ಹಿಡಿದು ಬ್ಯಾಗ್​ನಲ್ಲಿಟ್ಟಿದ್ದ ನಾಗರ ಹಾವು ಕಚ್ಚಿ ಸ್ನೇಕ್​ ನರೇಶ್ ಸಾವು!

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಚಿಕ್ಕಮಗಳೂರು/ ಜಿಲ್ಲೆಯಲ್ಲಿ ಹಾವು ಹಿಡಿಯುವ ತಜ್ಞರೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ಧಾರೆ.  ಸ್ನೇಕ್ ನರೇಶ್ (51) ಮೃತ ದುರ್ದೈವಿ.

ಇವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದರು, ತಾವೆ ಹಿಡಿದು ಇಟ್ಟಿದ್ದ ನಾಗರಹಾವು ಕಚ್ಚಿದ್ದರಿಂದ ಇವರು ಸಾವನ್ನಪ್ಪಿದ್ಧಾರೆ. 

ನಡೆದಿದ್ದೇನು?

ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್​ ಬಳಿಯಲ್ಲಿ ನಾಗರ ಹಾವೊಂದು ಕಾಣಸಿಕ್ಕಿತ್ತು. ಅದನ್ನ ಹಿಡಿದಿದ್ದ ಸ್ನೇಕ್​ ನರೇಶ್, ಮತ್ತೊಂದು ಹಾವನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ ತಮ್ಮ ಸ್ಕೂಟಿಯಲ್ಲಿ ಬ್ಯಾಗ್​ವೊಂದಕ್ಕೆ ಮೊದಲು ಹಿಡಿದಿದ್ದ ನಾಗರಹಾವನ್ನ ಹಾಕಿ ಇಟ್ಟಿದ್ದರು. 

ಇನ್ನೊಂದು ಹಾವನ್ನ ಹಿಡಿಯಲು ಹೋಗಿದ್ದ ವೇಳೆ ನರೇಶ್, ತಾವು ಸ್ಕೂಟಿಯಲ್ಲಿದ್ದ ಬ್ಯಾಗ್​ನ್ನ ತೆಗೆಯಲು ಮುಂದಾಗಿದ್ಧಾರೆ.  ಈ ವೇಳೇ ಅದರಲ್ಲಿದ್ದ ನಾಗರ ಹಾವು ನರೇಶ್​ರಿಗೆ ಕಚ್ಚಿದೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದರು. ಆದರೆ ಹಾವಿನ ವಿಷ ದೇಹದ ತುಂಬಾ ವ್ಯಾಪಿಸಿದ್ದರಿಂದ ನರೇಶ್ ಸಾವನ್ನಪ್ಪಿದ್ಧಾರೆ. 

 ಟೈಲರ್ ಆಗಿ ಕೆಲಸ ಮಾಡುತ್ತಿರುವ ಇವರು ಈ ಹಿಂದೊಮ್ಮೆ ವಿಧಾನಸಭಾ ಎಲೆಕ್ಷನ್​ಗೂ ನಿಂತು ಅಚ್ಚರಿ ಮೂಡಿಸಿದ್ದರು.  

Leave a Comment