ಮೂರು ತಿಂಗಳಿನಲ್ಲಿಯೇ ಮರುಕಳಿಸಿದ ಆರೋಪ! ಈ ಸಲ ಬಿಜೆಪಿಯಿಂದಲೇ ಕೇಳಿಬಂತು! ದೂರು! ಸಾಗರ ಶಾಸಕರ ವಿರುದ್ಧ ಏನದು ಕಂಪ್ಲೆಂಟ್!?

Honagodu Ratnakar alleged that the MLA and his supporters were harassing him in Sagar taluk ಸಾಗರ ತಾಲ್ಲೂಕಿನಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರು ಕಿರುಕುಳ ನೀಡುತ್ತಿದ್ದಾರೆ ಎಂದು ಹೊನಗೋಡು ರತ್ನಾಕರ್ ಆರೋಪಿಸಿದ್ದಾರೆ

ಮೂರು ತಿಂಗಳಿನಲ್ಲಿಯೇ ಮರುಕಳಿಸಿದ ಆರೋಪ! ಈ ಸಲ ಬಿಜೆಪಿಯಿಂದಲೇ ಕೇಳಿಬಂತು! ದೂರು! ಸಾಗರ ಶಾಸಕರ ವಿರುದ್ಧ ಏನದು ಕಂಪ್ಲೆಂಟ್!?

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲೀಗ ಕಿರುಕುಳದ ಆರೋಪ ಮತ್ತೆ ಕೇಳಿಬಂದಿದೆ. ಈ ಹಿಂದಿನ ಸರ್ಕಾರದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕೇಳಿಬಂದಿದ್ದ ಆರೋಪ ಇದೀಗ ಕಾಂಗ್ರೆಸ್​ನವರ ವಿರುದ್ಧ  ಕೇಳಿಬರುತ್ತಿದೆ. 

 

ಕಳೆದ ಮೂರು ತಿಂಗಳಿನಿಂದ ಸಾಗರ ಕ್ಷೇತ್ರದ ಶಾಸಕರು ಹಾಗೂ ಅವರ ಬೆಂಬಲಿಗರು ಅಧಿಕಾರಿಗಳ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರತ್ನಾಕರ್ ಹೊನಗೋಡು ಆರೊಪಿಸಿದ್ಧಾರೆ. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊನಗೋಡು ರತ್ನಾಕರ್​ರವರು  ಸಾಗರ ತಾಲ್ಲೂಕಿನಲ್ಲಿ ಭಯದ ವಾತವಾರವಿದೆ. 2013ರ ಲ್ಲಿದ್ದ ಸನ್ನಿವೇಶ ಇದೀಗ ಮರುಕಳಿಸಿದೆ. ಈ ವಿಷಯದಲ್ಲಿ ಕಾಗೋಡು ತಿಮ್ಮಪ್ಪವರು ಮೌನ ವಹಿಸಬಾರದು ಎಂದು ಮನವಿ ಮಾಡಿದ್ದಾರೆ. 

 

ಕಲ್ಲುಕ್ವಾರಿ , ಮರಳು , ಮಣ್ಣು ಸಾಗಣೆಯಲ್ಲಿ ಪಕ್ಷದ ವಿಷಯಗಳು ಪ್ರವೇಶ ಮಾಡುತ್ತಿದ್ದು, ಬಿಜೆಪಿ ಪರವಾದವರ ವಿರುದ್ಧ ಕಾನೂನು ಸಮರ ಸಾರಲಾಗುತ್ತಿದೆ. ಬಿಜೆಪಿ ಪರವಿದ್ದವರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲದೆ ಅವುಗಳನ್ನು ವಾರ ಕಳೆದರೂ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಶಾಸಕರ ಬೆಂಬಲಿಗರ ವಾಹನಗಳು ಸೀಜ್​ ಆದರೆ ತಕ್ಷಣವೇ ಬಿಡುಗಡೆಯಾಗುತ್ತಿದೆ ಎಂದ ಹೊನಗೋಡು ರತ್ನಾಕರ್​,  ಇದು ಒಂದು ಇಲಾಖೆಗೆ ಸಿಮಿತವಾಗದೆ ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿದೆ ಎಂದಿದ್ಧಾರೆ. 

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬೆಂಬಲ ನೀಡಲಿಲ್ಲ ಎನ್ನುವ ಕಾರಣಕ್ಕೆ, ಅಧಿಕಾರಿಗಳ ಮೂಲಕ ಜನಪ್ರತಿನಿಧಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ಧಾರೆ.   




ಇನ್ನಷ್ಟು ಸುದ್ದಿಗಳು