ಆಗುಂಬೆ 8 ನೇ ತಿರುವಿನಲ್ಲಿ, ಟೈರ್ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ ನಿಂತ ಲಾರಿ
ಇನ್ನೂ ಅಪಘಾತ ಹಿನ್ನಲೆಯಲ್ಲಿ ಹೆವಿ ವೆಹಿಕಲ್ಗಳನ್ನು ಅತ್ತ ಸೋಮೇಶ್ವರ ಚೆಕ್ಪೋಸ್ಟ್ ಮತ್ತು ಇತ್ತ ಆಗುಂಬೆ ಚೆಕ್ ಪೋಸ್ಟ್ ಬಳಿಯಲ್ಲಿ ವಾಹನಗಳನ್ನು ಕೆಲಹೊತ್ತು ತಡೆ ಹಿಡಿಯಲಾಗಿತ್ತು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ (Agumbe ghat) ಘಾಟಿಯಲ್ಲಿ ಕೆಲವು ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಆಕಸ್ಮಿಕವಾಗಿ ಸಂಭವಿಸಿದ ಘಟನೆ
ಲಾರಿ ಟೈರ್ ಸ್ಫೋಟ : ಆಗುಂಬೆ ಘಾಟಿಯಲ್ಲಿ ಲಾರಿಯೊಂದು ಟೈರ್ ಸ್ಫೋಟಗೊಂಡಿದ್ದರಿಂದ, ತಿರುವಿನಲ್ಲಿಯೇ ನಿಂತುಬಿಟ್ಟಿತ್ತು. ಘಾಟಿಯ 8 ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿತ್ತು. ಹೇರ್ ಪಿನ್ ತಿರುವಿನಲ್ಲಿಯೇ, ಲಾರಿಯ ಹಿಂದಿನ ಟೈರ್ ಸ್ಫೋಟಗೊಂಡಿದ್ದರಿಂದ, ಹಿಂದಿನಿಂದ ಬಂದ ವಾಹನಗಳು ಮುಂದಕ್ಕೆ ಹೋಗಲಾಗದೇ ಪರದಾಡಿದವು, ಇನ್ನೂ ಮುಂದಿನ ಬರುತ್ತಿದ್ದ ವಾಹನಗಳಿಗೂ ವೆಹಿಕಲ್ ಟರ್ನ್ ತೆಗೆದುಕೊಳ್ಳುವುದ ಕಷ್ಟಸಾಧ್ಯವಾಗಿತ್ತು.
ಇದನ್ನು ಸಹ ಓದಿ : ಸಿಟಿ ಸೆಂಟರ್ ಮಾಲ್ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್, ವಾಚ್ ಕಿತ್ಕೊಂಡು ಹೋದ
ಕ್ರೇನ್ ತರಿಸಿ ಲಾರಿ ತೆರವು : ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್ ಲಾರಿಯನ್ನು ಪಕ್ಕಕ್ಕೆ ಝರಿಸಿದ್ದಾರೆ. ಬಳಿಕ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಆದಾಗ್ಯು ಟ್ರಾಫಿಕ್ ಜಾಮ್ನಿಂದಾಗಿ ಸುಮಾರು ಒಂದುವರೆ ಕಿಲೋಮೀಟರ್ ನಷ್ಟು ದೂರ ವಾಹನಗಳು ನಿಂತಿದ್ದವು. ಹೀಗಾಗಿ ಸಂಚಾರ ಸುಗಮಗೊಳ್ಳಲು ಸುಮಾರು ಹೊತ್ತು ಬೇಕಾಯ್ತು.
ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ
ಹೆವಿ ವೆಹಿಕಲ್ಗಳಿಗೆ ತಡೆ : ಇನ್ನೂ ಅಪಘಾತ ಹಿನ್ನಲೆಯಲ್ಲಿ ಹೆವಿ ವೆಹಿಕಲ್ಗಳನ್ನು ಅತ್ತ ಸೋಮೇಶ್ವರ ಚೆಕ್ಪೋಸ್ಟ್ ಮತ್ತು ಇತ್ತ ಆಗುಂಬೆ ಚೆಕ್ ಪೋಸ್ಟ್ ಬಳಿಯಲ್ಲಿ ವಾಹನಗಳನ್ನು ಕೆಲಹೊತ್ತು ತಡೆ ಹಿಡಿಯಲಾಗಿತ್ತು.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
ಆಗುಂಬೆ 8 ನೇ ತಿರುವಿನಲ್ಲಿ, ಟೈರ್ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ ನಿಂತ ಲಾರಿ https://t.co/xbGLgDwuZk pic.twitter.com/Be6KEPp9ST — malenadutoday.com (@CMalenadutoday) December 8, 2022