leopard : ಮನೆಯ ಜಗಲಿಯಲ್ಲಿ ಹಾದು ಹೋದ ಚಿರತೆ | ಸಿಸಿಟಿವಿಯಲ್ಲಿ  ದೃಶ್ಯ ಸೆರೆ

leopard

 ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ತೋಟದ ಮನೆಯಲ್ಲಿ ಸೋಮವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದರ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. leopard : ನಾಯಿಯ ಬೇಟೆಗೆಂದು ಬರುವ ಚಿರತೆ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ ಟಿವಿ ಸುಜಾತರವರ ಮನೆಯಲ್ಲಿ ರಾತ್ರಿ 9:30ರ ಸುಮಾರಿಗೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ಇದರಿಂದ ಮನೆಯವರು ನಾಯಿಗಳು ಏಕೆ ಬೊಗಳುತ್ತಿವೆ ಎಂದು ಪರಿಶೀಲಿಸಲು ಕಿಟಕಿ ತೆಗೆದು ನೋಡಿದ್ದಾರೆ. ಆಗ ಮನೆಯ ಜಗಲಿಯ ಮೇಲೆ ಚಿರತೆಯೊಂದು ಹಾದುಹೋಗಿದೆ.ಇದನ್ನು ನೋಡಿದ … Read more

ಸಿಎನ್​ಜಿ ಗ್ಯಾಸ್​ ಸ್ಫೋಟ | ಭದ್ರಾವತಿಯ ಯುವಕ ಸಾವು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 10, 2025 ಲಾರಿಗೆ ಸಿಎನ್‌ಜಿ ಗ್ಯಾಸ್ ಅನ್ನು ತುಂಬಿಸುವ ವೇಳೆ ಅದು ಸ್ಪೋಟಗೊಂಡ ಪರಿಣಾಮ ಭದ್ರಾವತಿ ಮೂಲದ ಯುವಕನೊಬ್ಬ ಸಾವನಪ್ಪಿದ್ದಾನೆ. ಭದ್ರಾವತಿ ತಾಲೂಕಿನ ಗೋಣಿಬೀಡಿನ ಕಂಬದಾಳು ಹೊಸೂರಿನ ಯುವಕ ಲಕ್ಷ್ಮಣ (27) ಸಾವನ್ನಪ್ಪಿದ ದುರ್ದೈವಿ. ಚಿತ್ರದುರ್ಗದಲ್ಲಿ ಸಿಎನ್​ ಜಿ ಗ್ಯಾಸನ್ನು  ಲಾರಿಗೆ ಡಂಪ್ ಮಾಡಿ ಶಿವಮೊಗ್ಗದ ಕಡೆ ಹೊರಡುವಾಗ ಈ ಅವಘಡ ಸಂಭವಿಸಿದೆ. ಮೃತ ಯುವಕ ಲಕ್ಷ್ಮಣ್ ಈ ಹಿಂದೆ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ … Read more

ಸಂಜೆ 5 ಮಕ್ಕಳು ಮಿಸ್ಸಿಂಗ್, ಕಿಡ್ನ್ಯಾಪ್​ ಶಂಕೆ, ರಾತ್ರಿಯಿಡಿ ಹುಡುಕಾಟ |ಬೆಳಗಿನ ಜಾವ ನಡೀತು ಈ ಘಟನೆ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 7, 2025 ‌‌  ಮೀನು ಹಿಡಿಯಲು ಹೋಗಿದ್ದ ಬಾಲಕರು ನಾಪತ್ತೆಯಾದ ಪ್ರಕರಣ ಸಂಬಂಧ ರಾತ್ರಿಯಿಡಿ ಹೈಡ್ರಾಮಾ ನಡೆದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕುಮರಿ ನಾರಾಯಣಪುರದಲ್ಲಿ ನಡೆದಿದೆ. ಏನಿದು ವಿಚಾರ: ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಗ್ರಾಮದ ಐವರು ಮಕ್ಕಳು ಸಣ್ಣ ಚಾನಲ್​ನಲ್ಲಿ ಮೀನು ಹಿಡಿಯುವ ಸಲುವಾಗಿ ತೆರಳಿದ್ದರು.ಆ ಬಳಿಕ ನಾಪತ್ತೆಯಾಗಿದ್ದರು. ಇದೀಗ ಇಡೀ ಊರು ಆತಂಕಕ್ಕೆ ಒಳಗಾಗಿತ್ತು. ಎಂಟರಿಂದ 14 ವರುಷದ … Read more

BIG NEWS | ಇ ಸ್ವತ್ತು ಮಾಡಿಕೊಡಲು ₹30 ಸಾವಿರ ಲಂಚ, 15 ಸಾವಿರ ಪಡೆಯುವಾಗ ಇಬ್ಬರು ಅಧಿಕಾರಿಗಳಿಗೆ ಕಾದಿತ್ತು ಶಾಕ್

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 4, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಟ್ರ್ಯಾಪ್‌ ಆಗಿದ್ದಾರೆ. ತಾಲೂಕಿನ ಕಂಬದಾಳು ಹೊಸೂರು ಪಿಡಿಒ ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.  ಖಾಲಿ ಜಾಗಕ್ಕೆ ಚೆಕ್‌ ಬಂದಿ ನಿಗದಿಪಡಿಸಿ, ಇ ಸ್ವತ್ತು ಮಾಡಿಕೊಡಲು ಲಂಚ ಕೇಳಿದ್ದ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.  ಸಂತ್ರಸ್ತರೊಬ್ಬರು ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ದಾಖಲಿಸಿ ದಾಳಿಗೆ … Read more

ಭದ್ರಾವತಿಯಲ್ಲಿ  ಶಾರದಾ ಅಪ್ಪಾಜಿ ಗೌಡ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ | ಕಾರಣವೇನು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 2, 2025 ಭದ್ರಾವತಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ  ಕಿಡಿಗೇಡಿಗಳು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಪ್ರಮೋದ್ ಹಲ್ಲೆಗೆ ಒಳಗಾದ ವ್ಯಕ್ತಿ. ಇದರಿಂದಾಗಿ ಜೆಡಿಎಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ  ರಸ್ತೆಯನ್ನು ತಡೆದು ಆಕ್ರೋಶವನ್ನು ವ್ಯಕ್ತಪಡಿಸಿದರು.   ನಡೆದಿದ್ದೇನು ಪ್ರಮೋದ್ ರಾತ್ರಿ ಬಸ್ ನಿಲ್ದಾಣದಿಂದ ತಮ್ಮ ಮನೆಗೆ ಬೈಕ್ ನಲ್ಲಿ ತರೀಕೆರೆ ರಸ್ತೆಯಲ್ಲಿ  ತೆರಳುತ್ತಿದ್ದರು. ಆ ವೇಳೆ ಮೂರು ಬೈಕ್ ನಲ್ಲಿ ಬಂದ 6 ಜನ ಯುವಕರು … Read more

ಗೂಂಡಾ ಆಕ್ಟ್​ ನಡಿ ವರ್ಷಗಟ್ಲೇ ಜೈಲ್​ನಲ್ಲಿದ್ದರೂ ಬುದ್ದಿ ಕಲಿಯದ ಕಡೇಕಲ್​ ಅಬೀದ್ , ಭದ್ರಾವತಿಯಲ್ಲಿ ಐಓ ನಾಗಮ್ಮರಿಂದ ಗುಂಡೇಟು

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌ ಶಿವಮೊಗ್ಗ ಪೊಲೀಸರು ನಡೆಸ್ತಿದ್ದ ಕಾಲಿಗೆ ಗುಂಡು ಆಪರೇಷನ್​ ಇದೀಗ ಭದ್ರಾವತಿಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ರೌಡಿಶೀಟರ್ ಖುರೇಶಿ ಕಾಲಿಗೆ ಗುಂಡೇಟು ನೀಡಿದ್ದ ಭದ್ರಾವತಿ ಪೊಲೀಸರು ಇದೀಗ ಮತ್ತೊಬ್ಬ ರೌಡಿಶೀಟರ್ ಕಡೆಕಲ್ ಅಬೀದ್​ ಕಾಲಿಗೆ ಗುಂಡೇಟು ಕೊಟ್ಟಿದ್ದಾರೆ. ಈತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಈತ ಹಲ್ಲೆಗೆ ಯತ್ನಿಸಿದಾಗ ಪೇಪರ್​ ಟೌನ್​ ಇನ್​ಸ್ಪೆಕ್ಟರ್​ ನಾಗಮ್ಮ ಫೈರ್ ಮಾಡಿದ್ದಾರೆ. ಈ ವೇಳೆ ಅಬೀದ್​ ಕಾಲಿಗ … Read more

ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಶವ | ಆತ್ಮಹತ್ಯೆ ಶಂಕೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 24, 2025 ಕತ್ತು ಸೀಳಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ  ಶವ ಭದ್ರಾವತಿ ತಾಲೂಕಿನ ಕಲ್ಲಿಹಾಳು ಸಮೀಪದ ಬೊಮ್ಮನಕಟ್ಟೆ ಗ್ರಾಮದಲ್ಲಿ ಪತ್ತೆಯಾಗಿದೆ.  ಶ್ರೀನಿವಾಸ (28) ಮೃತ ಪಟ್ಟಿರುವ ಯುವಕ ಎಂದು ತಿಳಿದುಬಂದಿದೆ.  ಬೊಮ್ಮನ ಕಟ್ಟೆಯ ಶ್ರೀನಿವಾಸ್‌ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ, ಆತ ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದು,ಸ್ಥಳೀಯರ ಮಾಹಿತಿಯ ಪ್ರಕಾರ ಶ್ರೀನಿವಾಸ್ ಅಧಿಕ ಕುಡಿತದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತನಿಗೆ 7 ವರ್ಷದ … Read more

ಪಂಚಾಯಿತಿ ಕಚೇರಿ ಎದುರು ಸದಸ್ಯನಿಂದಲೇ ಧರಣಿ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 12, 2025 ‌‌ ‌ ಸುಪ್ರೀಂಕೋರ್ಟ್‌ ತೀರ್ಪೊಂದರಲ್ಲಿ ಪ್ರಜಾತಂತ್ರದ ಪ್ರಗತಿ ಅಡ್ಡಗಾಲು ಹಾಕುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದೆ. ಈ ಮೂಲಕ ಅಧಿಕಾರಿಗಳ ಮೇಲ್ತನದ ಪ್ರತಿಷ್ಟೆಗೆ ಸುಪ್ರೀಂಕೋರ್ಟ್‌ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ. ಆದಾಗ್ಯು ಅಧಿಕಾರಿಗಳು ಹಾಗೂ ಜನಪ್ರತಿನಿಧಿನಗಳ ನಡುವಿನ ತಿಕ್ಕಾಟಕ್ಕೆ ಕೊನೆ ಬೀಳುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವಸತಿ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣಕ್ಕೆ ಪಿಡಿಓ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಸೋಗಾನೆ ಗ್ರಾಮ ಪಂಚಾಯಿತಿ ಸದಸ್ಯ … Read more

10 ವರ್ಷಗಳಿಂದ ಕೋರ್ಟ್‌ ಹತ್ರ ಸುಳಿಯದ ಆರೋಪಿ ಓಲ್ಡ್‌ಟೌನ್‌ ಪೊಲೀಸರಿಂದ ಅರೆಸ್ಟ್!

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಯೊಬ್ಬನನ್ನು ಪೊಲೀಸರು ಅರೆಸ್ಟ್‌ ಮಾಡಿ ಕೋರ್ಟ್‌ ಮುಂದೆ ಹಾಜರುಪಡಿಸಿದ್ದಾರೆ.  2012 ರಲ್ಲಿ ನಡೆದ 392 IPC ಅಡಿಯಲ್ಲಿನ ಪ್ರಕರಣದ ವಿಚಾರಣೆ ಭದ್ರಾವತಿಯ 02 ನೇ ACJ & JMFC ನ್ಯಾಯಾಲಯದಲ್ಲಿ 2014 ರ ಸಿಸಿ ನಂಬರ್‌ ಅಡಿಯಲ್ಲಿ ನಡೆಯುತ್ತಿರುತ್ತದೆ. ಆದರೆ, ಪ್ರಕರಣದ ಆರೋಪಿ ಕಳೆದ10 ವರ್ಷಗಳಿಂದ ವಿಚಾರಣೆಗೆ ಹಾಜರಾಗಿರಲ್ಲ.  ಈ … Read more

ಭದ್ರಾವತಿಯಲ್ಲಿ ಉಡುಪಿ ಮಲ್ಪೆ ಪೊಲೀಸರ ಕಾರ್ಯಾಚರಣೆ! ಮಹಿಳೆ ಅರೆಸ್ಟ್‌ !

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 4, 2025 ‌‌ ‌ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗದೇ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳಾ ಆರೋಪಿಯೊಬ್ಬರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಪತ್ತೆ ಮಾಡಿ ಅರೆಸ್ಟ್‌ ಮಾಡಲಾಗಿದೆ. ಉಡುಪಿ ಮಲ್ಪೆ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.  ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ  ಉಡುಪಿ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ನೇತ್ರಾ ಎಂಬಾಕೆ ಹಾಜರಾಗಬೇಕಿತ್ತು. ಆದರೆ ಸುಮಾರು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು