ಭದ್ರಾ ಚಾನಲ್​ಗೆ ಈಜಲು ಹೋಗಿದ್ದ ಇಂಜಿನಿಯರ್ ಸಾವು! ನಡೆದಿದ್ದೇನು?

ಶಿವಮೊಗ್ಗದ ಭದ್ರಾ ಚಾನಲ್​ನಲ್ಲಿ ಈಜಲು ತೆರಳಿದ್ದ 26 ವರ್ಷದ ಇಂಜಿನಿಯರ್ ಒಬ್ಬ  ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸೂಡಿಯ ಹೊನ್ನವಿಲೇ ಗ್ರಾಮದಲ್ಲಿ ಘಟನೆ ನಡೆದಿದ್ದು, ನಿನ್ನೆ ಮೃತ ಸೂರ್ಯ ಚಾನಲ್​ಗೆ ತೆರಳಿದ್ದ. 

READ | ಶಿವಮೊಗ್ಗ ವಿಮಾನ ನಿಲ್ದಾಣದ ಈ ದೃಶ್ಯವನ್ನು ನೀವು ನೋಡಿದ್ದೀರಾ!? ಇಲ್ಲಿದೆ ನೋಡಿ ವಿಡಿಯೋ

ನೀರಿಗೆ ಇಳಿದು  ಈಜು ಹೊಡೆಯುತ್ತಿದ್ದ ಈತನಿಗೆ ಎನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನೀರಿನಲ್ಲಿ ಮುಳುಗಿದ್ದ ಸೂರ್ಯ, ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನನಲ್ಲಿ ಇಂಜಿನಿಯರಿಂಗ್​ ಓದು ಮುಗಿಸಿ , ಕೆಲಸ ಸೇರಿದ್ದ ಸೂರ್ಯ, ರಜೆ ಮೇಲೆ ಶಿವಮೊಗ್ಗಕ್ಕೆ ಬಂದಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ. ಇನ್ನೂ ಘಟನೆ ಸಂಬಂಧ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿದ್ದಾರೆ. 

READ | ಮಾಡಾಳ್ ಲೋಕಾ ರೇಡ್​ ಎಫೆಕ್ಟ್! ಚೆನ್ನಗಿರಿ ಕ್ಷೇತ್ರಕ್ಕೆ ಜೀವಪರವಾಗುತ್ತಾರಾ ಡಾ.ಧನಂಜಯ್ ಸರ್ಜಿ!? ಏನಿದು ಚರ್ಚೆ!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Leave a Comment