Tuesday, 15 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

kanthara chapter 1 shooting 12-06-25 : ಸಾಲು ಸಾಲು ಸಾವು | ಕಾಂತಾರಕ್ಕೆ ಇದೆಂತ ಕಂಟಕ

prathapa thirthahalli
Last updated: June 12, 2025 6:22 pm
Prathapa thirthahalli - content producer
Share
SHARE

ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ತಮ್ಮ ಚಿತ್ರದ ಮೂಲಕ ಕರಾವಳಿ ಭಾಗದ ಆಚಾರ ವಿಚಾರಗಳು ಮತ್ತು ದೈವಭಕ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದರು. ಕಾಂತಾರ ಚಿತ್ರದ ಯಶಸ್ಸು ಅವರಿಗೆ “ಪ್ಯಾನ್ ಇಂಡಿಯಾ ಸ್ಟಾರ್” ಸ್ಥಾನಮಾನ ತಂದುಕೊಟ್ಟಿತು ಮತ್ತು ಅವರ ನಟನೆಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತು. ತುಳುನಾಡಿನ ಪ್ರಸಿದ್ಧ ಪಂಜುರ್ಲಿ ದೈವದ ಹಿನ್ನೆಲೆಯ ಕಥೆ, ಕಾಂತಾರ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಪಂಜುರ್ಲಿ ದೈವದ ಆಶೀರ್ವಾದದಿಂದಲೇ ರಿಷಬ್ ಶೆಟ್ಟಿ ಇಷ್ಟರ ಮಟ್ಟಿಗೆ ಯಶಸ್ಸು ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು.

kanthara chapter 1 shooting :  ಕಾಂತಾರ ಪ್ರೀಕ್ವೆಲ್ ಮತ್ತು ವಿವಾದಗಳು

ಕಾಂತಾರ ಚಿತ್ರದ ನಂತರ ರಿಷಬ್ ಶೆಟ್ಟಿ ಹಲವಾರು ಟೀಕೆಗಳನ್ನು ಎದುರಿಸಿದರು. ವಿಶೇಷವಾಗಿ, ಅವರು “ಕಾಂತಾರ ಪ್ರೀಕ್ವೆಲ್” (ಕಾಂತಾರ ಚಾಪ್ಟರ್ 1) ಮಾಡುವುದಾಗಿ ಘೋಷಿಸಿದಾಗ, ದೈವದ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಅಲ್ಲದೆ, ರಿಷಬ್ ಶೆಟ್ಟಿಯಿಂದ ಪ್ರೇರಿತರಾದ ಕೆಲವು ರೀಲ್ಸ್ ಸ್ಟಾರ್‌ಗಳು ದೈವದ ಪಾತ್ರಗಳನ್ನು ಮಾಡಿ ಸಂಪ್ರದಾಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆಕ್ಷೇಪಗಳೂ ಕರಾವಳಿ ಭಾಗದಲ್ಲಿ ವ್ಯಕ್ತವಾದವು. ಈ ಕಾರಣದಿಂದಾಗಿ, ಚಿತ್ರವನ್ನು ಬಿಡುಗಡೆ ಮಾಡಲು ಬಿಡಬಾರದು ಎಂಬ ವಿರೋಧಗಳೂ ಕೇಳಿಬಂದವು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆದರೆ, ರಿಷಬ್ ಶೆಟ್ಟಿ ಈ ಯಾವುದೇ ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ, “ಕಾಂತಾರ ಚಾಪ್ಟರ್ 1” ಚಿತ್ರದ ಶೂಟಿಂಗ್ ಆರಂಭಿಸಿದರು. ಆದರೆ, ಚಿತ್ರೀಕರಣದ ಆರಂಭದಲ್ಲಿಯೇ ಅವರಿಗೆ ಕೆಲವು ಅಡೆತಡೆಗಳು ಎದುರಾದವು.

car decor

kanthara chapter 1 shooting :  ಚಿತ್ರೀಕರಣ ಆರಂಭದಲ್ಲಿ ಎದುರಾದ ಕಷ್ಟಗಳು

ಅರಣ್ಯ ನಾಶದ ಆರೋಪ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಗಳಿಗೆ ಬೆಂಕಿ ಹಚ್ಚಿ ಅರಣ್ಯ ಪ್ರದೇಶವನ್ನು ನಾಶಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ನಂತರ ಅರಣ್ಯ ಪ್ರದೇಶದಲ್ಲಿ ಅನುಮತಿ ಪಡೆದು ಶೂಟಿಂಗ್ ನಡೆಸಲಾಗಿದೆ ಎಂದು ಸಾಬೀತಾಯಿತು.

ಕೊಲ್ಲೂರಿನಲ್ಲಿ ಬಸ್ ಅಪಘಾತ: ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಸಿ, ಕೊಲ್ಲೂರಿನ ಜಡ್ಕಳ ಬಳಿ ಜೂನಿಯರ್ ಆರ್ಟಿಸ್ಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಹಲವಾರು ಜೂನಿಯರ್ ಆರ್ಟಿಸ್ಟ್‌ಗಳಿಗೆ ಗಾಯಗಳಾಗಿದ್ದವು.

ಪಂಜುರ್ಲಿ ದೈವದ ಮೊರೆ ಹೋದ ರಿಷಬ್ ಶೆಟ್ಟಿ

ಚಿತ್ರೀಕರಣದ ಆರಂಭದಲ್ಲಿ ಈ ಹಲವು ಕಷ್ಟಗಳನ್ನು ಎದುರಿಸಿದ ರಿಷಬ್ ಶೆಟ್ಟಿ, 2025ರ ಏಪ್ರಿಲ್ 07 ರಂದು ಪಂಜುರ್ಲಿ ದೈವದ ಮೊರೆ ಹೋದರು. ಮಂಗಳೂರಿನ ಕದ್ರಿಯಲ್ಲಿ ನಡೆಯುತ್ತಿದ್ದ ಪಂಜುರ್ಲಿ ಕೋಲದಲ್ಲಿ ಅವರು ಭಾಗವಹಿಸಿದ್ದರು. ಆಗ ಪಂಜುರ್ಲಿ ದೈವ, “ನಿಮಗೆ ಜಗತ್ತಿನೆಲ್ಲೆಡೆ ದುಷ್ಮನ್‌ಗಳಿದ್ದಾರೆ. ನಿಮ್ಮ ಕೆಲಸ ಹಾಳು ಮಾಡಲು ಸಂಚು ರೂಪಿಸಲಾಗುತ್ತಿದೆ. ನನಗೆ ಏನಾದರೂ ಸೇವೆ ಕೊಡುತ್ತೇನೆ ಎಂದು ಹರಕೆ ಕಟ್ಟಿಕೊ ಇನ್ನು ಐದು ತಿಂಗಳಲ್ಲಿ ಎಲ್ಲಾ ಸರಿಮಾಡುತ್ತೇನೆ” ಎಂದು ಅಭಯ ನೀಡಿತ್ತು.

kanthara chapter 1 shooting :  ಕಳೆದ ಎರಡು ತಿಂಗಳಲ್ಲಿ ನಡೆದ ಅವಘಡಗಳು

ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿ ಅಭಯ ಪಡೆದ ನಂತರವೂ ಕಾಂತಾರ ತಂಡದಲ್ಲಿ ಕೆಲವು ಅವಘಡಗಳು ಸಂಭವಿಸಿದವು.

ಮೇ 06 – ಸಹ ಕಲಾವಿದ ಕಪಿಲ್ ಸಾವು: ಕಾಂತಾರ ಚಾಪ್ಟರ್ 1 ಚಿತ್ರದ ಸಹ ಕಲಾವಿದರಾಗಿದ್ದ ಕೇರಳ ಮೂಲದ ಕಪಿಲ್ ಎಂಬುವವರು ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿದ್ದಾಗ ಮುಳುಗಿ ಸಾವನ್ನಪ್ಪಿದರು.

ಮೇ 12 – ರಾಕೇಶ್ ಪೂಜಾರಿ ಸಾವು: ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ಅವರು ಮೇ 12 ರಂದು ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ನಿಧನರಾದರು.

ಜೂನ್ 12 – ಮಿಮಿಕ್ರಿ ಆರ್ಟಿಸ್ಟ್ ನಿಜು ವಿಕೆ ಸಾವು: ರಾಕೇಶ್ ಪೂಜಾರಿ ನಿಧನರಾದ ಒಂದು ತಿಂಗಳ ನಂತರ, ಮಿಮಿಕ್ರಿ ಆರ್ಟಿಸ್ಟ್ ನಿಜು ವಿಕೆ ಅವರು ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು.

kanthara chapter 1 shooting  ಪಂಜುರ್ಲಿ ದೈವದ ರಕ್ಷಣೆ

ಈ ಎಲ್ಲಾ ಘಟನೆಗಳು ಸಂಭವಿಸಿದರೂ, ಪಂಜುರ್ಲಿ ದೈವ ಈಗಾಗಲೇ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿ, “ನಿಮಗೆ ಸಾಕಷ್ಟು ಸಮಸ್ಯೆಗಳು ಬರುತ್ತವೆ, ಅವುಗಳನ್ನು ನಾನು ಪರಿಹರಿಸುತ್ತೇನೆ” ಎಂದು ಭರವಸೆ ನೀಡಿತ್ತು. ಅದರಂತೆ  ಇಲ್ಲಿ ನಡೆದ ಯಾವುದೇ ದುರದೃಷ್ಟಕರ ಘಟನೆಗಳು ಸಹ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿಲ್ಲ ಎಂಬುದು ಗಮನಾರ್ಹ.

ಗಬಡಿ ಪ್ರತಾಪ್

malenadutoday add
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article jp story today former soldiers 11-06-25 ಮಾಜಿ ಸೈನಿಕರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ | ಸಿವಿಲ್ ಡಿಫೆನ್ಸ್​​ಗೆ ಅರ್ಜಿ ಆಹ್ವಾನ 
Next Article husband ki...ll wife in shikaripura husband ki…ll wife in shikaripura 12-06-2025 / ಶಿಕಾರಿಪುರದಲ್ಲಿ ಚಿಮುಟದಿಂದ ಪತ್ನಿಯ ಕೊ*ಲೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನೀರು ಸ್ಥಗಿತಗೊಳಿಸುವಂತೆ ಒತ್ತಡ | ಮುಂಡರಗಿಯಲ್ಲಿ ಹಸಿರುಗಟ್ಟಿದ ತುಂಗಭದ್ರಾ

By 13
Malenadu Today Newspaper PDF online 15-07-2025 | Shivamogga News Digital Edition
SHIVAMOGGA NEWS TODAYJP STORYSTATE NEWS

ಮಲೆನಾಡು ಟುಡೆ ಇವತ್ತಿನ ಇ-ಪತ್ರಿಕೆ july 15 : ಸಿಗಂದೂರು ರಾಜಕಾರಣ! ಜಿಎಸ್​ಟಿ ಗುಮ್ಮಾ ಇನ್ನಷ್ಟು ವಿಶೇಷ ಸುದ್ದಿಗಳು ನಿಮಗಾಗಿ

By ajjimane ganesh
STATE NEWS

ದರ್ಶನ್‌ ಕೇಸ್‌ | ಶಿವಮೊಗ್ಗ ಸೆಂಟ್ರಲ್‌ ಜೈಲ್‌ನಿಂದ ಆರೋಪಿ 12 ರಿಲೀಸ್‌

By 13

ದೆಹಲಿ ಭೇಟಿಯಿಂದ ಭದ್ರಾವಾಯಿತಾ ಬಿವೈ ವಿಜಯೇಂದ್ರರ ಸ್ಥಾನ | ಸೈ ಎಂದರೆ ಮೋದಿ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up