ಶಿವಮೊಗ್ಗ ನಾಡಹಬ್ಬಕ್ಕೆ ಚಾಲನೆ | ಅಂಬಾರಿ ಹೊರಲ ಸಾಗರ ಸನ್ನದ್ಧ | ಇಲ್ಲಿದೆ ಓದಿ ಡಿಟೇಲ್ಸ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 3, 2024  |   ಶಿವಮೊಗ್ಗ ನವರಾತ್ರಿ ಉತ್ಸವ (ನಾಡಹಬ್ಬ ದಸರಾ)ಕ್ಕೆ ಸಕ್ರೆಬೈಲ್‌ ಆನೆ ಬಿಡಾರದ ಆನೆಗಳು ಬರುವುದು ನಿಕ್ಕಿಯಾಗಿದೆ. ಈ ಸಂಬಂಧ  ಸಕ್ರೆಬೈಲು ಆನೆ ಬಿಡಾರ ದಲ್ಲಿರುವ ಮೂರು ಗಂಡಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವದಲ್ಲಿ ಭಾಗವಹಿಸಲು ನಿನ್ನೆ ದಿನ ಅಧಿಕೃತ ಆಹ್ವಾನ ನೀಡಲಾಗಿದೆ. 

- Advertisement -

ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಅವರು ಸಾಗರ್‌, ಬಹದ್ದೂರ್‌ ಮತ್ತು ಬಾಲಣ್ಣ ಹೆಸರಿನ 3 ಗಂಡಾನೆಗಳಿಗೆ ಪೂಜೆ ಸಲ್ಲಿಸಿ ಅಧಿಕೃತ ಆಹ್ವಾನ ನೀಡಿದರು.  

ಇದೇ ಅಕ್ಟೋಬರ್‌ 12ರಂದು ಅಂಬಾರಿ ಮೆರವಣಿಗೆ ಶಿವಮೊಗ್ಗದಲ್ಲಿ ನಡೆಯಲಿದೆ. ಸಾಗರ್‌ ಆನೆಯು ಚಾಮುಂಡಿ ದೇವಿಯನ್ನು ಹೊತ್ತು ಅಂಬಾರಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾನೆ. ಈ ವೇಳೆ ಬಾಲಣ್ಣ ಹಾಗೂ ಬಹದ್ದೂರ್ ಸಾಗರ್‌ ಸಾಥ್‌ ನೀಡಲಿವೆ ಈ ಸಲ ಒಂದರ ಬೆನ್ನಿಗೆ ಇನ್ನೊಂದು ಆನೆ ಸಾಗಲಿದ್ದು, ಈಗಾಗಲೇ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ.   

Share This Article