ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಮೊದಲ ಸಲ ಹಾರಿದ ಏರ್​ ಆ್ಯಂಬುಲೆನ್ಸ್! ಗಾಂಧಿ ಬಜಾರ್ ನಿವಾಸಿ ಮಣಿಪಾಲ್ ಗೆ ಶಿಫ್ಟ್!

SHIVAMOGGA |  Jan 11, 2024  | ಯುವನಿಧಿ ಕಾರ್ಯಕ್ರಮದ ನಡುವೆ ಶಿವಮೊಗ್ಗದಲ್ಲೊಂದು ವಿಶೇಷ ಘಟನೆ ನಡೆದಿದೆ. ತುರ್ತು ಪರಿಸ್ಥಿತಿಯಲ್ಲಿ ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆ ಗೆ ಏರ್ ಆ್ಯಂಬುಲೆನ್ಸ್ ಮೂಲಕ ವ್ಯಕ್ತಿಯೊಬ್ಬರನ್ನು  ಶಿಫ್ಟ್ ಮಾಡಲಾಗಿದೆ. 

ಶಿವಮೊಗ್ಗ ನಗರದ ಗಾಂಧಿ ಬಜಾರ್​ ನ ಕುಚಲಕ್ಕಿ ಕೇರಿ ನಿವಾಸಿಯೊಬ್ಬರು ಕಳೆದ ಸೋಮವಾರ ತಮ್ಮ ಸಹೋದರನ ಜೊತೆ ವಾಕ್ ಮಾಡುವ ಕುಸಿದುಬಿದ್ದಿದ್ದರು. ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಆನಂತರ ಅವರನ್ನ ಶಿವಮೊಗ್ಗ ಮೆಟ್ರೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. 

ನಿನ್ನೆಯವರೆಗೂ ಮೆಟ್ರೋದಲ್ಲಿ ಒಳರೋಗಿಯಾಗಿ ಚೇತನ್​ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಅವರ ಸಹೋದರ ಚೆನ್ನೈ ನಲ್ಲಿನ ಮೂಲಗಳನ್ನು ಸಂಪರ್ಕಿಸಿ ಏರ್​ ಆ್ಯಂಬುಲೆನ್ಸ್ ಗೆ ವ್ಯವಸ್ಥೆ ಮಾಡಿದ್ದಾರೆ. ನಿನ್ನೆ ರಾತ್ರಿಯೇ ಏರ್​ ಆ್ಯಂಬುಲೆನ್ಸ್​ ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಆಗಮಿಸಿತ್ತು. 

ಆದರೆ ವಿಸಿಬಿಲಿಟಿ ಕಾರಣಕ್ಕಾಗಿ ಇವತ್ತು ಬೆಳಗ್ಗೆ 11 ಗಂಟೆಯವರೆಗೂ ಏರ್​ ಆ್ಯಂಬುಲೆನ್ಸ್​ ಶಿವಮೊಗ್ಗ ಏರ್​ಪೋರ್ಟ್​ ನಿಂದ ಹೊರಡಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಇವತ್ತು ಮಧ್ಯಾಹ್ನ 1.05 ನಿಮಿಷಕ್ಕೆ ಏರ್​ ಆ್ಯಂಬುಲೆನ್ಸ್​ನ ಮೂಲಕ ಚೇತನ್​ರವರನ್ನ ಶಿವಮೊಗ್ಗದಿಂದ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಕರೆದೊಯ್ಯಲಾಯ್ತು. 

ಅಲ್ಲಿಂದ ವಿಶೇಷ ಆ್ಯಂಬುಲೆನ್ಸ್ ಮೂಲಕ ಮಣಿಪಾಲ್​ನಲ್ಲಿರುವ ಆಸ್ಪತ್ರೆಗೆ ಚೇತನ್​ರವರನ್ನ ರವಾನೆ ಮಾಡಲಾಯ್ತು. ಅಲ್ಲಿ ಅವರಿಗೆ ತಕ್ಷಣವೆ ಚಿಕಿತ್ಸೆ ಆರಂಭಿಸಲಾಗಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. 

Leave a Comment