ಶಿವಮೊಗ್ಗ ಕ್ರೈಂ ನ್ಯೂಸ್ : ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು/ ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೇಂಟ್
ಕ್ಕದ ಮನೆಯವರೊಂದಿಗೆ ಮಾತನಾಡ್ತಾ ನಿಂತಿದ್ಧಾಗ, ದಾಳಿ ನಡೆಸಿದ್ದ ಶಿವಕುಮಾರ್ ಸತೀಶ್ರ ಬಲಬುಜಕ್ಕೆ ಚಾಕುವಿನಿಂದ ಇರಿದಿದ್ಧಾನೆ. ಈ ಸಂಬಂಧ ಚಿಕಿತ್ಸೆ ಪಡೆದುಕೊಂಡು ಸತೀಶ್ ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಗಂಡ ಹೆಂಡ್ತಿ ಜಗಳ ಬಿಡಿಸಿದ್ದಕ್ಕೆ ಚಾಕು ಇರಿದರು
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ. ದಾಖಲಾದ ಕೇಸ್ನ ಪ್ರಕಾರ, ಪಿಳ್ಖಂಗೆರೆಯಲ್ಲಿ ಗಂಡ ಹೆಂಡತಿ ನಡುವಿನ ಜಗಳ ಬಿಡಿಸಿ ಬುದ್ದಿವಾದ ಹೇಳಿದ್ದಕ್ಕೆ , ಚಾಕು ಇರಿದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶಿವಕುಮಾರ್ ಎಂಬವರು, ತಮ್ಮ ಪತ್ನಿಯ ಜೊತೆಗೆ ಇದೇ ಡಿಸೆಂಬರ್ 9 ರಂದು ಜಗಳವಾಡುತ್ತಿದ್ದರಂತೆ. ಈ ವೇಳೇ ಅದನ್ನು ನೀಡಿದ್ದ ಸತೀಶ್ ಎಂಬವರು, ಇಬ್ಬರ ಜಗಳ ಬಿಡಿಸಿ ಮನೆಗೆ ಹೋಗುವಂತೆ ಸಲಹೆ ಕೊಟ್ಟು ಬುದ್ದಿ ಮಾತು ಹೇಳಿದ್ದರಂತೆ. ಈ ವೇಳೆ ಶಿವಕುಮಾರ್ ಸತೀಶ್ಗೆ ನಿಂದಿಸಿದ್ಧಾರೆ. ಇನ್ನೂ ಇದರ ಬಳಿಕ ಸತೀಶ್ರವರು ತಮ್ಮ ಪಕ್ಕದ ಮನೆಯವರೊಂದಿಗೆ ಮಾತನಾಡ್ತಾ ನಿಂತಿದ್ಧಾಗ, ದಾಳಿ ನಡೆಸಿದ್ದ ಶಿವಕುಮಾರ್ ಸತೀಶ್ರ ಬಲಬುಜಕ್ಕೆ ಚಾಕುವಿನಿಂದ ಇರಿದಿದ್ಧಾನೆ. ಈ ಸಂಬಂಧ ಚಿಕಿತ್ಸೆ ಪಡೆದುಕೊಂಡು ಸತೀಶ್ ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಮಗನ ವಿರುದ್ಧವೇ ದೂರ ಕೊಟ್ಟ ತಾಯಿ
ಇನ್ನೊಂದು ಪ್ರಕರಣದಲ್ಲಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದ ಆರೋಪವೊಂದರ ಅಡಿಯಲ್ಲಿ ತಾಯಿಯೇ ಮಗನ ವಿರುದ್ಧ ದೂರು ನೀಡಿದ್ದಾರೆ. ಶ್ರೀರಾಮ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ರತ್ನಮ್ಮ ಎಂಬವರು, ಮಗ ಗಿರೀಶ್ ವಿರುದ್ಧ ದೂರು ನೀಡಿದ್ದಾರೆ. ಆಸ್ಪತ್ರೆಯ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಆಭರಣಗಳನ್ನು ಕದ್ದೊಯ್ದ ಆರೋಪವನ್ನು ತಾಯಿ ಮಾಡಿದ್ಧಾರೆ.
ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ
ಮನೆ ಹಂಚು ತೆಗೆದು 1200 ಉಂಗುರ ಕದ್ದರು
ಈ ಮಧ್ಯೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣವೊಂದು ದಾಖಲಾಗಿದೆ. ಶಿವಮೊಗ್ಗ ನಗರದ ಉಪ್ಪಾರ ಕೇರಿಯಲ್ಲಿ ಕರಿಬಸಪ್ಪ ರವರಿಗೆ ಸೇರಿದ ಮನೆಯಲ್ಲಿ ಮೇಲ್ಚಾವಣಿಯೆ ಹಂಚನ್ನು ತೆಗೆದು ಟೇಬಲ್ ಡ್ರಾದಲ್ಲಿ ಇಟ್ಟಿದ್ದ 1200 ಉಂಗುರಗಳನ್ನ ಕಳ್ಳರು ಕದ್ದಿದ್ದಾರೆ. ಸುಮಾರು 500 ಗ್ರಾಂ ತೂಕದ 30,000/-ರೂ ಬೆಲೆಬಾಳುವ ವಿವಿಧ ರೀತಿಯ ಉಂಗುರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಕಂಪ್ಲೇಂಟ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link