ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ಪಂಚಮಿಯು ರಾತ್ರಿ 12.31 ರವರೆಗೂ ಇರಲಿದ್ದು, ಆ ಬಳಿಕ ಷಷ್ಠಿ ತಿಥಿ ಆರಂಭವಾಗಲಿದೆ. ಪೂರ್ವಾಭಾದ್ರ ನಕ್ಷತ್ರವು ಮಧ್ಯಾಹ್ನ 2.01 ರವರೆಗೆ ಇರಲಿದ್ದು, ತದನಂತರ ಉತ್ತರಾಭಾದ್ರ ನಕ್ಷತ್ರವಿರಲಿದೆ. ಇಂದಿನ ವಿಶೇಷವೇನೆಂದರೆ ವಸಂತ ಪಂಚಮಿ ಹಬ್ಬ. ಅಮೃತ ಘಳಿಗೆ ಬೆಳಿಗ್ಗೆ 6.06 ರಿಂದ 7.41 ರವರೆಗೆ. ರಾಹುಕಾಲವು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇದ್ದರೆ, ಯಮಗಂಡ ಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಶಬರಿಮಲೆಯಲ್ಲಿ ಶಿವಮೊಗ್ಗ ಭಕ್ತರ ಸಂಕಷ್ಟ! ಸನ್ನಿದಾನದಿಂದಲೇ ಸಿಎಂ, ಡಿಸಿಎಂರ ಸಹಾಯ ಹಸ್ತ ಬೇಡಿದ ಸ್ವಾಮಿಗಳು
ಇವತ್ತಿನ ರಾಶಿಫಲ
ಮೇಷ | ಅಂದುಕೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ತಡೆ ಆಗಲಿದೆ. ಹಣಕಾಸಿನ ವಿಚಾರದಲ್ಲಿ ಪರಿಸ್ಥಿತಿ ಚೇತರಿಕೆ ಕಾಣಲಿದ್ದು, ಕೊಂಚ ಗೊಂದಲಮಯವಾಗಿ ಉಳಿಯಲಿದೆ. ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಕಡೆಗೆ ಗಮನ ನೀಡುವುದು, ದೈಹಿಕ ಶ್ರಮದ ದಿನ ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿರಬಹುದು.
ವೃಷಭ | ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿಗಳಿಗೆ ಇಂದು ಶುಭ ಸುದ್ದಿ. ವಾಹನ ಖರೀದಿಯ ಯೋಗ, ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಕೈಗೊಳ್ಳುವ ವ್ಯವಹಾರಗಳಲ್ಲಿ ಅಥವಾ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ. ಇಟ್ಟುಕೊಂಡಿರುವ ನಿರೀಕ್ಷೆಗಳು ನಿಜವಾಗಲಿದೆ.
ಮಿಥುನ | ಈ ದಿನ ಪೂರಕವಾಗಿರಲಿದೆ. ಹೊಸ ವ್ಯಕ್ತಿಗಳ ಪರಿಚಯ, ಮನಸ್ಸಿಗೆ ಮುದ ನೀಡುವಂತಹ ಶುಭ ವರ್ತಮಾನಗಳನ್ನು ಕೇಳಲಿದ್ದೀರಿ. ವಾಹನ ಖರೀದಿ. ದೈವಿಕ ಕಾರ್ಯಗಳಲ್ಲಿ ಆಸಕ್ತಿ, ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ವ್ಯಾಪಾರಸ್ಥರಿಗೆ ಹಾಗೂ ಉದ್ಯೋಗಿಗಳಿಗೆ ತೃಪ್ತಿಕರವಾದ ದಿನ

ಶಬರಿಮಲೆಯಲ್ಲಿ ಶಿವಮೊಗ್ಗ ಭಕ್ತರ ಸಂಕಷ್ಟ! ಸನ್ನಿದಾನದಿಂದಲೇ ಸಿಎಂ, ಡಿಸಿಎಂರ ಸಹಾಯ ಹಸ್ತ ಬೇಡಿದ ಸ್ವಾಮಿಗಳು
ಕರ್ಕಾಟಕ | ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಕಾಣದ ಬೇಸರ ಕಾಡಬಹುದು. ಜಮೀನು ಅಥವಾ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಎದುರಾಗುವ ಸಾಧ್ಯತೆ . ಮಾನಸಿಕ ನೆಮ್ಮದಿಗಾಗಿ ದೈವ ದರ್ಶನ ಪಡೆಯುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಏರಿಳಿತಗಳಿಲ್ಲದೆ ಸಾಧಾರಣವಾಗಿ ಸಾಗಲಿದೆ.
ಸಿಂಹ | ಭಿನ್ನಾಭಿಪ್ರಾಯ ಮೂಡಿಬರಬಹುದು. ಹಣಕಾಸಿನ ವಹಿವಾಟು ನಿರೀಕ್ಷಿತ ಮಟ್ಟ ತಲುಪುವುದು, ಕೈಗೆತ್ತಿಕೊಂಡ ಕೆಲಸಗಳಲ್ಲಿ ಅನಗತ್ಯ ವಿಳಂಬ ಉಂಟಾಗಲಿದೆ. ಕೌಟುಂಬಿಕವಾಗಿ ಒತ್ತಡ. ದೇವರ ಕಾರ್ಯಕೈಗೊಳ್ಳುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆಯಲಿದೆ.
ಕನ್ಯಾ | ಹಳೆಯ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ಕುಟುಂಬದ ಸದಸ್ಯರಿಂದ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ದೊರೆಯಲಿದೆ. ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸಲಿದ್ದು, ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಮತ್ತು ವೇಗವಾಗಿ ಸಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ಸಿಗುವುದು.

ಶಿವಮೊಗ್ಗ ರೌಂಡ್ ಅಪ್ |ನಾಪತ್ತೆಯಾಗಿದ್ದ ಮಕ್ಕಳು ಪತ್ತೆ| ರೈತನ ಮೇಲೆ ಕರಡಿ ದಾಳಿ|ಚಿನ್ನ ಕದ್ದವನಿಗೆ ಜೈಲು|
ತುಲಾ | ಕೈಹಾಕುವ ಪ್ರತಿಯೊಂದು ವ್ಯವಹಾರದಲ್ಲೂ ವಿಜಯಶಾಲಿಗಳಾಗುತ್ತೀರಿ. ಕೃಷಿ ಭೂಮಿ ಅಥವಾ ವಾಹನಗಳನ್ನು ಖರೀದಿಸುವ ಯೋಗವಿದೆ. ವೈಯಕ್ತಿಕ ಅಥವಾ ಕೌಟುಂಬಿಕ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ವಾತಾವರಣವು ಅತ್ಯಂತ ಅನುಕೂಲಕರವಾಗಿರಲಿದೆ.
ವೃಶ್ಚಿಕ | ಹಣಕಾಸಿನ ಮುಗ್ಗಟ್ಟು, ಬಂಧುಗಳೊಂದಿಗೆ ಅನಗತ್ಯ ವಿವಾದ. ಕೆಲಸ ಹಠಾತ್ತನೆ ಅರ್ಧಕ್ಕೆ ನಿಲ್ಲಿಸಬೇಕಾದ ಪ್ರಸಂಗ ಎದುರಾಗಬಹುದು. ಅನಾರೋಗ್ಯದ ಸಮಸ್ಯೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗ ಕ್ಷೇತ್ರದಲ್ಲಿಯೂ ಹೊಸ ಹೊಸ ಸವಾಲು
ಧನು | ಆರ್ಥಿಕ ವ್ಯವಹಾರ ಸಮಾಧಾನ ತರುವುದಿಲ್ಲ, ಕೆಲಸ ಕಾರ್ಯಗಳಲ್ಲಿ ಅತಿಯಾದ ದೈಹಿಕ ಶ್ರಮ. ಅಂದುಕೊಂಡ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗದೆ ಮುಂದೂಡುವ ಸಾಧ್ಯತೆ. ಆಲೋಚನೆಗಳು ಚಂಚಲವಾಗಿರುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯು ಆಮೆ ನಡಿಗೆಯಂತಿರಲಿದೆ.
ಮಕರ | ಪಡುವ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಹೊಸ ಕೆಲಸ ಕಾರ್ಯಗಳಿಗೆ ಚಾಲನೆ. ಸುಖ ದುಃಖಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುವಿರಿ. ಆಸ್ತಿ ಸಂಬಂಧಿತ ವಿವಾದ ಬಗೆಹರಿಯುವ ಲಕ್ಷಣಗಳಿವೆ. ವ್ಯಾಪಾರ ವಹಿವಾಟುಗಳು ಮತ್ತು ಉದ್ಯೋಗದಲ್ಲಿ ಪರಿಸ್ಥಿತಿ ಸುಧಾರಿಸಲಿದೆ.
ಕುಂಭ | ವ್ಯವಹಾರ ಅಥವಾ ಉದ್ಯೋಗದಲ್ಲಿ ನಿರೀಕ್ಷಿತ ವೇಗದ. ಆಲೋಚನೆಗಳನ್ನ ಕಾರ್ಯರೂಪಕ್ಕೆ ತರಲು ಅಡೆತಡೆ ಎದುರಾಗಬಹುದು. ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ. ಸಿಗುವ ಫಲಿತಾಂಶಗಳು ನಿಮಗೆ ತೃಪ್ತಿಯನ್ನು ತಂದುಕೊಡಲಿವೆ.
ಮೀನ | ಪರಿಚಯಸ್ಥರ ವಲಯ ಹಿರಿದಾಗಲಿದೆ. ಧನಲಾಭ, ಕೈಯಲ್ಲಿ ಹಣ ಓಡಾಡಲಿದೆ. ಹಳೆಯ ವಿವಾದ ಮಾತುಕತೆಯ ಮೂಲಕ ಇತ್ಯರ್ಥವಾಗಲಿವೆ. ಉದ್ಯೋಗ ಬದಲಾವಣೆ ಅಥವಾ ಹೊಸ ಉದ್ಯೋಗದ ಪ್ರಯತ್ನಗಳು ಫಲಪ್ರದವಾಗಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಹುಮ್ಮಸ್ಸು ಕಾಣುವಿರಿ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
