ಜೂನ್ ತಿಂಗಳ​ ವಿದ್ಯುತ್​ ಬಿಲ್​ ವಿಳಂಬ! ಕಾರಣವೇನು? ಮೆಸ್ಕಾಂ ಪ್ರಕಟಣೆಯಲ್ಲಿ ಏನಿದೆ

ಹಂಚಿಕೊಳ್ಳಿ
WhatsApp Facebook X Telegram
ಜೂನ್ ತಿಂಗಳ​ ವಿದ್ಯುತ್​ ಬಿಲ್​ ವಿಳಂಬ! ಕಾರಣವೇನು? ಮೆಸ್ಕಾಂ ಪ್ರಕಟಣೆಯಲ್ಲಿ ಏನಿದೆ

KARNATAKA NEWS/ ONLINE / Malenadu today/ Jun 11, 2023 SHIVAMOGGA NEWS

ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್‌ ಗ್ರಾಹಕರಿಗೆ ಜೂನ್ ತಿಂಗಳ ವಿದ್ಯುತ್ ಬಿಲ್ ವಿಳಂಬವಾಗಲಿದೆ ಎಂದು ನಗರ ಉಪ ವಿಭಾಗದ ಅಧಿಕಾರಿಗಳು ಪ್ರಕಟಣೆಯನ್ನ ಹೊರಡಿಸಿದ್ದಾರೆ. 

ಈ ಸಂಬಂಧ  ಸಹಾಯಕ ಕಾರ್ಯ ನಿರ್ವಾಹಕ  ಇಂಜಿನಿಯರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಚೇರಿ ಯಲ್ಲಿ ವಿದ್ಯುತ್‌ ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ,  ಆರ್ ಎಪಿಡಿಆರ್‌ಪಿ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯಂತೆ. ಹೀಗಾಗಿ  ಜೂನ್​ ತಿಂಗಳ ಬಿಲ್​ ವಿತರಿಸುವುದು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.


ಶಿವಮೊಗ್ಗ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ನಗರ ಉಪ ವಿಭಾಗ-2ರ ಘಟಕ-2,5,6 ರ ವ್ಯಾಪ್ತಿಯಲ್ಲಿನ ಮಂಡಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ಸ್ಮಾರ್ಟ್‌ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಳಕಂಡ ಪ್ರದೇಶಗಳಲ್ಲಿ ಜೂ.11ರ ಬೆಳಗ್ಗೆ 9ರಿಂದ ಸ೦ಜೆ 6ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ?

ಪಿಯ‌ರ್​ ಲೈಟ್, ಪೇಪ‌ರ್​ ಪ್ಯಾಕ್ಟರಿ, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಪೆ, ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ತುಂಗಾನಗರ ಆಸ್ಪತ್ರೆ, ಚಾಲುಕ್ಯನಗರ, ಕೆಎಚ್‌ ಬಿ ಕಾಲೊನಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಹಳೇ ಗೋಪಿಶೆಟ್ಟಿಕೊಪ್ಪ, ಎನ್.ಟಿ.ರಸ್ತೆ ಮತ್ತು ಬಿ.ಎಚ್. ರಸ್ತೆ ಸುತ್ತಮುತ್ತ, ಬಸ್ ನಿಲ್ದಾಣ, ಊರುಗಡೂರು, ಸುತ್ತ ಮುತ್ತಲಿನ ಪ್ರದೇಶ, ಆರ್‌ ಎಂಎಲ್ ನಗರ, ದುರ್ಗಿಗುಡಿ, ಸವಾರ್‌ ಲೈನ್ ರಸ್ತೆ, ಹರಕೆರೆ, ಗಾಂಧಿ ಬಜಾರ್, ಇಲಿಯಾಸ್ ನಗರ, ಗಾಜನೂರು, ರಾಮೇನಕೊಪ್ಪ, ಕಲ್ಲೂರು ಮಂಡಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಗೋವಿಂದಾ ಪುರ, ಪುರದಾಳು, ಶರಾವತಿ ನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor