇನ್ನೂ ನಿನ್ನೆ ನಡೆದ ಹಲ್ಲೆ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಎಸ್​ಪಿ ಮಿಥುನ್ ಕುಮಾರ್, ಗೋಕುಲ್ ಕೃಷ್ಣ ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಾಗುವುದು ಎಂದಿದ್ದಾರೆ. 

 

Share This Article