ipl final match ಪಂಜಾಬ್​ ಆರ್​​ಸಿಬಿ ಫೈನಲ್​ ಮ್ಯಾಚ್​, ರಕ್ತದಾನ, ಪೂಜೆ, ಶಿವಮೊಗ್ಗದಲ್ಲಿ ಹೇಗಿದೆ ಆರ್​ಸಿಬಿ ಅಭಿಮಾನಿಗಳ ಜೋಷ್​

prathapa thirthahalli
Prathapa thirthahalli - content producer

ipl final match ಇಂದು ಸಂಜೆ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ಹಾಗೂ ಪಂಜಾಬ್​ ಕಿಂಗ್ಸ್​ ನಡುವೆ ಐಪಿಎಲ್​ ಫೈನಲ್​ ಮ್ಯಾಚ್​ ನಡೆಯಲಿದೆ. ಕಳೆದ 9 ವರ್ಷಗಳ ಬಳಿಕ ಆರ್ಸಿಬಿ ಫೈನಲ್​ ತಲುಪಿದ್ದು, ಆರ್​ಸಿಬಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ. ಇದರ ನಡುವೆ ಆರ್ಸಿಬಿ ತನ್ನ ಚೊಚ್ಚಲ ಟ್ರೋಫಿಯನ್ನು ಗೆಲ್ಲಲಿ ಎಂದು ನಾಡಿನೆಲ್ಲಡೆ ಅಭಿಮಾನಿಗಳು  ದೇವರುಗಳಿಗೆ ಹರಕೆ ಕಟ್ಟಿಕೊಳ್ಳುವುದು ಪೂಜೆ ಮಾಡಿಸುವುದು ಸೇರಿದಂತೆ ಇತರೆ ಕಾರ್ಯದಲ್ಲಿ ನಿರತರಾದ್ದಾರೆ. ಅದರಂತೆ ಇಂದು ಶಿವಮೊಗ್ಗದಲ್ಲಿಯೂ ಆರ್ಸಿಬಿ ಗೆಲ್ಲಲಿ ಎಂದು ವಿವಿಧೆಡೆ ಅಭಿಮಾನಿಗಳು  ಪೂಜೆ ಮಾಡಿಸುವುದು ಸೇರಿದಂತೆ ವಿಭಿನ್ನರೀತಿಯಲ್ಲಿ ಆರ್ಸಿಬಿಗೆ ಶುಭ ಕೋರಿದ್ದಾರೆ. 

ipl final match ಸ್ಟೈಲ್​ ಡ್ಯಾನ್ಸ್​ ಗ್ರೂಪ್​ನಿಂದ ಆರ್​​ಸಿಬಿಗೆ ಶುಭ ಹಾರೈಕೆ

ಆರ್ಸಿಬಿಗೆ ಶುಭವಾಗಲಿ ಎಂದು  ಇಂದು ಶಿವಮೊಗ್ಗದ ಸ್ಟೈಲ್​ ಡ್ಯಾನ್ಸ್​ ಗ್ರೂಪ್​ನಿಂದ ಶುಭ ಹಾರೈಸಲಾಯಿತು. ಮಕ್ಕಳೆಲ್ಲರೂ ಸಹ ಆರ್ಸಿಬಿಯ ಟೀಶರ್ಟ್​ ತೊಟ್ಟು ಗೆದ್ದು ಬಾ ಆರ್ಸಿಬಿ ಎಂದು ಘೋಷಣೆ  ಕೂಗಿದರು. ಹಾಗೆಯೇ ಕನ್ನಡದ  ಭಾವುಟ ಹಿಡಿದು ಹೆಜ್ಜೆ ಹಾಕಿ ಶುಭ ಕೋರಿದರು.

ipl final match
ipl final match ಡ್ಯಾನ್ಸ್​ ಮೂಲಕ ಶುಭ ಕೋರಿದ ಅಭಿಮಾನಿಗಳು

 

ipl final match ವಿರಾಟ್​ ಕೊಹ್ಲಿ ಕಟೌಟ್​ಗೆ ಹಾಲಿನ ಅಭಿಷೇಕ

ಶಿವಮೊಗ್ಗದ ಕುಂಬಾರಗುಂಡಿ ಯುವಕರ ತಂಡದಿಂದ ಆರ್​ಸಿಬಿ ಗೆದ್ದು ಬರಲೆಂದು ಶುಭ ಹಾರೈಸಲಾಯಿತು.ಹಾಗೆಯೇ ವಿರಾಟ್ ಕೊಹ್ಲಿ ಹಾಗೂ ಪಟಿದಾರ್, ನಟ ದರ್ಶನ್, ಸುದೀಪ್ ಕಟೌಟ್​ ಗೆ ಹಾಲಿನ ಅಭಿಷೇಕ ಮಾಡಲಾಯಿತು. ಕಾಯಿಯಲ್ಲಿ ಕರ್ಪೂರ ಹಚ್ಚಿ ಪೂಜೆ ಮಾಡಿ ಶುಭ ಕೋರಿದರು.

ipl final match
ipl final match ಕಟೌಟ್​ಗೆ ಹಾಲಿನ ಅಭಿಷೇಕ

 ರಾಷ್ಟ್ರ ಭಕ್ತ ಭಳಗದಿಂದ ವಿಶೇಷ ಪೂಜೆ

ಆರ್ಸಿಬಿ ತಂಡ ಟ್ರೋಪಿ ಗೆಲ್ಲಲಿ ಎಂದು ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ರಾಷ್ಟ್ರಭಕ್ತಬಳಗದಿಂದ ಪೂಜೆ ಸಲ್ಲಿಸಲಾಯಿತು. ಈ ವೇಳೆ ಅಭಿಮಾನಿಗಳು ನಾವೆಲ್ಲಾ ಹೇಳೊದು ಒಂದೇ ಈ ಸಲ ಕಪ್ ನಮ್ದೆ ಎಂದು ಘೋಷಣೆ ಕೂಗಿ ಆರ್ಸಿಬಿಗೆ ಶುಭ ಕೋರಿದರು.

ಹೊಳೆಬೆನವಳ್ಳಿ ಯುವಕರ ಬಳಗದಿಂದ ರಕ್ತದಾನ ಶಿಬಿರ

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಈ ದಿನ ನಡೆಯುವ ಐಪಿಎಲ್ ಫೈನಲ್ ನಲ್ಲಿ ಗೆಲುವನ್ನು ಸಾಧಿಸಲು ಹೊಳೆಬೆನವಳ್ಳಿ ಯುವಕರ ಬಳಗ ರವರ ವತಿಯಿಂದ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. RCB ತಂಡವು ಈ ಸಲ ಕಪ್ ನಮ್ಮದಾಗಿಸಿಕೊಳ್ಳಬೇಕು ಎಂಬ ಭರವಸೆಯಿಂದ ಯುವಕರೆಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.

ipl final match ಅಭಿಮಾನಿಗಳ ವತಿಯಿಂದ ರಕ್ತದಾನ ಶಿಬಿರ
ipl final match ಅಭಿಮಾನಿಗಳ ವತಿಯಿಂದ ರಕ್ತದಾನ ಶಿಬಿರ

ಹೀಗೆ ರಾಜ್ಯದೆಲ್ಲೆಡೆ ಇಂದು ಆರ್​ಸಿಬಿ ಫೈನಲ್​ನಲ್ಲಿ ಗೆದ್ದುಬರಲೆಂದು ರಾಜ್ಯಾಧ್ಯಂತ ವಿಭಿನ್ನ ರೀತಿಯಲ್ಲಿ ಶುಭ ಕೋರಲಾಗುತ್ತಿದೆ. ಕೆಲವೊಂಡು ಹೋಟೆಲ್​ಗಳಲ್ಲಿ ಇಂದು ಆರ್ಸಿಬಿ ಫೈನಲ್​ ತಲುಪಿರುವ ಸಲುವಾಗಿ ಮೆನುಗಳಲ್ಲಿ ವಿವಿಧ ಆಫರ್​ಗಳನ್ನು ಕೊಡಲಾಗುತ್ತಿದೆ.  ಆರ್​ಸಿಬಿಗೆ ಈ ರೀತಿಯ ಆಚರಣೆ ಹೊಸದೇನಲ್ಲ ಕಳೆದ 18  ವರ್ಷದಿಂದ ಪ್ರತಿ ಭಾರಿಯೂ ಸಹ ಈ ಸಲ ಕಫ್​ ನಮ್ದೇ ಎಂಬ ಘೋಷವಾಕ್ಯದೊಂದಿಗೆ  ಆರ್​ಸಿಬಿ ಅಭಿಮಾನಿಗಳು ಈ ರೀತಿ ವಿಭಿನ್ನವಾಗಿ ಶುಭ ಕೋರುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಆರ್​ಸಿಬಿ ಈ ಬಾರಿ ತನ್ನ ಚೊಚ್ಚಲ ಕಪ್​ನ್ನು ಗೆದ್ದರೆ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ. ಒನ್ಸ್​ ಅಗೈನ್​ ನಮ್ಮ ಮಲೆನಾಡು ಟುಡೆ ಬಳಗದಿಂದಲೂ ಸಹ ಆರ್​ಸಿಬಿ ಗೆದ್ದು ಬರಲೆಂದು ಶುಭ ಹಾರೈಕೆಗಳನ್ನು ಕೋರುತ್ತಿದ್ದು, 18 ವರ್ಷದಿಂದ ಕಪ್​ ಗೆಲ್ಲಲಿಲ್ಲ ಎಂಬ ಕೊಟ್ಯಾಂತರ ಅಭಿಮಾನಿಗಳ ಕೊರಗನ್ನು ಆರ್​ಸಿಬಿ ಈ ಬಾರಿ ನಿವಾರಿಸುವಂತಾಗಲಿ. ಜೈ ಆರ್​ಸಿಬಿ, ಈ ಸಲ ಕಪ್​ ನಮ್ದೆ.

  

 

Share This Article