ಬೈಕ್ಗೆ ಡಿಕ್ಕಿ ಹೊಡೆದ ಬಸ್! ಸವಾರನ ತಲೆಮೇಲೆ ಹರಿದ ಚಕ್ರ| ಕ್ಷಣದಲ್ಲಿ ನಡೆದ ಭೀಕರ ದುರಂತ
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಬಳಿಯಲ್ಲಿ ನಿನ್ನೆ ಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ
KARNATAKA NEWS/ ONLINE / Malenadu today/ Nov 10, 2023 SHIVAMOGGA NEWS
Shivamogga | ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಎರಡನೇ ಗೇಟ್ನ ಬಳಿಯಲ್ಲಿ ನಿನ್ನೆ ಭೀಕರ ಘಟನೆಯೊಂದು ನಡೆದಿದೆ.
ಇಲ್ಲಿನ ಗೇಟ್ನ ಸಮೀಪ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ
READ : ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್, ಸೋಮಣ್ಣ ಮತ್ತು ಡಾ.ವಿನಯ್!
ಎಚ್.ಕೆ.ಜಂಕ್ಷನ್ ಬಳಿಯ ರಂಗನಾಥಪುರದ ರಂಗಪ್ಪ ಮೃತ ವ್ಯಕ್ತಿ ಘಟನೆಯಲ್ಲಿ. ಖಾಸಗಿ ಟೂರಿಸ್ಟ್ ಬಸ್ ತಲೆ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
READ : ಲಯನ್ ಸಫಾರಿ ಬಳಿ ಪಲ್ಟಿಯಾಗಿ ನಡುರಸ್ತೆಯಲ್ಲಿ ನಿಂತ ಕಾರು!
ಕುವೆಂಪು ವಿವಿ ಮುಖ್ಯದ್ವಾರ ಅಕ್ಕಪಕ್ಕದ ಜನದಟ್ಟಣೆ ಪ್ರದೇಶವಾಗಿದ್ದು ಎಲ್ಲ ವಾಹನಗಳು ವೇಗವಾಗಿ ಹೋಗುವುದರಿಂದ ಅಪಘಾತಗಳು ಇಲ್ಲಿ ಸಂಭವಿಸುತ್ತಿರುತ್ತದೆ. ಹಾಗಾಗಿ ಇಲ್ಲಿ ಹಂಪ್ಗಳನ್ನು ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಇನ್ನೂ ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.