ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ 112 ಪೊಲೀಸರಿಗೆ ಆಗಾಗ ಬರುವ ಸಮಸ್ಯೆಗಳು ಸ್ವತಃ ಅವರಿಗೆ ಸವಾಲಾಗಿರುತ್ತದೆ. ಹಾಗಿದ್ರೂ ಅನೇಕ ಸಮಸ್ಯೆಗಳನ್ನು ಅವರು ಸ್ಥಳದಲ್ಲಿಯೇ ಬಗೆಹರಿಸ್ತಾರೆ. ಇದು ಸಹ ಅಂತಹುದ್ದೆ ಒಂದು ಪ್ರಕರಣ. ಪ್ರಕರಣವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಓಲ್ಡ್ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಸ್ ಹತ್ತಲು ಮುಂದಾದ ಪ್ಯಾಸೆಂಜರ್ ಒಬ್ಬರನ್ನ ಕಂಡೆಕ್ಟರ್ ಒಬ್ಬರು ತಡೆದಿದ್ದಾರೆ. ಪ್ಯಾಸೆಂಜರ್ ಮದ್ಯಪಾನ ಮಾಡಿದ್ದಾನೆ ಎಂದು ಆರೋಪಿಸಿದ ನಿರ್ವಾಹಕ ಆತನನ್ನ ಬಸ್ ಹತ್ತದಂತೆ ತಡೆದಿದ್ದಾನೆ. ಆ ಬಳಿಕ ಬಸ್ ಮುಂದಕ್ಕೆ ಸಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕ ತನ್ನನ್ನು ಕುಡಿದಿದ್ದಾನೆ ಎಂದು ಹೇಳಿ ಬಸ್ ಹತ್ತಿಸಿಲ್ಲ ಎಂದು ಆರೋಪಿಸಿ 112 ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂತಿಮವಾಗಿ ಪೊಲೀಸರು ಈ ಕುರಿತಾಗಿ ಠಾಣೆಗೆ ಬಂದು ಕಂಪ್ಲೆಂಟ್ ಕೊಡಿ ವಿಚಾರಣೆ ನಡೆಸ್ತೇವೆ ಎಂದು ಹೇಳಿದ್ದಾರೆ. ಸದ್ಯ ಇಲ್ಲಿಗೆ ಪ್ರಕರಣಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು ನೊಂದ ಪ್ರಯಾಣಿಕ ದೂರು ನೀಡುತ್ತಾರಾ ನೋಡಬೇಕಿದೆ.
Bus Conductor Alleges Passenger Drunk, Stops Boarding in Bhadravathi
