Sunday, 13 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
AGUMBE

ಹರಿತವಾದ ಆಯುಧ ಬಳಸಿ ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪತ್ನಿ, ಮಗಳು ವಶಕ್ಕೆ

ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ

Malenadu Today
Last updated: April 21, 2025 6:09 am
Malenadu Today
Share
SHARE
Highlights
  • ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ

ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ (68) ಅವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ. ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಅವರ ಮನೆಯಲ್ಲೇ ಭಾನುವಾರ ಸಂಜೆ ಕೃತ್ಯ ನಡೆದಿದ್ದು, ಪ್ರಕರಣದ ಸಂಬಂಧ ಮೃತರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ

ಪತಿ ಮೃತಪಟ್ಟಿರುವುದಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಪತ್ನಿ ಪಲ್ಲವಿ, ಪೊಲೀಸರು ಮನೆಗೆ ತಲುಪುವಷ್ಟರಲ್ಲಿ ಮನೆಯ ಮೂರನೇ ಮಹಡಿಯಲ್ಲಿನ ಕೊಠಡಿ ಸೇರಿಕೊಂಡಿದ್ದರು. ಮಗಳೊಂದಿಗೆ ಕೊಠಡಿಯ ಬಾಗಿಲು ಹಾಕಿಕೊಂಡಿದ್ದು, ಹೊರಬರಲು ನಿರಾಕರಿಸುತ್ತಿದ್ದರು. ಪ್ರಾಥಮಿಕ ತನಿಖೆ ಪ್ರಕಾರ ಪತ್ನಿ, ಮಗಳು ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಖಾರದ ಪುಡಿ, 2 ಚಾಕು ವಶಕ್ಕೆ

ಓಂ ಪ್ರಕಾಶ್‌ ಅವರ ಕೊಲೆಗೆ ಬಳಸಿರುವ 2 ಚಾಕು ಮತ್ತು ಮೃತದೇಹದ ಪಕ್ಕದಲ್ಲಿದ್ದ ಖಾರದಪುಡಿಯ ಬಾಟಲಿಯನ್ನು ಪೊಲೀಸರು ಸ್ಥಳ ಮಹಜರು ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ.ಓಂ ಪ್ರಕಾಶ್‌ ಅವರ ಕುಟುಂಬ ಎಚ್‌ಎಸ್‌ಆರ್‌ ಬಡಾವಣೆ ಯಲ್ಲಿನ ನೆಲ ಮಹಡಿಯೂ ಸೇರಿದಂತೆ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿತ್ತು. ನೆಲ ಮಹಡಿಯಲ್ಲಿ ಓಂ ಪ್ರಕಾಶ್‌ ಮತ್ತು ಪತ್ನಿ ಪಲ್ಲವಿ ವಾಸವಿದ್ದರು. ಮೊದಲ ಮಹಡಿಯಲ್ಲಿ ಮಗ ಮತ್ತು ಸೊಸೆ ವಾಸಿಸುತ್ತಿದ್ದರು. ಎರಡು ಮತ್ತು ಮೂರನೇ ಮಹಡಿಯಲ್ಲಿ ಮಗಳು ಕೃತಿ ನೆಲಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

car decor

ಪತ್ನಿ ಕೊಲೆಗೆ ಯತ್ನ?

‘ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪತಿ ಓಂ ಪ್ರಕಾಶ್ ಪದೇ ಪದೇ ಪಿಸ್ತೂಲ್ ತಂದು, ನನ್ನನ್ನು ಹಾಗೂ ಮಗಳನ್ನು ಶೂಟ್ ಮಾಡುವುದಾಗಿ ಬೆದರಿಸುತ್ತಿದ್ದರು. ಭಾನುವಾರ ಸಹ ಬೇರೆ ಬೇರೆ ವಿಚಾರಕ್ಕೆ ಗಲಾಟೆ ಆಯಿತು. ಗಲಾಟೆ ವಿಕೋಪಕ್ಕೆ ತಿರುಗಿ, ನಮ್ಮ ಕೊಲೆಗೆ ಯತ್ನಿಸಿದರು. ಆಗ ಅವರ ಮುಖಕ್ಕೆ ಖಾರದ ಪುಡಿ ಎರಚಿದೆವು, ಅಡುಗೆ ಎಣ್ಣೆ ಸುರಿದೆವು. ಬಳಿಕ ಕೈ–ಕಾಲು ಕಟ್ಟಿಹಾಕಿ, ಅಡುಗೆ ಮನೆಯ ಚಾಕುವಿನಿಂದ ಚುಚ್ಚಲಾಯಿತು. ತೀವ್ರ ರಕ್ತಸ್ರಾವದಿಂದ ಪತಿ ಮೃತಪಟ್ಟರು’ ಎಂದು ಪಲ್ಲವಿ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯಾರನ್ನೂ ಬಂಧಿಸಿಲ್ಲ: ವಿಕಾಸ್

‘ನಿವೃತ್ತ ಅಧಿಕಾರಿಯ ಕೊಲೆಗೆ ಹರಿತವಾದ ಆಯುಧ ಬಳಸಲಾಗಿದೆ. ಹೆಚ್ಚು ರಕ್ತ ಅವರ ದೇಹದಿಂದ ಹರಿದಿದೆ. ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದು, ಕೃತ್ಯಕ್ಕೆ ಇದೇ ಆಯುಧ ಬಳಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆ ನಡೆದ ವೇಳೆ ಮೂವರು ಇದ್ದರು ಎಂಬುದು ಗೊತ್ತಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್‌ ವಿಕಾಸ್‌ ಕುಮಾರ್‌ ವಿಕಾಸ್‌ ತಿಳಿಸಿದರು.‘ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಯಾರನ್ನೂ ಬಂಧಿಸಿಲ್ಲ. ಕುಟುಂಬದ ಸದಸ್ಯರ ಹೇಳಿಕೆ ಪಡೆದುಕೊಳ್ಳ ಲಾಗುತ್ತಿದೆ. ಮೃತರ ಪುತ್ರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ಕೈಗೊಳ್ಳಲಾಗುವುದು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವರದಿ ಬಂದ ಬಳಿಕ ಮತ್ತಷ್ಟು ವಿಷಯ ಗೊತ್ತಾಗಲಿದೆ’ ಎಂದು ಹೇಳಿದರು.

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ
Next Article Bhadra Dam Incident Today Bhadra Dam Incident Today : ಭದ್ರಾ ಡ್ಯಾಂನಲ್ಲಿ ದುರಂತ : ತಂದೆ ಮಗ ನೀರುಪಾಲು!
Leave a Comment

Leave a Reply Cancel reply

Your email address will not be published. Required fields are marked *

You Might Also Like

ನೋಡಿ ಸ್ವಾಮಿ ರಾತ್ರಿ ಕಳೆಯವಷ್ಟರಲ್ಲಿ ಆಗುಂಬೆ ರೈತನ ವರ್ಷದ ಕೂಳನ್ನ ತಿಂದು ಹಾಕಿದ ಕಾಡಾನೆ

By 13
AGUMBE

ಬಳ್ಳಾರಿ ಬಾಬು ನಂಬಿ, ತೀರ್ಥಹಳ್ಳಿಗೆ ಬಂದ ಆಂಧ್ರವಾಳ್ಳುಗೆ ಶಾಕ್‌ | 20 ಲಕ್ಷದ ಜೊತೆ ಮೊಬೈಲ್‌ ಕೂಡ ಇಲ್ಲ

By 13

ಬೈಕ್‌ಗೆ ಕಾರು ಡಿಕ್ಕಿ | ತಂದೆ ಸಾವು , ಮಗ ಸೀರಿಯಸ್‌

By 13
kundadri hills incident
AGUMBE

Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up