Pahalgam terrorist attack : ಉಗ್ರಗಾಮಿಗಳು ಪ್ರವಾಸಿಗರನ್ನು ಧರ್ಮ ಕೇಳಿ ಶೂಟ್​ ಮಾಡಿದ್ದು ನಿಜವೇ | ಮೃತ ಮಂಜುನಾಥ್ ಪತ್ನಿ ಹೇಳಿದ್ದೇನು

prathapa thirthahalli
Prathapa thirthahalli - content producer

Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು  ಧರ್ಮ ಯಾವುದೆಂದು ಕೇಳಿ ಶೂಟ್​ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ ಮೂಲದ ಮೃತ ಮಂಜುನಾಥ್​ ಪತ್ನಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ.

Pahalgam terrorist attack : ಪಲ್ಲವಿ ಹೇಳಿದ್ದೇನು

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಗ್ರರು ಧರ್ಮವನ್ನು ಕೇಳಿ ಹಿಂದೂ, ಮುಸಲ್ಮಾನರಿಗೆ ಬೇರ್ಪಡಿಸಿ ಶೂಟ್ ಮಾಡಿದ್ದು ನಿಜ.ಆದರೆ ಅದನ್ನು ನಾನು ನೋಡಿಲ್ಲ. ಆ ಮಾತನ್ನು  ನನಗೆ ಹೊಟೆಲ್ ನಲ್ಲಿ ಬೇರೆಯವರು ಹೇಳಿದ್ದರು. ಆದರೆ ಉಗ್ರರು ಧರ್ಮ ಕೇಳಿ ಶೂಟ್​ ಮಾಡಿದ್ದು ನಿಜ. ನನ್ನ ಪತಿ ಹಾಗೂ ಲೆಫ್ಟಿನೆಂಟ್ ಗೆ ಉಗ್ರರು ಒಮ್ಮೆಲೆ ಫೈರ್ ಮಾಡಿದ್ದರು. ಬಳಿಕ ಉಗ್ರಗಾಮಿಗಳು ತೆರಳುವಾಗ ನಾನು ನಮ್ಮನ್ನು ಸಹ ಶೂಟ್​ ಮಾಡಿ ಎಂದು ಹೇಳಿದೆ. ಆಗ ನನ್ನ ಮಗ ಅವರ ಬಳಿ ಕುತ್ತೆ ನಮ್ಮನ್ನು ಕೊಂದುಬಿಡು ಎಂದು ಹೇಳಿದ್ದ. ಇದನ್ನು ನಿಜ ಎಂದು ಸಾಬೀತು ಪಡಿಸಲು ನಾನು ವಿಡಿಯೋ ಮಾಡಬೇಕಿತ್ತು ಅಷ್ಟೇ. ಸಾಕು ಸರ್ ಇನ್ನು ನಾನು ಈ ವಿಚಾರದ ಬಗ್ಗೆ ಏನೂ ಮಾತನಾಡಲ್ಲ. ಈಗಾಗಲೇ ಹಲವಾರು ನೆಗೆಟಿವ್ ಕಾಮೆಂಟ್ಸ್ ಗಳು ವಿನಾಕಾರಣ ಬಂದಿವೆ. ಎಂದು ಮಾದ್ಯಮಗಳೆದುರು ಪಲ್ಲವಿ ಬೇಸರವನ್ನು ವ್ಯಕ್ತಪಡಿಸಿದರು.

Share This Article