ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC) ಬಸ್​ಗಳ ಓಡಾಟ! ಕಾರಣವೇನು ಗೊತ್ತಾ?

Do you know the reason for the movement of Bangalore City Transport (BMTC) buses at Shivamogga bus stand?

ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC)  ಬಸ್​ಗಳ ಓಡಾಟ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ May 10, 2023 GOOGLE NEWS 

ಶಿವಮೊಗ್ಗ ನಗರದ ಬಸ್​ ನಿಲ್ಧಾಣದಲ್ಲಿ ಇವತ್ತು ಬೆಂಗಳೂರು ನಗರ ಸಂಚಾರಕ್ಕೆ ಮೀಸಲಾಗಿರುವ ಬಿಎಂಟಿಸಿ ಬಸ್​ಗಳ ಓಡಾಟ ಕಾಣ ಸಿಕ್ಕಿತ್ತು. ಇದು ಅಚ್ಚರಿಗೆ ಕಾರಣವಾಗಿತ್ತು. ಕೆಎಸ್​ಆರ್​ಟಿಸಿ  ಬಸ್​ಗಳು ಸೇರಿದಂತೆ ಖಾಸಗಿ ಬಸ್​ಗಳನ್ನು ಸಹ ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬಸ್​ಗಳ ಕೊರತೆ ಎದ್ದು ಕಾಣುತ್ತಿತ್ತು. ಪರಸ್ಥಳದಿಂದ ವೋಟು ಹಾಕಲು ಹೊರಟವರು, ವೋಟು ಹಾಕಿ ವಾಪಸ್ ಹೊರಟವರು, ಬಸ್​ಗಳಿಗಾಗಿ ಪರದಾಡುವಂತಾಗಿತ್ತು. 

ಇನ್ನೊಂದೆಡೆ ಬಸ್​ಗಳ ಕೊರತೆಯನ್ನು ನೀಗಿಸಲು ಸಾರಿಗೆ ನಿಗಮ ಶಿವಮೊಗ್ಗದಲ್ಲಿ ಬಿಎಂಟಿಸಿ ಬಸ್​ಗಳನ್ನ  ಬಿಟ್ಟಿತ್ತು. ಆಲ್ಮೋಸ್ಟ್​ ಗಂಟೆಗೊಂದು ಬಸ್​ ಗಳ  ಓಡಾಟ ಕಂಡುಬಂದಿದ್ದು ವಿಶೇಷವಾಗಿ ಬಿಎಂಟಿಸಿ ಬಸ್​ಗಳ ಓಡಾಟ ಕುತೂಹಲ ಮೂಡಿಸಿತ್ತು. ಜನರಿಗೆ ತೊಂದರೆಯಾಗದಂತೆ ನೀರ್ವಹಿಸಲು ಕೆಎಸ್​ಆರ್​ಟಿಸಿ ಬೆಂಗಳೂರಿನ ಬಸ್​ಗಳನ್ನು ಲಾಂಗ್​ ರೂಟ್​ನಲ್ಲಿ ಓಡಿಸಿದೆ ಎನ್ನಲಾಗಿದೆ.

ಈ ಬಸ್​ಗಳ ಚಾಲಕರಿಗೆ ರೂಟ್​ ಗೊತ್ತಿಲ್ಲದೇ ಇರುವುದು ಕೂಡ ಸಾಕಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಅಲ್ಲಲ್ಲಿ ದಾರಿಯಾವುದಯ್ಯ ಎಂದು ವಿಚಾರಿಸಿ ಚಾಲಕರು ಮುಂದಕ್ಕೆ ಸಾಗುತ್ತಿದ್ರು. ಇನ್ನೂ ಈ  ಬಸ್​ಗಳಲ್ಲಿ ಬೆಂಗಳೂರಿನ ಏರಿಯಾಗಳ ಟಿಕೆಟ್​ನ್ನ ನೀಡಲಾಗುತ್ತಿತ್ತು. 

ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲದೆ ತ್ರಾಸಪಟ್ಟುಕೊಂಡು ಬಿಎಂಟಿಸಿ ಬಸ್​ಗಳನ್ನು ಚಲಾಯಿಸುತ್ತಿದ್ದ ಚಾಲಕರು ಒಂದು ಕಡೆಯಾದರೆ, ಟಿಕೆಟ್ ಗೊಂದಲ ಮತ್ತು ರಶ್​ನಲ್ಲಿ ಪ್ರಯಾಣಿಕರು ಪರದಾಡುವಂತಾಗಿತ್ತು.  

ಈ ಮತಗಟ್ಟೆಯಲ್ಲಿ ಆಗಿರೋದು ಕೇವಲ ಮೂರೇ ಮತ

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ಮತದಾನವಾಗುತ್ತಿದ್ದರು ಕೆಲವು ಕಡೆ ಕಡಿಮೆ ಮತದಾರರ ಬಗ್ಗೆ ವರದಿಯಾಗಿದೆ ಅದರಲ್ಲಿಯೂ ಭದ್ರಾವತಿಯ ಕನಸಿನ ಕಟ್ಟೆಯ ಗ್ರಾಮದಲ್ಲಿ ಇರುವ ಮತಗಟ್ಟೆಯಲ್ಲಿ ಮಧ್ಯಾಹ್ನದವರೆಗೂ ಕೇವಲ ಎರಡು ಮತಗಳು ಚಲಾವಣೆಯಾಗಿದೆ ಇದಕ್ಕೆ ಕಾರಣ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿರುವುದು.

ಬಸ್ ಸೌಲಭ್ಯ, ಸ್ಮಶಾನ ಸೇರಿದಂತೆ ಮೂಲಬೂತ ಸೌಕರ್ಯ ಮತ್ತು ನೆಟವರ್ಕ್ ಸಮಸ್ಯೆ ಸಂಬಂಧ ವಿವಿಧ‌ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ‌, ಈ ಮೊದಲೇ  ಕನಸಿನಕಟ್ಟೆಯ ಗ್ರಾಮಸ್ಥರು ಮತದಾನ‌ ಬಹಿಷ್ಕಾರಗೊಳಿಸಿ ಬ್ಯಾನರ್ ಕಟ್ಟಿದ್ದರು‌

ಈ ಹಿನ್ನಲೆಯಲ್ಲಿ 1021 ಮತಗಳಿರುವ ಮತಗಟ್ಟೆಯಲ್ಲಿ ಇದುವರೆಗೂ ಮೂರು ಮತಗಳು ಚಲಾವಣೆಗೊಂಡಿದೆ. ಕನಸಿನಕಟ್ಟೆ ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರವಾಗಿದೆ. ಮತಗಟ್ಟೆ ಸಿಬ್ಬಂದಿಗಳು,ಕೊನೆ ಕ್ಷಣದಲ್ಲಿ ಮತದಾನಕ್ಕೆ ಮತದಾರರು ಆಗಮಿಸುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ..



Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media