ಆಗುಂಬೆ 8 ನೇ ತಿರುವಿನಲ್ಲಿ, ಟೈರ್​ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ ನಿಂತ ಲಾರಿ

ಇನ್ನೂ ಅಪಘಾತ ಹಿನ್ನಲೆಯಲ್ಲಿ ಹೆವಿ ವೆಹಿಕಲ್​ಗಳನ್ನು ಅತ್ತ ಸೋಮೇಶ್ವರ ಚೆಕ್​ಪೋಸ್ಟ್ ಮತ್ತು ಇತ್ತ ಆಗುಂಬೆ ಚೆಕ್​ ಪೋಸ್ಟ್ ಬಳಿಯಲ್ಲಿ ವಾಹನಗಳನ್ನು ಕೆಲಹೊತ್ತು ತಡೆ ಹಿಡಿಯಲಾಗಿತ್ತು.

ಆಗುಂಬೆ 8 ನೇ ತಿರುವಿನಲ್ಲಿ, ಟೈರ್​ ಸ್ಫೋಟಗೊಂಡಿದ್ದರಿಂದ,  ದಾರಿಗೆ ಅಡ್ಡ ನಿಂತ ಲಾರಿ

ಶಿವಮೊಗ್ಗ   ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ (Agumbe ghat) ಘಾಟಿಯಲ್ಲಿ ಕೆಲವು ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಆಕಸ್ಮಿಕವಾಗಿ ಸಂಭವಿಸಿದ ಘಟನೆ

ಲಾರಿ ಟೈರ್​ ಸ್ಫೋಟ : ಆಗುಂಬೆ ಘಾಟಿಯಲ್ಲಿ ಲಾರಿಯೊಂದು ಟೈರ್​ ಸ್ಫೋಟಗೊಂಡಿದ್ದರಿಂದ, ತಿರುವಿನಲ್ಲಿಯೇ  ನಿಂತುಬಿಟ್ಟಿತ್ತು. ಘಾಟಿಯ 8 ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿತ್ತು. ಹೇರ್​ ಪಿನ್ ತಿರುವಿನಲ್ಲಿಯೇ, ಲಾರಿಯ ಹಿಂದಿನ ಟೈರ್ ಸ್ಫೋಟಗೊಂಡಿದ್ದರಿಂದ, ಹಿಂದಿನಿಂದ ಬಂದ ವಾಹನಗಳು ಮುಂದಕ್ಕೆ ಹೋಗಲಾಗದೇ ಪರದಾಡಿದವು, ಇನ್ನೂ ಮುಂದಿನ ಬರುತ್ತಿದ್ದ ವಾಹನಗಳಿಗೂ ವೆಹಿಕಲ್ ಟರ್ನ್​ ತೆಗೆದುಕೊಳ್ಳುವುದ ಕಷ್ಟಸಾಧ್ಯವಾಗಿತ್ತು. 

ಇದನ್ನು ಸಹ ಓದಿ : ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಕ್ರೇನ್​ ತರಿಸಿ ಲಾರಿ ತೆರವು : ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್​ ಲಾರಿಯನ್ನು ಪಕ್ಕಕ್ಕೆ ಝರಿಸಿದ್ದಾರೆ. ಬಳಿಕ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಆದಾಗ್ಯು ಟ್ರಾಫಿಕ್​ ಜಾಮ್​ನಿಂದಾಗಿ ಸುಮಾರು ಒಂದುವರೆ ಕಿಲೋಮೀಟರ್ ನಷ್ಟು ದೂರ ವಾಹನಗಳು ನಿಂತಿದ್ದವು. ಹೀಗಾಗಿ ಸಂಚಾರ ಸುಗಮಗೊಳ್ಳಲು ಸುಮಾರು ಹೊತ್ತು ಬೇಕಾಯ್ತು.

ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ

ಹೆವಿ ವೆಹಿಕಲ್​ಗಳಿಗೆ ತಡೆ : ಇನ್ನೂ ಅಪಘಾತ ಹಿನ್ನಲೆಯಲ್ಲಿ ಹೆವಿ ವೆಹಿಕಲ್​ಗಳನ್ನು ಅತ್ತ ಸೋಮೇಶ್ವರ ಚೆಕ್​ಪೋಸ್ಟ್ ಮತ್ತು ಇತ್ತ ಆಗುಂಬೆ ಚೆಕ್​ ಪೋಸ್ಟ್ ಬಳಿಯಲ್ಲಿ ವಾಹನಗಳನ್ನು ಕೆಲಹೊತ್ತು ತಡೆ ಹಿಡಿಯಲಾಗಿತ್ತು. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link