ಜಸ್ಟ್ ಒಂದು ಎಸ್ಎಂಎಸ್ ನಿಮ್ಮ ಅಕೌಂಟ್ ಖಾಲಿ ಮಾಡಿಸುತ್ತೆ/ ಶಿವಮೊಗ್ಗದಲ್ಲಿ ನಡೆದ ಪ್ರಕರಣ ಇಲ್ಲಿದೆ ಓದಿ
ತಾವು ಮೋಸಕ್ಕೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ, ಮಹಿಳೆಯು ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ದಾರೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಫೈನಾನ್ಶಿಯಲ್ ಕಂಪನಿಗಳು ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಹಾಗೊಂದು ವೇಳೆ ಒಟಿಪಿ ಬ್ಯಾಂಕ್ನಿಂದ ಬಂದರೂ ಅದರ ಜೊತೆಯಲ್ಲಿ ಈ ಒಟಿಪಿಯನ್ನು ಯಾರೊಂದಿಗು ಹಂಚಿಕೊಳ್ಳಬೇಡಿ
ಸೈಬರ್ ಕ್ರೈಂ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತಲೇ ಇದೆ. ಅಲ್ಲದೆ ಶಿವಮೊಗ್ಗ ಮಾಧ್ಯಮಗಳು ಸಹ ನಿರಂತರ ಈ ಬಗ್ಗೆ ಸುದ್ದಿ ಮಾಡುತ್ತಿವೆ. ಆದಾಗ್ಯು ಇಂತಹ ಮೋಸಗಳಿಗೆ ಜನರು ತುತ್ತಾಗುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಸಾಗರ ತಾಲ್ಲೂಕಿನಲ್ಲೊಂದು ಘಟನೆ ನಡೆದಿದೆ. ಇಲ್ಲಿನ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ವೊಂದು ದಾಖಲಾಗಿದೆ. ಕೆಲದಿನಗಳ ಹಿಂದೆ ಇಲ್ಲಿನ ನಿವಾಸಿಯೊಬ್ಬರು ಬಂದ ಮೆಸೇಜ್ವೊಂದನ್ನು ತಮ್ಮ ಬ್ಯಾಂಕ್ ಖಾತೆ ಇರುವ ಎಸ್ಬಿಐ ನಿಂದ ಬಂದಿದೆ ಎಂದು ನಂಬಿ ಒಂದುವರೆ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ನಡೆದಿದ್ದು ಏನು?
ಮಹಿಳೆಯೊಬ್ಬರ ಮೊಬೈಲ್ಗೆ ಸಾಲದ ವಿಚಾರವಾಗಿ ಎಸ್ಎಂಎಸ್ ಒಂದು ಬಂದಿದೆ. ಅದನ್ನು ನಂಬಿದ ಮಹಿಳೆ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ಆಗ ಅವರಿಗೆ ಕ್ರಮವಾಗಿ ಪಾನ್ ಹಾಗು ಆಧಾರ್ ನಂಬರ್ ಕೇಳಿ ಪಡೆಯಲಾಗಿದೆ. ಆನಂತರ ಒಂದು ಒಟಿಪಿ ಬಂದಿದ್ದು ಅದನ್ನು ಸೆಂಡ್ ಮಾಡುವಂತೆ ತಿಳಿಸಿದ್ದಾರೆ. ತಮ್ಮ ಮೊಬೈಲ್ಗೆ ಬಂದಿದ್ದ ಒಟಿಪಿಯನ್ನು ಮಹಿಳೆಯು ಕಳಿಸಿದ್ದಾರೆ. ಆ ತಕ್ಷಣವೇ ಅವರ ಅಕೌಂಟ್ನಿಂದ 9300 ರೂಪಾಯಿ ಕಟ್ ಆಗಿದೆ. ಅದಾಗಿ ಎಂಟು ನಿಮಿಷದಲ್ಲಿ ಅವರ ಖಾತೆಯಿಂದ 1,47,600 ರೂಪಾಯಿ ಕಟ್ ಆಗಿದೆ.
ಇದನ್ನು ಸಹ ಓದಿ : ಪಿಕಪ್ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್
ತಾವು ಮೋಸಕ್ಕೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ, ಮಹಿಳೆಯು ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ದಾರೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಫೈನಾನ್ಶಿಯಲ್ ಕಂಪನಿಗಳು ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಹಾಗೊಂದು ವೇಳೆ ಒಟಿಪಿ ಬ್ಯಾಂಕ್ನಿಂದ ಬಂದರೂ ಅದರ ಜೊತೆಯಲ್ಲಿ ಈ ಒಟಿಪಿಯನ್ನು ಯಾರೊಂದಿಗು ಹಂಚಿಕೊಳ್ಳಬೇಡಿ ಎಂದು ಸ್ಪಷ್ಟವಾಗಿ ನಮೂದಿಸಿರಲಾಗಿರುತ್ತದೆ. ಒಟಿಪಿಯನ್ನು ಕೇವಲ ಗ್ರಾಹಕರು ಖುದ್ದಾಗಿ ಬಳಸಲಷ್ಟೆ ಒದಗಿಸಲಾಗುತ್ತದೆ ಹೊರತು, ಅದನ್ನು ಇನ್ನೊಬ್ಬರಿಗೆ ನೀಡುವುದರಿಂದ ಬ್ಯಾಂಕ್ ಅಕೌಂಟ್ ಆಗುವ ಅಪಾಯ ಇರುತ್ತದೆ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link