ಶಿವಮೊಗ್ಗದಲ್ಲಿ ಚಿಕ್ಕಬಳ್ಳಾಪುರದ ಕಾರ್ಮಿಕ ಸಾವು! ಲಾರಿಯಿಂದ ರಾಡು ಇಳಿಸುವಾಗ ನಡೆಯಿತು ದುರಂತ

KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಶಿವಮೊಗ್ಗ/ ನಗರದ  ನಗರ ಹೊರವಲಯ ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಆವರಣದಲ್ಲಿ ಜೆಸಿಬಿಯಿಂದ ಕಬ್ಬಿಣದ ರಾಡುಗಳನ್ನು ಇಳಿಸುವಾಗ, ಕಬ್ಬಿಣ ಮೈಮೇಲೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಅವಧೂತರ ಹೆಸರಲ್ಲಿ ಗಂಡಾಂತರ ಮೆಸೇಜ್​ ಕಳುಹಿಸುತ್ತಿರುವ ಫೇಕ್​ ಅಕೌಂಟ್!

ಮೃತ ಕಾರ್ಮಿಕನನ್ನ  ಚಿಕ್ಕಬಳ್ಳಾಪುರದ ಗುರುಮೂರ್ತಿ (35) ಎಂದು ಗುರುತಿಸಲಾಗಿದೆ. ಈ ಸಂಬಂಧ  ತುಂಗಾನಗರ  ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯಿಂದ ರಾಡುಗಳನ್ನ ಇಳಿಸಲು ಜೆಸಿಬಿ ಬಳಲಾಗಿತ್ತು. ಜೆಸಿಬಿ ಚಾಲಕ, ಜೆಸಿಬಿ ಬಕೆಟ್​ ಬಳಸಿ,  ಲಾರಿಯಿಂದ ರಾಡುಗಳನ್ನ ಎಳೆದಿದ್ಧಾನೆ. ಈ ವೇಳೆ ಅಲ್ಲಿಯೆ ಲಾರಿ ಕೆಳಗೆ ನಿಂತಿದ್ದ ಗುರುಮೂರ್ತಿ ಮೈಮೇಲೆ ರಾಡುಗಳು ಬಿದ್ದಿವೆ. ಪರಿಣಾಮ ಗುರುಮೂರ್ತಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. 

 

 

Leave a Comment