ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಆರೋಪಿಗಳು ಯಾರು?

Here is the details of the murder case that took place in Bhadravathi Town Old City Police Station Limits

ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಆರೋಪಿಗಳು ಯಾರು?

SHIVAMOGGA |  Dec 20, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ಟೌನ್​ನಲ್ಲಿ ಇವತ್ತು ಮಧ್ಯಾಹ್ನ 12 ಗಂಟೆ ಸುಮಾರಿ ಮರ್ಡರ್ ಆಗಿದೆ. ಯುವಕನೊಬ್ಬನ ತಲೆಯನ್ನೆ ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಮಚ್ಚಿನೇಟು ಬೀಸಿದ್ದಾರೆ. ಬಿದ್ದ ಮಚ್ಚಿನ ಹೊಡೆತಕ್ಕೆ ಯುವಕ ಸ್ಥಳದಲ್ಲಿಯೇ ರಕ್ತ ಚೆಲ್ಲಿ ಸಾವನ್ನಪ್ಪಿದ್ದಾರೆ. 

 ಭದ್ರಾ ವೈನ್ಸ್ ಶಾಪ್​ನಲ್ಲಿ ಹೀಗೆ ಕೊಲೆಯಾದವನನ್ನ  ಹೇಮಂತ್ ಅಲಿಯಾಸ್ 35 ವರ್ಷದ ಕರಿ ಚಿಕ್ಕಿ ಎಂದು ಗುರುತಿಸಲಾಗಿದೆ. ಈತನ ಕೊಲೆಗೂ ಕಾರಣವೂ ಸ್ಪಷ್ಟವಾಗಿದೆ. ಅಲ್ಲದೆ ಭದ್ರಾವತಿ ಪೊಲೀಸರು ಈ ಸಂಬಂಧ ಮೂವರನ್ನ  ಅರೆಸ್ಟ್ ಮಾಡಿದ್ದಾರೆ. 

ಬಂಧಿತರು!

1 ಸತ್ಯಾನಂದ, ಕುಮಾರ್, ಬೊಮ್ಮನಕಟ್ಟೆ ,

2 ಮುಬಾರಕ್ @ ಮುಬ್ಬು, 26 ವರ್ಷ ಬೊಮ್ಮನಕಟ್ಟೆ 

3 ಖಲೀಲ್  20 ವರ್ಷ, ಬೊಮ್ಮನಕಟ್ಟೆ   

ಅಂದಹಾಗೆ, ಘಟನೆಯ ಹಿಂದಿರೋದು ಹಳೆಯ ದ್ವೇಷ ಎಂಬುದು ಸ್ಪಷ್ಟವಾಗಿದೆ. ಅದೇನೂ ಅಂತಾ ನೋಡುವುದಾದರೆ, 

ದಿನಾಂಕ: 20/07/2023 ರಂದು ರಾತ್ರಿ  ರೌಡಿ ಮುಜ್ಜುವನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಭದ್ರಾವತಿ ಪೇಪರ್ ಟೌನ್​ ಲಿಮಿಟ್ಸ್​ನಲ್ಲಿ  ಈ ಘಟನೆ ನಡೆದಿತ್ತು. ತನಗೆ ಬೇಕಾಗಿದ್ದವರು ಮನೆಗೆ ಹೋಗುತ್ತಿದ್ದ ಮುಜ್ಜುವನ್ನ ಅಡ್ಡಗಟ್ಟಿದ್ದ ಆರೋಪಿಗಳು ಹೀನಾಯವಾಗಿ ಆತನನ್ನ ಹೊಡೆದುಹಾಕಿದ್ದರು. ಆತನಿಗೂ ಸಹ ತಲೆಗೆ ಮಚ್ಚಿನೇಟು ನೀಡಲಾಗಿತ್ತು. 

ಬೊಮ್ಮನಕಟ್ಟೆ ಬಡಾವಣೆಯ ಸಮೀಪವೇ  ಮುಜಾಯಿದ್ದೀನ್ ಅಲಿಯಾಸ್ ಮುಜ್ಜು ಎಂಬಾತ ಹತ್ಯೆಯಾಗಿದ್ದ. ಈ ಪ್ರಕರಣವನ್ನು ಅಂದು ಭೇದಿಸಿದ್ದ ಪೊಲೀಸರು ಕಡೂರುನಲ್ಲಿದ್ದ ಆರೋಪಿಗಳನ್ನ ಬಂಧಿಸಿ ಕರೆತಂದಿದ್ದರು. 1) ಸಂತೋಷ ಕುಮಾರ್ @ ಗುಂಡ @ ಕರಿಯಾ, 33 ವರ್ಷ, ವಾಸ ಹಿರಿಯೂರು ಭದ್ರಾವತಿ, 2) ಸುರೇಂದ್ರ @ ಆಟೋ ಸೂರಿ, 36 ವರ್ಷ, ಹೊಸಮನೆ, ಭದ್ರಾವತಿ, 3) ಮಂಜುನಾಥ @ ಬಿಡಾ, 33 ವರ್ಷ, ಕುವೆಂಪು ನಗರ, ಹೊಸಮನೆ ಭದ್ರಾವತಿ, 4) ವಿಜಯ್ ಕುಮಾರ್ @ ಪವರ್, 25 ವರ್ಷ, ಭೂತನಗುಡಿ ಭದ್ರಾವತಿ , 5) ವೆಂಕಟೇಶ @ ಲೂಸ್, 23 ವರ್ಷ, ಹಳ್ಳಿಕೆರೆ, ಬಾರಂದೂರು ಭದ್ರಾವತಿ,  ಆಗ ಬಂಧಿತರಾದವರು.. 

ಮುಜ್ಜು ಮರ್ಡರ್​ಗೆ ಅಂದು ಕಾರಣವಾಗಿದ್ದು 2019 ರಲ್ಲಿ ರಮೇಶ್​ ಎಂಬಾತನ ಕೊಲೆ ನಡೆದಿತ್ತು, ರೌಡಿ ಮುಜ್ಜು ರಮೇಶ್​ನಿಗೆ ಡ್ರ್ಯಾಗರ್​ನಿಂದ ಚುಚ್ಚಿ ಸಂತೋಷ್ ಹಾಗೂ ಸುರೇಶ್​ ಮೇಲೂ ಅಟ್ಯಾಕ್​ ಮಾಡಿದ್ದ. ಈ ಘಟನೆ ನಂತರ ಮುಜ್ಜು ಜೈಲಿಗೆ ಹೋಗಿ ಬಂದಿದ್ದ. ಇದೇ ವಿಚಾರದಲ್ಲಿ ಮುಜ್ಜುವನ್ನ ಸಂತೋಷ್​ ಹಾಗೂ ಸುರೇಶ್​ ಆ್ಯಂಡ್ ಟೀಂ ಕೊಲೆ ಮಾಡಿತ್ತು. 



ಇದೀಗ ಅಣ್ಣನ ಕೊಲೆಯ ಪ್ರತೀಕಾರವಾಗಿ ಖಲೀಲ್, ಮುಬಾರಕ್ ಮತ್ತು ಸತ್ಯಾನಂದ ಗುಂಡಾನ ತಮ್ಮ ಕರಿಚಿಕ್ಕಿಯನ್ನು ಕೊಲೆ ಮಾಡಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ವೈನ್ ಶಾಪ್​ನಲ್ಲಿದ್ದ ಕರಿಚಿಕ್ಕಿಯನ್ನು ದುಷ್ಕರ್ಮಿಗಳ ಗುಂಪು ಹೊಡೆದು ಹಾಕಿದ್ದು ಹಳೇನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಇಲ್ಲಿ ಹೊಡೆದವನು ಮುಜ್ಜು ಸಹೋದರ ಆದರೆ, ಸಾವನ್ನಪ್ಪಿರುವವನು ಮುಜ್ಜು ಕೊಲೆ ಆರೋಪಿ ಗುಂಡನ ಸಹೋದರ ಎನ್ನಲಾಗಿದೆ.