ಪೊಲೀಸ್ ಪ್ರಕಟಣೆ ! ಈ ವ್ಯಕ್ತಿಯ ಸುಳಿವು ಸಿಕ್ಕರೇ ತಕ್ಷಣವೇ ಪೊಲೀಸರಿಗೆ ಕರೆಮಾಡಿ ತಿಳಿಸಿ
A police release! Call the police immediately if you get a clue about this person.
KARNATAKA NEWS/ ONLINE / Malenadu today/ Jun 30, 2023 SHIVAMOGGA NEWS
ಶಿವಮೊಗ್ಗ ತಾಲ್ಲೂಕಿನ ಭದ್ರಾವತಿಯ ಜಿಂಕ್ ಲೈನ್ 7ನೇ ಕ್ರಾಸ್ ವಾಸಿ ಪೆರುಮಾಳ್ ಎಂಬುವವರ ಮಗ ವಿನೋದ್ಕುಮಾರ್ ಎಂಬ 33 ವರ್ಷದ ವ್ಯಕ್ತಿ ದಿನಾಂಕ 02/12/2022 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿಲ್ಲ. ಇವರ ಬಗ್ಗೆ ಸುಳಿವು ಸಿಕ್ಕರೇ ಮಾಹಿತಿ ನೀಡುವಂತೆ, ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ.
ವ್ಯಕ್ತಿಯ ಸುಳಿವು
ಈ ವ್ಯಕ್ತಿಯ ಚಹರೆ 5.8 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ದೂ.ಸಂ.: 08282-274313/ 266549/266252 ಗಳನ್ನು ಸಂಪರ್ಕಿಸಿ ಮಾಹಿತಿ ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.