MALENADUTODAY.COM | SHIVAMOGGA | #KANNADANEWSWEB
ಹೋರಿ ಹಬ್ಬದ ವಿಚಾರವಾಗಿ ಬೇರೆ ಊರಿ8ನಲ್ಲಿ ನಡೆದ ಗಲಾಟೆ ಸಂಬಂದ ಹೊಡೆದಾಟ ನಡೆದಿದ್ದು, ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ನಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ಸೊರಬ ತಾಲ್ಲೂಕಿನ ಶಾಂತಗೇರಿಯಲ್ಲಿ ನಡೆದ ಹೋರಿಹಬ್ಬಕ್ಕೆ ತೆರಳಿದ್ದರು. ಅಲ್ಲಿ ಹೋರಿಹಬ್ಬದ ವಿಚಾರವಾಗಿ ಕೆಲವರ ನಡುವೆ ಜಗಳವಾಗಿದೆ . ಬಳಿಕ ಅಲ್ಲಿಂದ ವಾಪಸ್ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ಲಿಮಿಟ್ನ ಸ್ವಗ್ರಾಮಕ್ಕೆ ವಾಪಸ್ ಬಂದಾಗ , ಅದೇ ಜನರ ನಡುವೆ ಹೊಡೆದಾಟ ನಡೆದಿದೆ.
ಈ ಸಂಬಂಧ ಬೇರೆ ಊರಿನಲ್ಲಿ ನಮ್ಮ ಊರಿನವರ ಜೊತೆ ಜಗಳ ತೆಗೆಯುತ್ತೀರಾ ಎಂದು ಹಲ್ಲೆಯಾಗಿದೆ ಎಂದು ಒಂದು ಕಡೆಯವರು ದೂಡಿದ್ದಾರೆ. ಇನ್ನೊಂದಡೆ ನಿಂತವರ ಮೇಲೆ ಬಂದು ಏಕಾಯೇಕಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನೂ ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರಿಗೆ ಶಿರಾಳಕೊಪ್ಪ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
READ | ರಾಜ್ಸ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ
ಪತ್ನಿ ಹೆಸರಲ್ಲಿದ್ದ ವೆಹಿಕಲ್ನ್ನ ಮಾರಿದ ಪತಿ! ಇಬ್ಬರಿಬ್ಬರ ಮೇಲೆ ಕಂಪ್ಲೆಂಟ್ ಕೊಟ್ಟ ಪತ್ನಿ
ಶಿವಮೊಗ್ಗದ ಪ್ರಿಯಾಂಕ್ ಲೇಔಟ್ ನಿವಾಸಿಯೊಬ್ಬರು ತಮ್ಮ ಪತಿಯ ವಿರುದ್ಧ ತಮ್ಮ ಸಹಿ ಪೋರ್ಜರಿ ಮಾಡಿ, ತಮ್ಮ ಹೆಸರಿನಲ್ಲಿದ್ದ ವಾಹನವನ್ನು ಮಾರಿದ ಆರೋಪ ಹೊರಿಸಿದ್ದಾರೆ. ಅಲ್ಲದೆ ಈ ಸಂಬಂಧ ಒಂದು ವಾಹನವನ್ನು ಖರೀದಿಸಿದ ಶೋರೂಮ್ ವೊಂದರ ಮೇಲೆಯು ದೂರು ದಾಖಲಿಸಿದ್ದು ಎಫ್ಐಆರ್ ಸಹ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ. ವಾಹನವನ್ನು ಸರ್ವೀಸ್ಗೆ ಬಿಡಬೇಕು ಎಂದು ಹೇಳಿಕೊಂಡೊಯ್ದ ಪತಿ, ತಮ್ಮ ಹೆಸರಿನಲ್ಲಿದ್ದ ವಾಹನದ ದಾಖಲಾತಿಯನ್ನು ನಕಲು ಮಾಡಿ, ಸಹಿ ಫೋರ್ಜರಿ ಮಾಡಿ ಮಾರಿದ್ದಾರೆ ಎಂಬುದು ಆರೋಪವಾಗಿದೆ.
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga
