Shivamogga Central Jail ಟೂತ್​ಪೇಸ್ಟ್​ ನಲ್ಲಿತ್ತು ಗಾಂಜಾ ! ಜೈಲಿಗೆ ಮಾಲ್​ ಕೊಡಲು ಹೋದವನು ಅಲ್ಲೆ ಅಂದರ್!

Malenadu Today

SHIVAMOGGA  |  Jan 15, 2024  | Shivamogga Central Jail     ಶಿವಮೊಗ್ಗ ಕೇಂದ್ರ ಕಾರಾಗೃಹ ಏಳು ಸುತ್ತಿನ ಕೋಟೆಯಂತಿದೆ. ಹಾಗಿದ್ರೂ ಆರೋಪಿಗಳ ಪರವಾದ ಆರೋಪಿಗಳು ಮಾದಕವಸ್ತುಗಳನ್ನ ಶಿವಮೊಗ್ಗ ಜೈಲ್​ನೊಳಗೆ ಪಾಸ್ ಮಾಡಲು ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಜೊತೆಯಲ್ಲಿ ಅಲ್ಲಿರುವ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬೀಳುತ್ತಿರುತ್ತಾರೆ. ಸದ್ಯ ಇದೇ ವಿಚಾರಕ್ಕೆ ಸಂಬಂಧ ಕೇಂದ್ರ ಕಾರಾಗೃಹ ಶಿವಮೊಗ್ಗ ಮುಖ್ಯ ಅದೀಕ್ಷಕರು ದೂರೊಂದನ್ನು ನೀಡಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. 

ಶಿವಮೊಗ್ಗ ಕೇಂದ್ರ ಕಾರಾಗೃಹ

ಕಳೆದ ಹನ್ನೊಂದರಂದು ನಡೆದ ಘಟನೆ. ಭದ್ರಾವತಿಯ ನಿವಾಸಿ ಔರಂಗಜೇಬ ಎಂಬವರ ಪುತ್ರ ತಯೀಬ್ ಎಂಬಾತ ಜೈಲಿನಲ್ಲಿದ್ದ ಗಣೇಶ ಎಂಬವರನ್ನ ನೋಡಲು ಬಂದಿದ್ದನಂತೆ. ಈ ವೇಳೆ ಆತನ ಬಳಿಯಲ್ಲಿದ್ದ ಪ್ಲಾಸ್ಟಿಕ್ ಕವರ್​ ಹಾಗೂ ಅದರಲ್ಲಿದ್ದ ವಸ್ತುಗಳನ್ನ ಕೆಎಸ್​ಐಎಸ್​ಎಫ್​  ಸಿಬ್ಬಂದಿ ಅಕ್ಸೆಸ್ ಕಂಟ್ರೋಲ್​ನಲ್ಲಿ ಪರಿಶೀಲಿಸಿದ್ಧಾರೆ. 

ಈ ವೇಳೆ ಆರೋಪಿ ತಂದಿದ್ದ ಟೂತ್​ಪೇಸ್ಟ್​ ನಲ್ಲಿ  ಅನುಮಾನಸ್ಪದ ವಸ್ತು ಇರುವುದು  X-Ray ಬ್ಯಾಗೇಜ್ ಸ್ಕ್ಯಾನರ್ ನಲ್ಲಿ ಗೊತ್ತಾಗಿದೆ. ಹಾಗಾಗಿ ಟೂತ್ ಪೇಸ್ಟ್​ ತೆಗೆದು ಪರಿಶೀಲಿಸಿದ್ದಾರೆ. ಈ ವೇಳೆ ಅದರಲ್ಲಿ ಸ್ಟ್ರಾಗಳು ಕಂಡು ಬಂದಿವೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. 

ತಕ್ಷಣ ಆರೋಪಿಯನ್ನು ಹಿಡಿದ  ಭದ್ರತಾ ಸಿಬ್ಬಂದಿಯು ಆರೋಪಿಯನ್ನು ತುಂಗಾನಗರ ಪೊಲೀಸ್ ಸ್ಟೇಷನ್​ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆತನ ವಿರುದ್ಧ ಕೇಸ್ ಆಗಿದ್ದು, ಜೈಲಿಗೆ ಮಾದಕವಸ್ತು ಸಾಗಿಸಲು ಬಂದು ಅದೇ ಜೈಲಿಗೆ ಅತಿಥಿಯಾಗಿದ್ದಾನೆ. 


Share This Article