KARNATAKA NEWS/ ONLINE / Malenadu today/ Jun 25, 2023 SHIVAMOGGA NEWS
ಭದ್ರಾವತಿ ತಾಲ್ಲೂಕಿನ ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭದ್ರಾವತಿ ಪೊಲೀಸರು ಭೇದಿಸಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ಬೈಕ್ನ್ನ ಕಳ್ಳರು ಕಳ್ಳತನ ಮಾಡಿದ್ದರು ಈ ಸಂಬಂಧ 379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ತನಿಖಾ ತಂಡವು ದಿನಾಂಕ:24/6/2023 ರಂದು ಆರೋಪಿಯನ್ನ ಬಂಧಿಸಿದ್ಧಾರೆ. ಪ್ರಭು @ ಕೋಳಿ, 28 ವರ್ಷ, ಬೆಳಕಟ್ಟೆ ಗ್ರಾಮ ಶಿವಮೊಗ್ಗ ಬಂಧಿತ ಆರೋಪಿ.
ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ 01 ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 01 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 80,000/- ರೂ ಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಕೇವಲ 14 ಸೆಕೆಂಡ್ನಲ್ಲಿಯೇ ದಾಖಲೆ ಬರೆದ ಭದ್ರಾವತಿಯ 2 ನೇ ಕ್ಲಾಸ್ ಬಾಲಕ!
ಭದ್ರಾವತಿಯ ಬಾಲಕನೊಬ್ಬ ಕೇವಲ 14 ಸೆಕೆಂಡ್ನಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನ ಹೇಳುವ ಮೂಲಕ ರೆಕಾರ್ಡ್ ಬುಕ್ನಲ್ಲಿ ದಾಖಲೆ ಮೆರೆದಿದ್ಧಾನೆ. ಭದ್ರಾವತಿ ತಾಲ್ಲೂಕಿನ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ 2ನೇ ತರಗತಿ ವಿದ್ಯಾರ್ಥಿ ಸಿ. ವೀರ್ನಾರಾಯಣ್ಸಿಂಗ್ ಒಎಂಜಿ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಸಾಧನೆ ದಾಖಲಿಸಿದ್ದಾನೆ. ಈತನಿಗೆ ಇನ್ನೂ 7 ವರ್ಷ 3 ತಿಂಗಳು, ಈತ ಕೇವಲ 14 ಸೆಕೆಂಡ್ಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನು ಹೇಳಿದ್ದಾನೆ.
ಇದೇನು ಸುಲಭದ ಕೆಲಸ ಅಂದುಕೊಂಡವರು, ಟೈಮರ್ ಇಟ್ಟುಕೊಂಡು ಎಲ್ಲಾ ರಾಜ್ಯಗಳ ಹೆಸರನ್ನ ಹೇಳುವ ಪ್ರಯತ್ನ ನಡೆಸಬಹುದು.ಕಳೆದ ಏಪ್ರಿಲ್ನಲ್ಲಿ ಈ ಸಂಬಂಧ ದಾಖಲೆ ರೆಕಾರ್ಡ್ ಮಾಡಿದ್ದ ಬಾಲಕನಿಗೆ ಇದೀಗ ಪ್ರಮಾಣಪತ್ರ ದೊರಕಿದೆ. ವೀರ್ನಾರಾಯಣ್ಸಿಂಗ್ ತಾಲೂಕಿನ ದೇವರನರಸೀಪುರ ಗ್ರಾಮದ ನಿವಾಸಿಗಳಾದ ಸಿ. ಚರಣ್ಸಿಂಗ್ ಮತ್ತು ಆರ್. ದಿವ್ಯರಾಣಿ ದಂಪತಿ ಪುತ್ರನಾಗಿದ್ದಾನೆ.
