ಬೆಂಕಿಯಲ್ಲಿ ಸುಟ್ಟು ಹೋದ ಒಮಿನಿ ಮತ್ತು ಕೊಟ್ಟಿಗೆ ! ಓರ್ವನಿಗೆ ಗಾಯ!

Malenadu Today

SHIVAMOGGA NEWS / Malenadu today/ Nov 25, 2023 | Malnenadutoday.com  

SAGARA |  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ  ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಂಕಿಯಿಂದ ಕಾರು ಹಾಗೂ ಕೊಟ್ಟಿಗೆ ಸುಟ್ಟ ಘಟನೆ ಸಂಭವಿಸಿದೆ. 

ಇಲ್ಲಿನ ಕೊಡನವಳ್ಳಿಯಲ್ಲಿ ಗಣಪತಿ ಕೆಂಚ ನಾಯ್ಕ ಅವರ ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದರ ಜ್ವಾಲೆಗೆ  ಒಣ ಹುಲ್ಲು ಹಾಗೂ ಓಮಿನಿ ಕಾರು ಸುಟ್ಟುಹೋಗಿದೆ. 

READ :ಪೆಟ್ರೋಲ್​ ಬಂಕ್​ನಲ್ಲಿ ಮಲಗಿದ್ದವನ ಮೇಲೆ ಹರಿದ ಟಿಪ್ಪರ್! ಸಾಗರದ ಕಾರ್ಮಿಕ ಸಾವು!

ಶುಕ್ರವಾರ  ಮಧ್ಯಾಹ್ನ ಈ ಘಟನೆ ಸಂಭವಿಸಿದೆ.  ಏಳರಿಂದ ಎಂಟು ಲಕ್ಷ ರೂ.ಗಳ ನಷ್ಟವಾಗಗಿದೆ. ಇನ್ನೂ ಘಟನೆಯಲ್ಲಿ ಬೆಂಕಿ ಆರಿಸಲು ಹೋದ ಮನೆಯ ಗಣಪತಿಯವರಿಗೂ ಬೆಂಕಿ ತಗುಲಿದ್ದು, ಅವರನ್ನು  ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Share This Article