Anandapura Police Shelter Elderly Man ಆನಂದಪುರದಲ್ಲಿ ದಾರಿ ತಪ್ಪಿದ ವೃದ್ಧನಿಗೆ ಪೊಲೀಸ್ ಆಸರೆ: ಮಾನವೀಯ ಕಾರ್ಯಕ್ಕೆ ಶ್ಲಾಘನೆ!
Anandapura Police Shelter Elderly Man 112 ಪೊಲೀಸರಿಂದ ಅಸಹಾಯಕರಿಗೆ ಸಾಕಷ್ಟು ನೆರವಾಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಹೊಸನಗರ ತಾಲ್ಲೂಕು ಆನಂದಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವೃದ್ಧರೊಬ್ಬರು ವಿಳಾಸ ತಪ್ಪಿ ತಮ್ಮ ಮನೆಗೆ ಬಂದಿರುವುದಾಗಿ ದೂರುದಾರರೊಬ್ಬರು 112ಕ್ಕೆ ಕರೆ (112 Call) ಮಾಡಿ ತಿಳಿಸಿದ್ದರು. ವಿಷಯ ತಿಳಿದು ಸ್ತಳಕ್ಕೆ ತೆರಳಿದ ಇರ್ಆರ್ವಿ (ERV) ಸಿಬ್ಬಂದಿಗೆ ಅಲ್ಲಿ ವೃದ್ಧರೊಬ್ಬರ ಅಸಹಾಯಕ ಸ್ಥಿತಿ ಅರಿವಿಗೆ ಬಂದಿದೆ.

ದಾರಿ ತಪ್ಪಿ ಬಂದಿದ್ದ ವೃದ್ಧರ ಯೋಗಕ್ಷೇಮ ವಿಚಾರಿಸಿದ ಪೊಲೀಸರು ನಿಧಾನವಾಗಿ ಅವರ ವಿಳಾಸದ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ತುಮಕೂರಿನವರು (Tumakuru) ಎಂದು ತಿಳಿದುಬಂದಿದೆ. ತಡರಾತ್ರಿ ಆಗಿದ್ದರಿಂದ ಬಸ್ ವ್ಯವಸ್ಥೆ (Bus facility) ಇಲ್ಲದ ಕಾರಣ, ಆಶ್ರಯಕ್ಕೆ ಮನೆ ಬಳಿಗೆ ಬಂದಿರುವುದು ಗೊತ್ತಾಗಿದೆ. ಅಲ್ಲದೆ ಬೆಳಗ್ಗೆ ತುಮಕೂರಿಗೆ ತೆರಳುವುದಾಗಿ ವೃದ್ಧರು ಪೊಲೀಸರಿಗೆ ತಿಳಿಸಿದ್ದರು.
ಈ ನಿಟ್ಟಿನಲ್ಲಿ ಮಾನವೀಯ ನೆಲೆಯಲ್ಲಿ (Humanitarian grounds) ಯೋಜಿಸಿದ ಪೊಲೀಸರು ವೃದ್ಧನಿಗೆ ರಾತ್ರಿ ತಂಗಲು ಸೂಕ್ತ ವ್ಯವಸ್ಥೆ (Accommodation) ಕಲ್ಪಿಸಿದ್ದಾರೆ. ಅಲ್ಲದೆ, ಬೆಳಗ್ಗೆ ತುಮಕೂರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು..

