ಮಕ್ಕಳ ಮರಳಾಟಕ್ಕೆ ಅಮ್ಮಂದಿರ ಕಾದಾಟ ! ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್
Mom's fight over children's play! Case registered in Bhadravathi
MALENADUTODAY.COM |SHIVAMOGGA| #KANNADANEWSWEB
ಮರಳಿನಲ್ಲಿ ಆಡುತ್ತಿದ್ದ ಮಕ್ಕಳು ತಳ್ಳಾಡಿಕೊಂಡ ವಿಚಾರಕ್ಕೆ , ಅವರುಗಳ ತಾಯಂದಿರು ಹೊಡೆದಾಡಿಕೊಂಡ ಘಟನೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಕೂಡ್ಲಿಗೆರೆಯಲ್ಲಿ ಗಲಾಟೆ ಆಗಿದ್ದು, ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ದೂರು ಪ್ರತಿದೂರು ದಾಖಲಾಗಿದೆ ಎರಡು ಎಫ್ಐಆರ್ ಕೂಡ ಆಗಿದೆ.
ನಡೆದಿದ್ದೇನು?
ಮನೆ ಮುಂದೆ ಹಾಕಲಾಗಿದ್ದ ಮರಳಿನಲ್ಲಿ ದೂರು ನೀಡಿದ ಮಹಿಳೆಯ ಮಗ ಹಾಗೂ ಪ್ರತಿದೂರು ನೀಡಿದ ಮಹಿಳೆಯ ಮಗನು ಆಡುತ್ತಿದ್ದರಂತೆ. ಈ ವೇಳೆ ದೂರು ನೀಡಿದ ಮಹಿಳೆಯ ಮಗ ಇನ್ನೊಬ್ಬಾಕೆಯ ಮಗನನ್ನ ತಳ್ಳಾಡಿದ್ಧಾನೆ ಎನ್ನಲಾಗಿದ್ದು, ಇದೇ ವಿಚಾರಕ್ಕೆ ಇಬ್ಬರ ಅಮ್ಮಂದಿರು ಪರಸ್ಪರ ಮಕ್ಕಳಿಗೆ ಬುದ್ದಿ ಹೇಳುವಂತೆ ಮಾತನಾಡಿದ್ದಾರೆ. ಈ ಮಾತು , ಇನ್ನಷ್ಟು ಬೆಳೆದು ಇಬ್ಬರ ನಡುವೆ ಜಗಳವಾಗಿದ್ದು, ಹೊಡೆದಾಡಿದ್ದಾರೆ. ಸ್ಥಳೀಯರು ಜಗಳ ಬಿಡಿಸಿದ್ದು, ಬಳಿಕ ಸ್ಟೇಷನ್ನಲ್ಲಿ ಇಬ್ಬರು ಕಂಪ್ಲೆಂಟ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ದೂರು-ಪ್ರತಿದೂರಿನ ಎಫ್ಐಆರ್ ದಾಖಲಿಸಿದ್ದು ತನಿಖೆ ನಡೆಸ್ತಿದ್ಧಾರೆ.
READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #