ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದ ಇಂದಿನ ದೈನಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಫಲಗಳನ್ನು ಗಮನಿಸೋಣ.ಇ ವತ್ತು ಕೃಷ್ಣ ಪಕ್ಷದ ಪಂಚಮಿ ತಿಥಿಯು ರಾತ್ರಿ 8.02 ರವರೆಗೆ ಇರಲಿದ್ದು, ತದನಂತರ ಷಷ್ಠಿ ತಿಥಿ ಆರಂಭವಾಗಲಿದೆ. ಪುಷ್ಯ ನಕ್ಷತ್ರವು ಬೆಳಿಗ್ಗೆ 8.34 ರವರೆಗೆ ಇದ್ದು, ಆನಂತರ ಆಶ್ಲೇಷ ನಕ್ಷತ್ರದ ಪ್ರವೇಶವಾಗಲಿದೆ.
ಬೆಳಿಗ್ಗೆ 8.32 ರಿಂದ 9.16 ರವರೆಗೆ ಮತ್ತು ರಾತ್ರಿ 10.34 ರಿಂದ 11.26 ರವರೆಗೆ ದುರ್ಮುಹೂರ್ತವಿರಲಿದೆ. ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ, ಮತ್ತು ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ ಖರೀದಿಗೆ MSP ನಿಗದಿ, ನಿಗದಿಪಡಿಸಿದ ಕನಿಷ್ಟ ದರವೆಷ್ಟು..?
ದ್ವಾದಶ ರಾಶಿಗಳ ದಿನ ಭವಿಷ್ಯ
ಮೇಷ : ಕೆಲವು ಕೆಲಸ ಮುಂದಕ್ಕೆ ಹೋಗಬಹುದು. ಆಲೋಚನೆಗಳಲ್ಲಿ ಅಸ್ಥಿರತೆ ಕಂಡುಬರುತ್ತದೆ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಮುಗ್ಗಟ್ಟು ಮತ್ತು ಸಾಲ ನೀಡಿದವರಿಂದ ಒತ್ತಡ. ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಉದ್ಯೋಗದಲ್ಲಿರುವವರಿಗೆ ಹೆಚ್ಚುವರಿ ಕೆಲಸದ ಹೊರೆ.
ವೃಷಭ : ಮಿತ್ರರೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಪರಿಸ್ಥಿತಿಯು ಸುಧಾರಣೆ, ವಸ್ತು ರೂಪದಲ್ಲಿ ಲಾಭ ಉಂಟಾಗುತ್ತವೆ. ಹಳೆಯ ಗೆಳೆಯರಿಂದ ಔತಣಕೂಟ. ಭೂಮಿಯಿಂದಲೂ ಲಾಭ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ವಿಸ್ತರಣೆ.. ಉದ್ಯೋಗದದಲ್ಲಿ ಅನುಕೂಲಕರ ವಾತಾವರಣ.

ಮಿಥುನ : ಆರ್ಥಿಕ ವ್ಯವಹಾರಗಳಲ್ಲಿ ಜಾಮೀನು ನೀಡದಿರಿ. ಪ್ರಯಾಣದ ದಿನ. ಕೈಗೊಂಡ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಮುಂದಕ್ಕೆ ಸಾಗದೆ ಇರಬಹುದು. ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಪುಣ್ಯಕ್ಷೇತ್ರಗಳಿಗೆ ಭೇಟಿ. ವ್ಯಾಪಾರದಲ್ಲಿ ಸಾಮಾನ್ಯ ದಿನಉದ್ಯೋಗದಲ್ಲಿ ಕೆಲಸದ ಒತ್ತಡ.
ಕರ್ಕಾಟಕ : ಹೊಸ ವ್ಯಕ್ತಿಗಳ ಪರಿಚಯ. ಸಭೆ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವ ಅವಕಾಶ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ವ್ಯಾಪಾರ ಸರಾಗವಾಗಿ ಮತ್ತು ಲಾಭದಾಯಕವಾಗಿ ಸಾಗಲಿವೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆಯಿದೆ.
ಸಿಂಹ : ಶ್ರಮ ಅನಿವಾರ್ಯವಾಗಬಹುದು. ಅನಿರೀಕ್ಷಿತ ಪ್ರಯಾಣ. ತಮ್ಮ ಕೆಲಸಗಳಲ್ಲಿ ಅಡೆತಡೆ ಎದುರಾಗುತ್ತವೆ. ಹೊಸ ಸಾಲಕ್ಕಾಗಿ ಪ್ರಯತ್ನ. ಬಂಧುಗಳೊಂದಿಗೆ ಜಗಳ ಮತ್ತು ಮನಸ್ತಾಪ ಉಂಟಾಗಬಹುದು. ವ್ಯಾಪಾರ ವಹಿವಾಟು ನಿರಾಸೆ ತರಬಹುದು. ಉದ್ಯೋಗದಲ್ಲಿ ಕೆಲವು ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕನ್ಯಾ : ಹೊಸ ಕೆಲಸ ಇಂದು ಪ್ರಾರಂಭಿಸುತ್ತಾರೆ. ಮನಸ್ಸಿನಲ್ಲಿರುವ ಆಲೋಚನೆ ಕಾರ್ಯರೂಪಕ್ಕೆ ಬರಲಿವೆ. ಪ್ರಮುಖ ಮತ್ತು ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ. ಸನ್ಮಾನ, ಗೌರವ ದೊರೆಯುವ ಸಾಧ್ಯತೆಯಿದೆ. ವ್ಯಾಪಾರ ವಹಿವಾಟುಗಳಲ್ಲಿ ಮುನ್ನಡೆ ಸಾಧಿಸುತ್ತಾರೆ. ಉದ್ಯೋಗದಲ್ಲಿ ಅನುಕೂಲಕರವಾದ ಪರಿಸ್ಥಿತಿ ಸೃಷ್ಟಿಯಾಗುತ್ತವೆ.
ತುಲಾ : ಇಂದು ಪರಿಸ್ಥಿತಿ ಅನುಕೂಲಕರವಾಗಿ ಇರುತ್ತವೆ. ಸಮಾಜದಲ್ಲಿ ಉತ್ತಮ ಗೌರವ ಮತ್ತು ಮನ್ನಣೆ ಸಿಗುತ್ತದೆ. ವಸ್ತುಗಳಿಂದ ಲಾಭವಾಗುವ ಸಾಧ್ಯತೆ ಇದೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿ ಸಂತೋಷಪಡುತ್ತಾರೆ. ವಾಹನ ಯೋಗವೂ ಇದೆ. ವ್ಯಾಪಾರದಲ್ಲಿ ಹೊಸ ಉತ್ಸಾಹ ಕಂಡುಬರುತ್ತದೆ. ಉದ್ಯೋಗದಲ್ಲೂ ಅನುಕೂಲಕರ ಪರಿಸ್ಥಿತಿ
ವೃಶ್ಚಿಕ : ವ್ಯವಹಾರಗಳಲ್ಲಿ ಅಡ್ಡಿ. ಆರ್ಥಿಕ ಸಮಸ್ಯೆ ಕಾಡಬಹುದು. ಕೆಲಸದ ಭಾರ ಮತ್ತಷ್ಟು ಹೆಚ್ಚುತ್ತದೆ. ದೂರ ಪ್ರಯಾಣ ಅನಿವಾರ್ಯವಾಗಬಹುದು. ಆಧ್ಯಾತ್ಮಿಕ ಚಿಂತನೆ. ವ್ಯಾಪಾರ ಸಾಧಾರಣವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.
ಧನುಸ್ಸು : ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಜಗಳ ಉಂಟಾಗುವ ಸಾಧ್ಯತೆ ಇದೆ. ಆಕಸ್ಮಿಕ ಪ್ರಯಾಣ. ಕೆಲಸ ನಿಧಾನವಾಗಿ ಸಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಉದ್ಯೋಗದಲ್ಲಿ ಕೆಲವು ಬದಲಾವಣೆ ಎದುರಾಗುತ್ತವೆ.

ಮಕರ : ಶ್ರಮಕ್ಕೆ ಇಂದು ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಮತ್ತು ಮನ್ನಣೆ ದೊರೆಯಲಿದೆ. ಮಿತ್ರರು ಮತ್ತು ಬಂಧುಗಳೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುತ್ತವೆ. ಉದ್ಯೋಗದಲ್ಲಿ ಅನುಕೂಲಕರವಾದ ಬದಲಾವಣೆ
ಕುಂಭ : ಆರ್ಥಿಕ ಪ್ರಗತಿ ಉಂಟಾಗಲಿದೆ. ಹೊಸ ವಿಷಯ ತಿಳಿದುಕೊಳ್ಳುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ವೃತ್ತಿ ಮತ್ತು ವ್ಯಾಪಾರ ಇಂದು ಚೆನ್ನಾಗಿರಲಿದೆ. ಉದ್ಯೋಗದಲ್ಲಿ ಹೊಸದೊಂದು ವಿಶೇಷ ಮೂಡಲಿದೆ.
ಮೀನ : ಆಪ್ತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಇರುತ್ತವೆ. ಕುಟುಂಬ ಸಮಸ್ಯೆ ಕಾಡುತ್ತವೆ. ಆರೋಗ್ಯದ ಸಮಸ್ಯೆ ಎದುರಾಗಬಹುದು. ವ್ಯಾಪಾರದಲ್ಲಿ ನಿರೀಕ್ಷಿತ ಬೆಳವಣಿಗೆ. ಉದ್ಯೋಗದಲ್ಲಿ ಕೆಲಸದ ಹೊರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!