ripponpet news today / ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪ ಕೆರೆ ಏರಿಗೆ ಅಡ್ಡ ಕಟ್ಟಿರುವ ತಡೆಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದಾನೆ.ಘಟನೆಯಲ್ಲಿ ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಅರಸಾಳು ಕೆರೆ ಏರಿ ಮೇಲೆ ಘಟನೆ ಸಂಭವಿಸಿದೆ.
ರಿಪ್ಪನ್ಪೇಟೆಗೆ ಹೋಗುವಾಗ ಘಟನೆ
ಇಲ್ಲಿನ ನಿವಾಸಿ ಅನೂಪ್ ಎಂಬ 22 ವರುಷದ ಯುವಕ ಮೃತಪಟ್ಟಿದ್ದು, ಆತನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಮೆಡಿಕಲ್ ರೆಪ್ ಆಗಿದ್ದ ಅನೂಪ್ ಹಾಗೂ ಇನ್ನೊಬ್ಬಾತ ಬೈಕ್ನಲ್ಲಿ ರಿಪ್ಪನ್ಪೇಟೆಗೆ ಹೊರಟಿದ್ರು. ಈ ವೇಳೆ ಕೆರೆ ಏರಿ ಮೇಲೆ ಬೈಕ್ ಕಂಟ್ರೋಲ್ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿದೆ. ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.