ಶಿವಮೊಗ್ಗದಲ್ಲಿ ದಸರಾ ಕಳೆ | ಅಂಬಾರಿ ಹೊರಲು ಸಿದ್ದವಾದ ಗಜಪಡೆ | ಈ ಸಲ ಸಕ್ರೆಬೈಲ್ ಆನೆ ಬಿಡಾರ ದಿಂದ ಯಾರ್ಯಾರು ಬರ್ತಿದ್ದಾರೆ ಗೊತ್ತಾ

Elephants being trained for Shimoga Dussehra at Sakrebyle Elephant Sanctuary ಸಕ್ರೆಬೈಲ್ ಆನೆ ಬಿಡಾರದಲ್ಲಿ ಆನೆಗಳಿಗೆ ಶಿವಮೊಗ್ಗ ದಸರಾಕ್ಕಾಗಿ ತರಭೇತಿ ನೀಡಲಾಗುತ್ತಿದೆ

ಶಿವಮೊಗ್ಗದಲ್ಲಿ ದಸರಾ ಕಳೆ |  ಅಂಬಾರಿ ಹೊರಲು ಸಿದ್ದವಾದ ಗಜಪಡೆ |  ಈ ಸಲ ಸಕ್ರೆಬೈಲ್ ಆನೆ ಬಿಡಾರ ದಿಂದ ಯಾರ್ಯಾರು ಬರ್ತಿದ್ದಾರೆ ಗೊತ್ತಾ



KARNATAKA NEWS/ ONLINE / Malenadu today/ Oct 12, 2023 SHIVAMOGGA NEWS

ಶಿವಮೊಗ್ಗದಲ್ಲಿ ನಡೆಯುವ ದಸರಾ ಹಬ್ಬಕ್ಕೆ ಸಕ್ರೆಬೈಲ್ ಆನೆ ಬಿಡಾರ ದಿಂದ  ಆನೆಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿತ್ತು. ಆದರೆ ಯಾವ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬುದು ಗೊಂದಲ ಮೂಡಿಸಿತ್ತು. ಈ ಬಗ್ಗೆ ಮಲೆನಾಡು ಟುಡೆ ನೀಡಿದ ವರದಿ ಇಲ್ಲಿದೆ ಅರಣ್ಯ ಇಲಾಖೆಯಿಂದ ಸಿಕ್ತು ಪರ್ಮಿಶನ್! ಆದರೆ ಶಿವಮೊಗ್ಗ ಜಂಬೂ ಸವಾರಿಗೆ ಬರಲು ಸಕ್ರೆಬೈಲ್​​ನಲ್ಲಿ ಆನೆಯದ್ದೆ ಸಮಸ್ಯೆ ! ಏನು ಗೊತ್ತಾ?

ಸದ್ಯ ಈ ವಿಚಾರದಲ್ಲಿ ಎಲ್ಲವೂ ಸರಿಯಾಗಿದ್ದು, ಸಕ್ರೆಬೈಲ್ ಆನೆ ಕ್ಯಾಂಪ್​ನಲ್ಲಿ  ಆನೆಗಳಿಗೆ ತಾಲೀಮು ನಡೆಯುತ್ತಿದೆ. 

ನಾಡಹಬ್ಬ ದಸರಾ ಹಬ್ಬ ಹಿನ್ನೆಲೆ ಅಂಬಾರಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ  ತಾಲೀಮು ಶುರುವಾಗಿದೆ. ಅಂದಹಾಗೆ, ಈ ಬಾರಿ ಸಾಗರ, ನೇತ್ರಾವತಿ ಆನೆಗಳ ಜೊತೆ ಭಾನುಮತಿ ಬದಲಾಗಿ ಹೇಮಾವತಿ ಆನೆ ಹೆಜ್ಜೆ ಹಾಕಲಿದೆ.

ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವ ಗಜಪಡೆಗೆ ಹಬ್ಬಕ್ಕೆ ಎರಡೂರು ದಿನ ಬಾಕಿ ಇರುವಾಗ ತಾಲೀಮು ಶುರು ಮಾಡುತ್ತಿದ್ದರು. ಆದರೆ, ಈ ಬಾರಿ ದಸರಾಕ್ಕೆ ಇನ್ನು 12 ದಿನಗಳು ಬಾಕಿ ಇರುವಾಗಲೇ ತಾಲೀಮು ಶುರು ಮಾಡಿರುವುದು ವಿಶೇಷ

ಸಾಗರ, ನೇತ್ರಾವತಿ, ಹೇಮಾವತಿ ಆನೆಗಳಿಗೆ ವಿಶೇಷ ತಾಲೀಮು ನೀಡಲಾಗುತ್ತಿದೆ. ಸಕ್ರೆಬೈಲ್​ನಲ್ಲಿ ಆನೆಗಳ ಮೇಲ ಜನಸವಾರಿ ಮಾಡುವ ಟೇಬಲ್​ನ್ನ ಬಳಸಿಕೊಂಡು ಸಾಗರ್​ಗೆ ಅಂಬಾರಿ ಹೊರುವ ತಾಲೀಮು ನೀಡಲಾಗುತ್ತಿದೆ. 

ಸಕ್ರೆಬೈಲು ಮುಖ್ಯ ರಸ್ತೆಗಳಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ.

ಶಿವಮೊಗ್ಗದಲ್ಲಿ ಅಂಬಾರಿ ಹೊರುವ ಪರಂಪರೆ ಶುರುವಾದಾಗಿಂದ ಶಾಂತ ಸ್ವಭಾವದ ಸಾಗರ ಆನೆಯೇ ಈ ಕೆಲಸ ಮಾಡುತ್ತಿದೆ. ಈತನೊಂದಿಗೆ ಸಕ್ರೆಬೈಲು ಆನೆ ಬಿಡಾರದ ಹಿರಿಯಾನ ನೇತ್ರಾವತಿ ಮತ್ತು ಭಾನುಮತಿ ಸಾಥ್ ನೀಡುತ್ತಿದ್ದವು, ಆದರೆ, ಈ ವರ್ಷ ಭಾನುಮತಿ ಬದಲು 'ಹೇಮಾವತಿ' ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಭಾನುಮತಿಗರ್ಭಿಣಿ ಆಗಿರುವುದರಿಂದ ಈ ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?