ಆಯನೂರು ಮಂಜುನಾಥ್, ನಾಗರಾಜ್ ಗೌಡ ಘರ್​ ವಾಪ್ಸಿ! ಕೆಪಿಸಿಸಿ ‘ಶಿವಮೊಗ್ಗ‘ ಚರ್ಚೆ! ಯಾರ್ಯಾರು ಏನಂದ್ರು?

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS

ಮಾಜಿ ವಿಧಾನ ಪರಿಷತ್‌ ಸದಸ್ಯ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ  ಜೆಡಿಎಸ್‌ ಪಕ್ಷದ ಮೂಲಕ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್  ಇಂದು ಕೆಪಿಸಿಸಿ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇನ್ನೂ ಇದೇ ವೇಳೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಬಂಡಾಯವೆದ್ದು ಬಿವೈ ವಿಜಯೇಂದ್ರರವರ ಎದುರು ಸ್ಪರ್ಧಿಸಿದ್ದ ನಾಗರಾಜ್ ಗೌಡ ಕೂಡ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆದರು. 

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಯನೂರು ಮಂಜುನಾಥ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದರು 

Malenadu Today

ಪಕ್ಷ ಸೇರಿದ ಬಳಿಕ ಮಾತನಾಡಿದ  ಆಯನೂರು ಮಂಜುನಾಥ್, ಕೆಪಿಸಿಸಿ ಅಧ್ಯಕ್ಷರು ನೀಡಿದ ಸಲಹೆಗಳನ್ನು ಪಾಲಿಸಿಸುತ್ತೇನೆ ಎಂದರು,  ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೇಳಿದ ದಾರಿಯಲ್ಲಿ ಕೆಲಸ ಮಾಡುತ್ತೇನೆ ಎಂದ ಅವರು ನಾಯಕರ ನಾಯಕತ್ವದಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಕ್ಕೆ  ಧನ್ಯವಾದ ಅರ್ಪಿಸಿದರು. 

Malenadu Today

ಇನ್ನೂ ಇದಕ್ಕೂ ಮೊದಲು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯಾವುದೇ ಕಾರಣಕ್ಕೂ ಕಷ್ಟಗಾಲದಲ್ಲಿ ಪಕ್ಷದ  ಕೈ ಹಿಡಿದವರನ್ನು ಬಿಡುವ ಪ್ರಶ್ನೆಯಿಲ್ಲ.  ಸಮುದ್ರದ ನೀರು ಸಮುದ್ರಕ್ಕೆ ಸೇರಲೇ ಬೇಕು. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಇಲ್ಲಿಂದ ಹೋದವರು ವಾಪಸ್ ಬರುತ್ತಾರೆ. ಹಾಗೆಂದು ಯಾರಿಗೂ ನಾವು ಯಾವುದೇ ಆಶ್ವಾಸನೆಯನ್ನು ನೀಡುವುದಿಲ್ಲ. ಅವರ ಶಕ್ತಿ, ಅವರ ಕೆಲಸ ಹಾಗೂ ಪಕ್ಷ ನಿಷ್ಟೆಯನ್ನು ನೋಡಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದು ತಿಳಿಸಿದರು. 

 Malenadu Today

ಈ ಮಧ್ಯೆ ಸಮಾರಂಭದಲ್ಲಿ ಪಕ್ಷ ಸೇರಿದ ಆಯನೂರು ಮಂಜುನಾಥ್​ರವರನ್ನು ಮಾತನಾಡಿಸಿದ ಸಚಿವ ಮಧು ಬಂಗಾರಪ್ಪನವರು, ನಿಮ್ಮದು ಘರ್ ವಾಪ್ಸಿ ಎಂದರು, ಇದಕ್ಕೆ ಆಯನೂರು ಮಂಜುನಾಥ್​ರವರು ಮಧು ಬಂಗಾರಪ್ಪನವರಿಗೆ ಹಸ್ತಲಾಘವ ನೀಡಿದ್ರು. ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣರವರು ಸಹ ಅಲ್ಲಿಯೇ ಉಪಸ್ಥಿತರಿದ್ದರು

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು