ಬುಧವಾರದ ದಿನ! ಶುಭಸೂಚನೆ! ಇವತ್ತಿನದ ದಿನಭವಿಷ್ಯ! ದಿನದ ಪಂಚಾಂಗ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025: ಇವತ್ತಿನ ಪಂಚಾಂಗ ಮತ್ತು ಈ ದಿನದ ರಾಶಿಭವಿಷ್ಯ.  ವಿಶ್ವಾವಸು ನಾಮ ಸಂವತ್ಸರ, ನವಮಿ ತಿಥಿ, ಪುಷ್ಯ ನಕ್ಷತ್ರದ ದಿನ! ಇವತ್ತಿನ ರಾಹು ಕಾಲ: ಮಧ್ಯಾಹ್ನ 12:00 ರಿಂದ 1:30 ರವರೆಗೆ. ಯಮಗಂಡ ಕಾಲ: ಬೆಳಿಗ್ಗೆ 7:30 ರಿಂದ 9:00 ರವರೆಗೆ. ಗುಳಿಕ ಕಾಲ: ಬೆಳಿಗ್ಗೆ 10:30 ರಿಂದ 12:00 ರವರೆಗೆ. ಇಂದಿನ ವಿಶೇಷ ಶ್ರೀರಂಗಪಟ್ಟಣ ಆಪ್ತಶ್ರೀಕ್ಷೇತ್ರೋತ್ಸವ, ವಿಶ್ವ ಅಂಧರ ದಿನ, ಅಬ್ದುಲ್ ಕಲಾಂ ಜಯಂತಿ ಮತ್ತು ತಲಕಾವೇರಿ ಜಾತ್ರೆ.

ಶಿವಮೊಗ್ಗದಲ್ಲಿ ದಾವಣಗೆರೆ ಲೋಕಾಯುಕ್ತರ ರೇಡ್​! ಏನು ನಡೆಯುತ್ತಿದೆ?

- Advertisement -

ಅಕ್ಟೋಬರ್ 15, 2025: ಇಂದಿನ ರಾಶಿ ಭವಿಷ್ಯ

ಮೇಷ  :  ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ.ಸಣ್ಣಪುಟ್ಟ ತೊಂದರೆ ಎದುರಿಸಬೇಕಾಗಬಹುದು. ದೇವಾಲಯಗಳಲ್ಲಿ ಮಾನಸಿಕ ನೆಮ್ಮದಿಯ ಹುಡುಕಾಟ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಾಮಾನ್ಯ ದಿನ. 

ವೃಷಭ: ವಿದ್ಯಾರ್ಥಿಗಳಿಗೆ ಶುಭ ಸುದ್ದಿ,  ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲಿವೆ. ಯೋಜಿಸಿದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸಂಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣವಿರುತ್ತದೆ.

ಮಿಥುನ:  ಪರಿಸ್ಥಿತಿಗಳು ಪರವಾಗಿಲ್ಲದಿರಬಹುದು, ಖರ್ಚು ಹೆಚ್ಚಾಗುವ ಸಂಭವವಿದೆ. ಸಂಬಂಧಿಕರೊಂದಿಗೆ ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯ. ದೂರ ಪ್ರಯಾಣ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಅನುಕೂಲ

Check Your Rasi Bhavishya
Check Your Rasi Bhavishya

ಕರ್ಕಾಟಕ: ಹೊಸ ಪರಿಚಯ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಹಣದ ಹರಿವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಯಶಸ್ಸು. ಉದ್ಯೋಗದಲ್ಲಿ ಗುರಿಸಾದನೆ.

ಸಿಂಹ : ಶ್ರಮ ವಹಿಸಬೇಕಾಗುತ್ತದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ. ದಿನ ನಿಧಾನಗತಿಯಲ್ಲಿ ಸಾಗಬಹುದು. ಕೆಲಸ ಕಾರ್ಯ ವಿಳಂಬ. ಆರೋಗ್ಯ ಜಾಗ್ರತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತದ ದಿನ

ಶಿಕಾರಿಪುರ ಆಸ್ಪತ್ರೆಯಲ್ಲಿ ಮೂವರಿಗೆ ಇರಿತ! ಮೂವರ ವಿರುದ್ಧ FIR!

ಕನ್ಯಾ: ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುತ್ತವೆ.ಪ್ರೀತಿಪಾತ್ರರಿಂದ ಆರ್ಥಿಕ ಲಾಭ. ಕುಟುಂಬದ ವಿಷಯಗಳನ್ನು ಸಹೋದರರೊಂದಿಗೆ ಚರ್ಚೆ. ವ್ಯಾಪಾರವು ಬೆಳೆಯುತ್ತದೆ ಮತ್ತು ಉದ್ಯೋಗಗಳಲ್ಲಿನ ಒತ್ತಡವು ನಿವಾರಣೆಯಾಗುತ್ತದೆ.

ತುಲಾ : ಪ್ರೀತಿಪಾತ್ರರೊಂದಿಗೆ ಉತ್ಸಾಹಭರಿತವಾದ ದಿನ ಕಳೆಯುವಿರಿ, ಸಂತೋಷದ ಸಮಯವನ್ನು ಕಳೆಯುವಿರಿ. ಎಲ್ಲೆಡೆ ಸಕ್ರಿಯವಾಗಿ ಭಾಗವಹಿಸುವಿರಿ.ಕೆಲಸಗಳು ಸುಗಮವಾಗಿ ಮುಂದುವರೆಯುತ್ತವೆ. ವ್ಯಾಪಾರ ಮತ್ತು ಉದ್ಯೋಗ ಸರಾಗವಾಗಿ ಸಾಗುತ್ತವೆ.

Check Your Rasi Bhavishya
Check Your Rasi Bhavishya

ವೃಶ್ಚಿಕ : ಕೈಗೊಳ್ಳುವ ಕೆಲಸ ಮುಂದೂಡಲ್ಪಡುವ ಸಾಧ್ಯತೆ. ಪ್ರಯಾಣದಲ್ಲಿ ಸಣ್ಣಪುಟ್ಟ ಸಮಸ್ಯೆ. ವೆಚ್ಚ ಹೆಚ್ಚಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ವಾಗ್ವಾದ. ಅನಾರೋಗ್ಯದ ಚಿಂತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ 

ಧನು : ಹೊಸ ಯೋಜನೆ ನಿರೀಕ್ಷಿತ ಪ್ರಗತಿ ಕಾಣುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ತಕ್ಷಣ ಫಲಿತಾಂಶ ಗೋಚರಿಸುವುದಿಲ್ಲ. ಭೂಮಿಗೆ ಸಂಬಂಧಿಸಿದ ವಿವಾದ ಉಂಟಾಗಬಹುದು. ಸಂಬಂಧಿಕರೊಂದಿಗೆ ವಾದ-ವಿವಾದ  ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.

ಸಾಗರ : ಇಮ್ರಾನ್​ ಮತ್ತು ಇಮ್ತಿಯಾಜ್​ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್​ ತೀರ್ಪು

ಮಕರ: ಹೊಸ ನಿರ್ಣಯಗ. ಆಸ್ತಿ ವ್ಯವಹಾರ ಸುಗಮವಾಗಿ ನಡೆಯುತ್ತವೆ. ಬಾಲ್ಯದ ನೆನಪುಗಳು ನೆನಪಾಗಿ ಕಾಡುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಉತ್ತೇಜನ ಮತ್ತು ಪ್ರೋತ್ಸಾಹ ಲಭಿಸುತ್ತದೆ.

ಕುಂಭ : ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಸರಕು ಮತ್ತು ಸೇವೆಯ ವ್ಯವಹಾರಗಳಲ್ಲಿ ಲಾಭವಾಗುತ್ತದೆ. ಬಾಲ್ಯದ ಸ್ನೇಹಿತರ ಭೇಟಿ. ಆಸ್ತಿ-ಸಂಬಂಧಿತ ವಿಷಯ ಬಗೆಹರಿಯುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುತ್ತವೆ.

ಮೀನ: ಆಪ್ತ ಸ್ನೇಹಿತರು ಒತ್ತಡವನ್ನು ಹೆಚ್ಚಿಸಬಹುದು. ಆರ್ಥಿಕ ತೊಂದರೆ ಎದುರಾಗುವ ಸಾಧ್ಯತೆ ಇದೆ. ದೂರ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಕುಟುಂಬದೊಳಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು. ಅನಾರೋಗ್ಯದ ಸಮಸ್ಯೆ ವ್ಯಾಪಾರ ಮತ್ತು ಉದ್ಯೋಗ ಸರಳವಾಗಿರಲಿದೆ.

Check Your Rasi Bhavishya
Check Your Rasi Bhavishya

Check Your Rasi Bhavishya and Panchang October 15 2025

October 15 2025 horoscope, daily rasi bhavishya, todays panchangam, Get free daily horoscope,Rasi Bhavishya 15-10-2025, Kannada calendar today, ಇಂದಿನ ಜಾತಕ, ರಾಶಿ ಭವಿಷ್ಯ, 15 ಅಕ್ಟೋಬರ್ 2025 ಪಂಚಾಂಗ, ಶುಭ ಸಮಯ, Check Your Rasi Bhavishya

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *