ಚಿಕ್ಕಮಗಳೂರು : ಬಾಲಕನ ಮೇಲೆ ಚಿರತೆ ದಾಳಿ : ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು : ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ. ಹೃದಯ್ (11) ಚಿರತೆ ದಾಳಿಯಲ್ಲಿ ಗಾಯಗೊಂಡಿರುವ ದುರ್ದೈವಿ.

ಮನೆ ಮುಂದೆ ನಿಂತಿದ್ದ ಬಾಲಕ ಹೃದಯ್ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ. ಇದರ ಪರಿಣಾಮ ಬಾಲಕನಿಗೆ ಗಂಭೀರಗಾಯಗಳಾಗಿದ್ದು. ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಸ್ಥಿತಿ ಕಂಡು ಆಸ್ಪತ್ರೆಯಲ್ಲಿ ಪೋಷಕರು ಕಣ್ಣೀರು ಹಾಕುತ್ತಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ..ಕಳೆದ ಒಂದು ವಾರದ ಹಿಂದೆ  ತರೀಕೆರೆ ಅರಣ್ಯ ವಿಭಾಗದ  ಲಿಂಗದಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿ  ಮೇಲೆ ಚಿರತೆ ದಾಳಿ  ನಡೆಸಿತ್ತು. ಆ ಘಟನೆ.ಮಾಸುವ ಮುನ್ನವೇ ಈ ದಾಳಿ ನಡೆಸಿದ್ದು. ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

Leopard Attack Injures Boy in Chikmagalur Tarikere