shivamogga jail case / ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಮೇಲೆ ಹಲ್ಲೆ, ಮೊಬೈಲ್ ಬಳಸಿ ವಿಡಿಯೋ ವೈರಲ್: 5 ಮಂದಿ ವಿರುದ್ಧ ಕೇಸ್
ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದೊಳಗೆ ವಿಚಾರಣಾಧೀನ ಕೈದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಪಿಯವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಈ ನಡುವೆ ಹಲ್ಲೆ ನಡೆಸಿದ ಕೈದಿಗಳು ಆ ದೃಶ್ಯವನ್ನು ಆಂಡ್ರಾಯಿಡ್ ಮೊಬೈಲ್ ಫೋನ್ ಬಳಸಿ ಚಿತ್ರೀಕರಿಸಿದ್ದರು. ಜೈಲಿನ ಒಳಗಡೆ ಮೊಬೈಲ್ ಫೋನ್ ಬಳಕೆ ವಿಚಾರದಲ್ಲಿಯು ಕೇಂದ್ರ ಕಾರಾಗೃಹ ಅಧಿಕಾರಿಗಳು ಗಂಭೀರ ತನಿಖೆಗೆ ಮುಂದಾಗಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.
ನಡೆದಿದ್ದೇನು? shivamogga jail case /
ಶುಕ್ರವಾರ (ಜೂನ್ 14, 2025) ಮಧ್ಯಾಹ್ನ 1:56 ರಿಂದ 2:00 ಗಂಟೆಯ ಅವಧಿಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಕುಮುದ್ವತಿ ವಿಭಾಗದ ಕೊಠಡಿ ಸಂಖ್ಯೆ 32 ರಲ್ಲಿ ಈ ಘಟನೆ ನಡೆದಿದೆ. ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಜೂನ್ 13ರ ರಾತ್ರಿ ಕಾರಾಗೃಹದಲ್ಲಿ ದಾಖಲಾಗಿದ್ದ ಆರೋಪಿ ಕಿರಣ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ದೈನಂದಿನ ಲಾಕಪ್ ಪ್ರಕ್ರಿಯೆಗೂ ಮೊದಲು ಐವರು ವಿಚಾರಣಾಧೀನ ಕೈದಿಗಳಾದ ಪರಶುರಾಮ್ ಅಲಿಯಾಸ್ ಚಿಂಗಾರಿ ಪ್ರದೀಪ್ ವಿ ಅಲಿಯಾಸ್ ಮೊದಲಿಯಾರ್ , ಅಪ್ಪುನಾಯ್ಕ ಅಲಿಯಾಸ್ ಅಪ್ಪು , ಹನುಮಂತನಾಯ್ಕ ಮತ್ತು ಶಬರೀಶ ಎಸ್ ಅಲಿಯಾಸ್ ಆಚಾರಿ ಸೇರಿಕೊಂಡು ಕಿರಣ್ ಅವರನ್ನು ಕುಮುದ್ವತಿ ವಿಭಾಗದ ಕೊಠಡಿ ಸಂಖ್ಯೆ 32 ಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ, ತಮ್ಮ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಕಳುಹಿಸಿ, ಬಳಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.


ಇನ್ನೂ ವಿಡಿಯೋ ಹೊರಬಿದ್ದ ಬೆನ್ನಲ್ಲೆ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈದಿಗಳ ಕೊಠಡಿಗಳನ್ನು ತಪಾಸಣೆ ನಡೆಸಿ, ಒಂದು ರೆಡ್ಮಿ ಆಂಡ್ರಾಯ್ಡ್ ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಬಳಿಕ ಐವರನ್ನು ವಿಚಾರಣೆ ನಡೆಸಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಪಿ. ಅವರ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದದ್ದಾರೆ. ಸದ್ಯ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 173ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. The Karnataka Prisons (Amendment) Act-2022 ರ ಕಲಂ 42 ಮತ್ತು The Bharatiya Nyaya Sanhita (BNS), 2023 ರ ಕಲಂ 115(2), 190 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಜೈಲು ಅಧಿಕ್ಷಕರು ಹೇಳುವುದು ಏನು?shivamogga jail case /
ನಡೆದ ಘಟನೆಯ ಬಗ್ಗೆ ಮಲೆನಾಡು ಟುಡೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ರವರನ್ನ ಸಂಪರ್ಕಿಸಿದಾಗ, ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತತ್ಸಂಬಂಧ ಎಫ್ಐಆರ್ ಸಹ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಯಲ್ಲಿ ಎಲ್ಲಾ ವಿಚಾರಗಳು ಗೊತ್ತಾಗಲಿದೆಎಂದರು.
ಸ್ಪೈ ಏನು ಹೇಳುತ್ತೆ!?shivamogga jail case /
ಇನ್ನೂ ಮಲೆನಾಡು ಟುಡೆ ಗೌಪ್ಯ ಮೂಲಗಳ ಪ್ರಕಾರ, ಇದೊಂದು ಘಟನೆ ಭದ್ರಾವತಿಯ ರಾಜಕಾರಣಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಜೈಲಿನಲ್ಲಿ ಪೆಟ್ಟು ತಿಂದ ಯುವಕ ಜೆಡಿಎಸ್ ಪಕ್ಷದ ಮುಖಂಡರೊಬ್ಬರ ಬಳಗದಲ್ಲಿದ್ದು, ಆತನ ಮೇಲಿನ ಹಲ್ಲೆ ಉದ್ದೇಶ ಪೂರ್ವಕವಾಗಿತ್ತು ಎನ್ನಲಾಗುತ್ತಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊರಬಿದ್ದ ಬೆನ್ನಲ್ಲೆ ಪ್ರಕರಣವನ್ನು ಕೇಂದ್ರ ಕಾರಾಗೃಹವನ್ನು ಕೇಂದ್ರೀಕರಿಸಿ ನೋಡಲಾಗುತ್ತಿದೆ. ಆದರೆ, ಭದ್ರಾವತಿಯಲ್ಲಿ ಹೊಡೆದವರು ಒಂದು ಪಕ್ಷ, ಹೊಡೆಸಿಕೊಂಡವನು ಒಂದು ಪಕ್ಷ, ಹೊಡೆಯುವುದಕ್ಕೆ ಎಂದೇ ಜೈಲಿಗೆ ಹೋಗಿದ್ದರಿಬಹುದು ಎನ್ನತ್ತಿದೆ ಮಲೆನಾಡು ಟುಡೆ ಗೌಪ್ಯ ಮೂಲ.
ಒಟ್ಟಾರೆ ಪ್ರಕರಣದಲ್ಲಿ ಕೇಂದ್ರ ಕಾರಾಗೃಹದ ಸಿಬ್ಬಂದಿ ತ್ವರಿತ ಕ್ರಮ ಕೈಗೊಂಡಿದ್ದು ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಾಗುವಂತೆ ಮಾಡಿದ್ದಾರೆ. ಇದೀಗ ತುಂಗಾನಗರ ಪೊಲೀಸರು ಹಲ್ಲೆ ಪ್ರಕರಣದ ಹಿಂದಿನ ರಾಜಕಾಣವನ್ನು ಬಿಚ್ಚಿಡಬೇಕಿದೆ.