ಶಿವಮೊಗ್ಗ, ಆಗಸ್ಟ್ 29 2025 , ಮಲೆನಾಡುಟುಡೆ ನ್ಯೂಸ್ : ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ನಾಳೆ ಅಂದರೆ ಆಗಸ್ಟ್ 30 ರಂದು ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ ಎಂದು ತಿಳಿಸಿದೆ. ಮೆಸ್ಕಾಂನ ಪ್ರಕಟಣೆಯ ವಿವರವನ್ನು ಗಮನಿಸುವುದಾದರೆ, ಶಿವಮೊಗ್ಗದ ತಾವರೆಚಟ್ನಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದ ವ್ಯಾಪ್ತಿಯಲ್ಲಿ 66 ಕೆವಿ ಕೇಂದ್ರದ ಅಬ್ಬಲಗೆರೆ, ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ ಮತ್ತು ಹುಣಸೋಡು ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಆಗಸ್ಟ್ 30ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್ ಇರಲ್ಲ
ಅಬ್ಬಲಗೆರೆ, ಕೊಮ್ಮನಾಳು, ಬನ್ನಿಕೆರೆ, ಬೀರನಕೆರೆ, ಬಿಕ್ಕೋನಹಳ್ಳಿ, ಕುಂಚೇನಹಳ್ಳಿ (ಮೇಲಿನ/ಕೆಳಗಿನ ತಾಂಡ), ಕಲ್ಲಾಪುರ, ಗೋಂದಿಚಟ್ನಹಳ್ಳಿ, ಮೇಲಿನಹನಸವಾಡಿ, ಹೊಳೆಹನಸವಾಡಿ, ಬೆಳಲಕಟ್ಟೆ, ಕಲ್ಲಗಂಗೂರು, ಹುಣಸೋಡು, ಮೋಜಪ್ಪಹೊಸೂರು, ಬಸವನಗಂಗೂರು, ಮತ್ತೋಡು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಹೇಳಿದೆ
Power cut in Shivamogga on August 30
