Wednesday, 30 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

biodegradable pouch 09-06-25 :  ನಂದಿನಿ ಹಾಲು ಇನ್ನು ಪರಿಸರ ಸ್ನೇಹಿ, ಬಯೋಡಿಗ್ರೇಡಬಲ್ ಕವರ್‌ಗಳಲ್ಲಿ ಹಾಲಿನ ವಿತರಣೆಗೆ ಚಾಲನೆ

prathapa thirthahalli
Last updated: June 9, 2025 1:32 pm
Prathapa thirthahalli - content producer
Share
SHARE

biodegradable pouch :  ನಂದಿನಿ ಹಾಲು ಇನ್ನು ಪರಿಸರ ಸ್ನೇಹಿ, ಬಯೋಡಿಗ್ರೇಡಬಲ್ ಕವರ್‌ಗಳಲ್ಲಿ ಹಾಲಿನ ವಿತರಣೆಗೆ ಬಮೂಲ್ ಚಾಲನೆ

ಬೆಂಗಳೂರು: ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಬೆಂಗಳೂರು ಹಾಲು ಒಕ್ಕೂಟ (ಬಮೂಲ್), ವಿಶ್ವ ಪರಿಸರ ದಿನದಂದು ಪರಿಸರ ಸ್ನೇಹಿ ಪ್ಯಾಕೇಜಿಂಗ್‌ಗೆ ಚಾಲನೆ ನೀಡಿದೆ. ಇನ್ನು ಮುಂದೆ ನಂದಿನಿ ಹಾಲನ್ನು ಪರಿಸರಕ್ಕೆ ಹಾನಿಕಾರಕವಾದ ಪಾಲಿಥಿನ್ ಕವರ್‌ಗಳ ಬದಲಿಗೆ, ಸಂಪೂರ್ಣವಾಗಿ ಜೈವಿಕವಾಗಿ ವಿಘಟನೆಗೊಳ್ಳುವ (ಬಯೋಡಿಗ್ರೇಡಬಲ್) ಕವರ್‌ಗಳಲ್ಲಿ ಗ್ರಾಹಕರಿಗೆ ವಿತರಿಸಲಿದೆ. ದೇಶದಲ್ಲೇ ಇದೊಂದು ಪ್ರಥಮ ಪ್ರಯತ್ನವಾಗಿದ್ದು, ಕನಕಪುರ ಮೆಗಾಡೇರಿಯಿಂದ ಈ ವಿನೂತನ ಯೋಜನೆಗೆ ಚಾಲನೆ ದೊರೆತಿದೆ.

biodegradable pouch ಪ್ರಸ್ತುತ, ಹಾಲಿನ ಪ್ಯಾಕೇಜಿಂಗ್‌ಗೆ ಬಳಸಲಾಗುತ್ತಿದ್ದ ಪಾಲಿಥಿನ್ ಕವರ್‌ಗಳು ಪ್ಲಾಸ್ಟಿಕ್ ನಿಷೇಧದಿಂದ ವಿನಾಯ್ತಿ ಪಡೆದಿದ್ದರೂ, ಅವುಗಳಿಂದ ಪರಿಸರಕ್ಕೆ ಹೆಚ್ಚಿನ ತ್ಯಾಜ್ಯಗಳು ಸೇರುತ್ತಿದೆ. ಇದರಿಂದಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬಮೂಲ್ ಈ ಪರಿಸರ ಸ್ನೇಹಿ ಮಾರ್ಗವನ್ನು ಆಯ್ದುಕೊಂಡಿದೆ. ಕನಕಪುರದ ಶಿವನಹಳ್ಳಿ ಬಳಿ ಇರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಸಿದ್ಧಪಡಿಸಲಾದ ಡಿ-ಕಂಪೋಸಬಲ್ ಕವರ್‌ಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಈಗಾಗಲೇ ಸುಮಾರು 2 ಲಕ್ಷ ಬಯೋಡಿಗ್ರೇಡಬಲ್ ಕವರ್‌ಗಳಲ್ಲಿ ಹಾಲು ಪ್ಯಾಕ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದ ವ್ಯಾಪ್ತಿಯ ಎಲ್ಲಾ ಹಾಲನ್ನು ಇದೇ ಪರಿಸರ ಸ್ನೇಹಿ ಕವರ್‌ಗಳಲ್ಲಿ ಪ್ಯಾಕ್ ಮಾಡುವ ಗುರಿಯನ್ನು ಬಮೂಲ್ ಹೊಂದಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಮಹಾನಗರದ ಅರ್ಧಭಾಗದಲ್ಲಿ ಪ್ರತಿದಿನ ಸುಮಾರು 14 ಲಕ್ಷ ಲೀಟರ್ ಹಾಲು ಮತ್ತು ಮೊಸರನ್ನು ಮಾರಾಟ ಮಾಡುವ ಬಮೂಲ್, ಪ್ರತಿದಿನ 20 ರಿಂದ 25 ಲಕ್ಷ ಹಾಲಿನ ಕವರ್‌ಗಳನ್ನು ಬಳಸುತ್ತದೆ. ಈ ಎಲ್ಲಾ ಕವರ್‌ಗಳು ದೊಡ್ಡ ಪ್ರಮಾಣದ ತ್ಯಾಜ್ಯವಾಗಿ ಬದಲಾಗುತ್ತಿದ್ದು, ಹೊಸ ಜೈವಿಕ ವಿಘಟನೆಗೊಳ್ಳುವ ಕವರ್‌ಗಳ ಬಳಕೆಯಿಂದ ಮಹಾನಗರದ ಕಸದ ಸಮಸ್ಯೆಗೆ ಗಣನೀಯ ಪರಿಹಾರ ದೊರೆಯಲಿದೆ.

car decor
NES Head Office, Balaraja Urs Road, Shivamogga

ಪ್ರಸ್ತುತ ಬಳಸುತ್ತಿರುವ ಹಾಲಿನ ಕವರ್‌ಗಳು ಪರಿಸರದಲ್ಲಿ ಕರಗಲು ಕನಿಷ್ಠ 500 ವರ್ಷ ಬೇಕಾಗುವ ಕಡೆ, ಹೊಸ ಬಯೋಡಿಗ್ರೇಡಬಲ್ ಪ್ಲಾಸ್ಟಿಕ್ ಕವರ್‌ಗಳು ಕೇವಲ 6 ತಿಂಗಳಲ್ಲಿ ವಿಘಟನೆಗೊಳ್ಳುತ್ತವೆ. ವಿದೇಶಿ ತಂತ್ರಜ್ಞಾನವನ್ನು ಬಳಸಿ ಜೋಳದಿಂದ ತಯಾರಿಸಲಾಗುವ ಈ ಪರಿಸರ ಸ್ನೇಹಿ ಕವರ್‌ಗಳು, ಪ್ರಸ್ತುತ ಇರುವ ಕವರ್‌ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆ ಬಾಳುತ್ತವೆ.

biodegradable pouch ಈ ಕುರಿತು ಮಾಜಿ ಸಂಸದ ಹಾಗೂ ಬಮೂಲ್ ನಿರ್ದೇಶಕ ಡಿ.ಕೆ.ಸುರೇಶ್ ಅವರು ಮಾತನಾಡಿ, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜೈವಿಕವಾಗಿ ವಿಘಟನೀಯ ಕವರ್‌ನಲ್ಲಿ ಹಾಲು ಪ್ಯಾಕಿಂಗ್ ಮಾಡುವ ಕಾರ್ಯಕ್ಕೆ ಬಮೂಲ್ ಚಾಲನೆ ನೀಡಿರುವುದು ಒಂದು ವಿನೂತನ ಹೆಜ್ಜೆ ಎಂದು ತಿಳಿಸಿದ್ದಾರೆ. ಜೂನ್ 5ರಂದು ಕನಕಪುರ ಮೆಗಾಡೇರಿಯಲ್ಲಿ ಡಿ.ಕೆ.ಸುರೇಶ್ ಅವರು ಈ ಪರಿಸರ ಸ್ನೇಹಿ ಕವರ್‌ಗಳ ಉತ್ಪಾದನೆಯನ್ನು ಪರಿಶೀಲಿಸಿದರು.

malenadutoday add
TAGGED:biodegradable pouchnandini milk
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article indian railway news indian railway news  ರೈಲು ದುರಂತ, 5 ಜನ ಪ್ರಯಾಣಿಕರ ಸಾವು
Next Article today viral video : today viral video ಮರದ ನಡುವೆ ಹರಿಯಲಾರಂಭಿಸಿದ ನೀರು, ದೇವರ ಪವಾಡವೆಂದು ಪೂಜೆ ಮಾಡಿದ ಜನರು | ನಂತರ ನಡೆದಿದ್ದೇನು, ವಿಡಿಯೋ ವೈರಲ್​​
Leave a Comment

Leave a Reply Cancel reply

Your email address will not be published. Required fields are marked *

You Might Also Like

ಕ್ರಾಂತಿದೀಪ ಎನ್‌ ಮಂಜುನಾಥ್‌ ರವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ

By 13

ಶಿವಮೊಗ್ಗಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗಿಫ್ಟ್‌ | ಸಂಸದರು ಹೇಳಿದ್ದೇನು?

By 13
STATE NEWS

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ KSRTC ಬಸ್​ | 30 ಜನರಿಗೆ ಗಾಯ

By 131

ವಾರ್ನರ್‌ ಟೀಸರ್‌ ಬಳಿಕ ಟೆಂಪಲ್‌ ರನ್‌ ಆರಂಭಿಸಿದ ಉಪೇಂದ್ರ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up