MANDYA| Dec 12, 2023 |ಸಾವಿಗೆ ಸಾವಿರ ಸಾರಿ ಎನ್ನುವಂತೆ, ಮಂಡ್ಯ ಜಿಲ್ಲೆಯಲ್ಲೊಂದು ಘಟನೆ ನಡೆದಿದ್ದು, ಅದರ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆ ಬಸ್ಸೋಂದು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದೃಶ್ಯ ವಿಡಿಯೋದಲ್ಲಿ ಸರೆಯಾಗಿದೆ.
ಮಂಡ್ಯ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದೆ. ನಿನ್ನೆಯ ಘಟನೆಯ ದೃಶ್ಯದ ಸಿಸಿ ಕ್ಯಾಮಾರಾ ದೃಶ್ಯ ಹೊರಬಿದ್ದಿದೆ. ಇನ್ನೂ ಘಟನೆಯಲ್ಲಿ ಬೆಂಗಳೂರು ಆಡವಾಡಿಯ ಪೂಜಾ ಭಾರತಿ(40) ಎಂಬವರು ಸಾವನ್ನಪ್ಪಿದ್ದಾರೆ.
Bus runs over woman at #KSRTC bus stand #mandya pic.twitter.com/6YcNEn0cL9
— malenadutoday.com (@malnadtoday) December 12, 2023
READ : ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರದ ವಕೀಲರಿಂದ ಡಿಜಿಪಿಗೆ ಪತ್ರ
ಸೋಮವಾರ ಬೆಳಗ್ಗೆ ಪೂಜಾ ಭಾರತಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿದ್ದರು. ಇದೇ ವೇಳೆ ಮೈಸೂರು ಕಡೆಯಿಂದ ವೇಗವಾಗಿ ಬಂದ ಗ್ರಾಮಾಂತರ ಸಾರಿಗೆ ಬಸ್ ಅವರ ಮೇಲೆಯೇ ಹರಿದಿದೆ.


