ಬೆಂಗಳೂರಿನಿಂದ ಶಿವಮೊಗ್ಗ KSRTC ಬಸ್​ ನಿಲ್ದಾಣಕ್ಕೆ ಬಂದಿಳಿದ ಮಹಿಳೆಗೆ ಎದುರಾಗಿತ್ತು ಶಾಕ್!

Malenadu Today

KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’

ಶಿವಮೊಗ್ಗ KSRTC  ಬಸ್ ನಿಲ್ದಾಣದಲ್ಲಿ ಮತ್ತೊಂದು ಘಟನೆ ನಡೆದಿದೆ. ಸಮರ್ಪಕ ಸುರಕ್ಷತಾ ವ್ಯವಸ್ಥೆಗಳಿಲ್ಲದ ಬಸ್​ ನಿಲ್ದಾಣದಲ್ಲಿ ಕಳ್ಳತನ ಮಾಡುವುದು ಸಲೀಸಾದ ಕೆಲಸವಾದಂತಿದೆ. ಇದಕ್ಕೆ ಪೂರಕವೆಂಬಂತೆ ಮತ್ತೊಬ್ಬರು ಪ್ರಯಾಣಿಕರು ತಮ್ಮ ಹಣ ಮೊಬೈಲ್ ಚಿನ್ನಾಭರಣ ಕಳೆದುಕೊಂಡಿದ್ದಾರೆ. 

ನಡೆದಿದ್ದೇನು?

ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಗರದ ತ್ಯಾಗರ್ತಿಯಲಿರುವ ತನ್ನ ತಾಯಿಯ ಮನೆಗೆ ಹೋಗಲು ಮಹಿಳೆಯೊಬ್ಬರು ಬೆಂಗಳೂರಿನಿಂದ ಕೆಎಸ್​ಆರ್​ಟಿಸಿ ಬಸ್​​ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಲ್ಲಿಂದ ಸಂಜೆ: 04-15 ಗಂಟೆ ಸಮಯದಲ್ಲಿ, ಸಾಗರದ ಕಡೆಗೆ ಹೋಗುವ ಕೆ.ಎಸ್‌.ಆರ್.ಟಿ.ಸಿ ಬಸ್‌  ಬಸ್​  ಹತ್ತಿ ಟಿಕೆಟ್ ಮಾಡಿಸಲು ಮುಂದಾಗಿದ್ದಾರೆ. 

ಈ ವೇಳೆ ಬ್ಯಾಗ್​  ಜಿಪ್ ತೆರೆದು ನೋಡಿದರೆ, ಅದರಲ್ಲಿದ್ದ  ಪ್ಲರ್ಸ್ ಕಾಣಿಸಿಲ್ಲ. ಗಾಬರಿಗೊಂಡು ದೊಡ್ಡಪೇಟೆ ಪೊಲೀಸ್ ಸ್ಟೇಷನ್ (Doddapete Police Station) ಗೆ ದೂರು ನೀಡಿದ್ದಾರೆ. ಕಳ್ಳರು ಮಹಿಳೆಯ ಬ್ಯಾಗ್​ನಲ್ಲಿದ್ದ  61000/- ರೂ ಬೆಲೆ ಬಾಳುವ  ಬಂಗಾರದ ಒಡವೆ  ಹಾಗು 14000/-ರೂ ನಗದು ಹಣ ಮತ್ತು ಒಂದು ನೋಕಿಯಾ ಕಿ ಪ್ಯಾಡ್ ಮೊಬೈಲನ್ನು ಪರ್ಸ್ ಕದ್ದೊಯ್ದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. 

ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

Share This Article